ಕಬಾಬ್ಗಾಗಿ ಪಾಕ್ನಲ್ಲಿ ಭದ್ರತಾ ಪಡೆಯನ್ನೇ ವಂಚಿಸಿದ ಗಂಗೂಲಿ!
Team Udayavani, Dec 29, 2019, 11:03 PM IST
ಕೋಲ್ಕತಾ: ಪಾಕಿಸ್ಥಾನ ಕ್ರಿಕೆಟ್ ಸರಣಿಗೆ ತೆರಳಿದ್ದ ಸೌರವ್ ಗಂಗೂಲಿ ಅಲ್ಲಿನ ಭದ್ರತಾ ಪಡೆಗಳ ಕಣ್ತಪ್ಪಿಸಿ ಪಾಕ್ ಬೀದಿಯಲ್ಲಿ ಓಡಾಡಿ ತನಗಿಷ್ಟವಾದ ತಿಂಡಿ ತಿನಿಸನ್ನು ತಿಂದು ಸ್ನೇಹಿತರ ಜತೆಗೆ ಮಜಾ ಮಾಡಿರುವ ಕುತೂಹಲಕಾರಿ ಕತೆಯನ್ನು ಬಿಚ್ಚಿಟ್ಟಿದ್ದಾರೆ.
“2004ರಲ್ಲಿನ ಭಾರತ ಕ್ರಿಕೆಟ್ ತಂಡ ಪಾಕಿಸ್ಥಾನ ಪ್ರವಾಸಕ್ಕೆ ತೆರಳಿದಾಗ ನಡೆದ ಘಟನೆ ಇದು. ಉಳಿಯಲು ಪಾಕ್ನ ಖ್ಯಾತ ಪಂಚತಾರಾ ಹೊಟೇಲ್ನಲ್ಲಿ ವ್ಯವಸ್ಥೆ ಮಾಡಲಾಗಿತ್ತು. ನಮ್ಮ ರಕ್ಷಣೆಗಾಗಿ ಭದ್ರತಾ ಪಡೆಗಳನ್ನು ಹೊಟೇಲ್ ಸುತ್ತಲೂ ನಿಯೋಜಿಸಲಾಗಿತ್ತು. “ಟೈಗರ್’ ಎಂದು ಈ ಭದ್ರತಾ ಪಡೆಗಳನ್ನು ಕರೆಯಲಾಗುತ್ತಿತ್ತು. ಮೊದಲ ದಿನ ಕೊಠಡಿ ಬಾಗಿಲಲ್ಲೇ ಟೈಗರ್ ನಿಂತಿದ್ದರು. ಇಬ್ಬರು ಸಿಬಂದಿಗಳ ಕೈಯಲ್ಲಿ ಎಕೆ 47 ಗನ್ಗಳಿದ್ದವು. ನಾನು ಸ್ಥಳೀಯ ಮ್ಯಾನೇಜರ್ಗೆ ತಿಳಿಸಿ, ಭದ್ರತಾ ಸಿಬಂದಿಗಳನ್ನು ಕೊಠಡಿಯ ಎದುರಲ್ಲೇ ನಿಲ್ಲಿಸುವುದು ಬೇಡ, ಇವರನ್ನು ಹೊಟೇಲ್ ಲಾಬಿಯಲ್ಲಿ ಹಾಕಿ. ಬೆಳಗ್ಗೆ ಎದ್ದೊಡನೆ ಎಕೆ 47 ಗನ್ ನೋಡುವುದಕ್ಕೆ ಕಷ್ಟವಾಗುತ್ತಿದೆ. ಎಲ್ಲಾದರೂ ಮಿಸ್ ಫೈಯರ್ ಆದರೆ ನಮ್ಮ ಗತಿ ಏನು ಎಂದು ತಮಾಷೆಯಾಗಿಯೇ ಹೇಳಿದ್ದೆ…’
“ಅವರು ನನ್ನ ಮಾತನ್ನು ನಗುಮೊಗದಿಂದಲೇ ಪುರಸ್ಕರಿಸಿ ಹೊಟೇಲ್ ಲಾಬಿಗೆ ಭದ್ರತಾ ಪಡೆಯನ್ನು ವರ್ಗಾಯಿಸಿದರು. ಅನಂತರ ಹೊಟೇಲ್ನಿಂದ ತಪ್ಪಿಸಿಕೊಂಡು ಪಾಕ್ ಬೀದಿಗೆ ಬಂದು ಕಬಾಬ್ ತಿನ್ನತೊಡಗಿದೆ. ಆಗ ಟೀವಿ ಆ್ಯಂಕರ್ ರಾಜ್ದೀಪ್ ಸರ್ದೇಸಾಯಿ ಕೈಗೆ ಸಿಕ್ಕಿಬಿದ್ದೆ. ಪಾಕ್ ಬೀದಿಯಲ್ಲಿ ಕಬಾಬ್ ತಿಂದ ಭಾರತದ ನಾಯಕ ಎಂದು ಅವರು ನನ್ನನ್ನು ಸಂದರ್ಶನ ಮಾಡಿದ ಸಂದರ್ಭದಲ