ಐಪಿಎಲ್‌ ವೇಳಾಪಟ್ಟಿ ವಿಳಂಬಕ್ಕೆ ಏನು ಕಾರಣ?


Team Udayavani, Aug 26, 2020, 6:12 PM IST

ಐಪಿಎಲ್‌ ವೇಳಾಪಟ್ಟಿ ವಿಳಂಬಕ್ಕೆ ಏನು ಕಾರಣ?

ಮುಂಬಯಿ: ಯುಎಇಯಲ್ಲಿ ಐಪಿಎಲ್‌ ಪಂದ್ಯಾವಳಿಗೆ ವೇದಿಕೆ ಸಜ್ಜುಗೊಂಡಿದೆ. ಸೆ. 19ರಿಂದ ಈ ಬಾರಿಯ ಹಣಾಹಣಿ ಮೊದಲ್ಗೊಳ್ಳಲಿದ್ದು, ಅಭಿಮಾನಿಗಳು ತುದಿಗಾಲಲ್ಲಿ ನಿಂತಿದ್ದಾರೆ. ಆದರೆ ಇನ್ನೂ ವೇಳಾಪಟ್ಟಿ ಬಿಡುಗಡೆ ಆಗದಿರುವುದು ಎಲ್ಲರ ಅಚ್ಚರಿಗೆ ಕಾರಣವಾಗಿದೆ. ಈ ವಾರಾಂತ್ಯದಲ್ಲಿ ವೇಳಾಪಟ್ಟಿ ಪ್ರಕಟಗೊಳ್ಳಬಹುದು ಎಂಬುದು ಐಪಿಎಲ್‌ ಅಧ್ಯಕ್ಷ ಬೃಜೇಶ್‌ ಪಟೇಲ್‌ ಹೇಳಿಕೆ. ಮೂಲಗಳ ಪ್ರಕಾರ ವೇಳಾಪಟ್ಟಿ ವಿಳಂಬಕ್ಕೆ ಎರಡು ಕಾರಣ. ಒಂದು, ಅರಬ್‌ ನಾಡಿನ ಕೋವಿಡ್‌ ನಿಯಾಮಾವಳಿ; ಮತ್ತೂಂದು, ಇಲ್ಲಿನ ಉರಿಬಿಸಿಲಿನ ವಾತಾವರಣ.

ಬೇರೆ ಬೇರೆ ನಿಯಮ
ಕೋವಿಡ್‌-19 ಸಂಬಂಧಿಸಿದಂತೆ ದುಬಾೖ ಮತ್ತು ಅಬುಧಾಬಿಯಲ್ಲಿ ಬೇರೆ ಬೇರೆ ನಿಯಮಗಳಿವೆ. ಅಬುಧಾಬಿಗೆ ತೆರಳುವ ಮುನ್ನ ಕ್ರಿಕೆಟಿಗರ ಮ್ಯಾಂಡಿಟರಿ ರ್ಯಾಪಿಡ್‌ ಟೆಸ್ಟ್‌ ನಡೆಸಬೇಕಾದುದು ಅನಿವಾರ್ಯ. ಇದು ಪ್ರತೀ ಸಲವೂ ಅನ್ವಯಿಸುತ್ತದೆ. ಆದ್ದರಿಂದ ಅಬುಧಾಬಿಯಲ್ಲಿ ಕಡಿಮೆ ಸಂಖ್ಯೆಯ ಪಂದ್ಯಗಳನ್ನು ಆಡಿಸುವುದು ಬಿಸಿಸಿಐ ಯೋಜನೆ. ಗಲ್ಫ್ ನಾಡಿನ ಹವಾಮಾನ ಕೂಡ ವೇಳಾಪಟ್ಟಿಯ ರಚನೆಯಲ್ಲಿ ನಿರ್ಣಾಯಕ ಪಾತ್ರ ವಹಿಸಲಿದೆ. ಇಲ್ಲಿನ ಸುಡು ಬಿಸಿಲಿನ ವಾತಾವರಣದಲ್ಲಿ ದಿನಕ್ಕೆ 2 ಪಂದ್ಯಗಳನ್ನು ಆಯೋಜಿಸುವುದು ದೊಡ್ಡ ಸವಾಲಾಗಿ ಪರಿಣಮಿಸಿದೆ. ಸಂಜೆ ಬಳಿಕ ತಣ್ಣಗಿನ ವಾತಾವರಣ ಇದ್ದರೂ ಅಪರಾಹ್ನ ಇದೇ ಸ್ಥಿತಿ ಇರದು. ಆಗ ಉರಿಬಿಸಿಲು ಕ್ರಿಕೆಟಿಗರನ್ನು ಕಾಡಲಿದೆ.

ಎರಡು ಪಂದ್ಯಗಳ ಸವಾಲು
ಅಲ್ಲದೇ ಪಂದ್ಯಗಳನ್ನು ಭಾರತೀಯ ಕಾಲಮಾನಕ್ಕೆ ಹೊಂದಿಸಿಕೊಳ್ಳಬೇಕಾದ ಇನ್ನೊಂದು ಸವಾಲು ಕೂಡ ಇದೆ. ಯುಎಇ ಸಮಯಕ್ಕಿಂತ ಭಾರತ 1.30 ಗಂಟೆ ಮುಂದಿದೆ. ಇಲ್ಲಿ 7.30ರ ಪಂದ್ಯ ಅಲ್ಲಿ 6 ಗಂಟೆಗೆ ಆರಂಭವಾಗಬೇಕಾಗುತ್ತದೆ. ಆ ಸಮಯದಲ್ಲೂ ಬಿಸಿಲಿನ ತೀವ್ರತೆ ಇರುತ್ತದೆ. ಅಪರಾಹ್ನದ ಪಂದ್ಯ ಅಲ್ಲಿ 2 ಗಂಟೆಗೆ ಶುರುವಾಗುತ್ತದೆ. ಹೀಗಾಗಿ ದಿನಕ್ಕೆ ಎರಡು ಪಂದ್ಯಗಳನ್ನು ಆಯೋಜಿಸುವುದು ಹೇಗೆ ಎಂಬ ಬಗ್ಗೆಯೂ ಯೋಚಿಸಬೇಕಾಗುತ್ತದೆ. ಪ್ರಯಾಣ ನಿರ್ಬಂಧ ಹಾಗೂ ಜೈವಿಕ ಸುರಕ್ಷಾ ನಿಯಮಗಳ ಕಾರಣ ಈ ಐಪಿಎಲ್‌ ಉದ್ಘಾಟನಾ ಹಾಗೂ ಸಮಾರೋಪ ಸಮಾರಂಭವನ್ನು ನಡೆಸದಿರಲು ಬಿಸಿಸಿಐ ಈಗಾಗಲೇ ತೀರ್ಮಾನಿಸಿದೆ.

ಟಾಪ್ ನ್ಯೂಸ್

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-rerwer

IPL; ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ

28

Athletics: ಕಿರಿಯರ ಏಷ್ಯನ್‌ ಆ್ಯತ್ಲೆಟಿಕ್ಸ್‌  ಜಾವೆಲಿನ್‌ನಲ್ಲಿ ದೀಪಾಂಶುಗೆ ಬಂಗಾರ

Gukesh: ಚಾಂಪಿಯನ್‌ ಗುಕೇಶ್‌ಗೆ ಭವ್ಯ ಸ್ವಾಗತ

Gukesh: ಚಾಂಪಿಯನ್‌ ಗುಕೇಶ್‌ಗೆ ಭವ್ಯ ಸ್ವಾಗತ

IPL: ಎಲ್ಲೆ ಮೀರಿ ವಿಕೆಟ್‌ ಸಂಭ್ರಮಾಚರಣೆಡೆಲ್ಲಿ ವೇಗಿ ರಸಿಕ್‌ ಸಲಾಂಗೆ ಛೀಮಾರಿ

IPL: ಎಲ್ಲೆ ಮೀರಿ ವಿಕೆಟ್‌ ಸಂಭ್ರಮಾಚರಣೆಡೆಲ್ಲಿ ವೇಗಿ ರಸಿಕ್‌ ಸಲಾಂಗೆ ಛೀಮಾರಿ

IPL: ಇಂಪ್ಯಾಕ್ಟ್ ಪ್ಲೇಯರ್‌ ನಿಯಮಕ್ಕೆ ಅಕ್ಷರ್‌ ಪಟೇಲ್‌ ಕೂಡ ವಿರೋಧ

IPL: ಇಂಪ್ಯಾಕ್ಟ್ ಪ್ಲೇಯರ್‌ ನಿಯಮಕ್ಕೆ ಅಕ್ಷರ್‌ ಪಟೇಲ್‌ ಕೂಡ ವಿರೋಧ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.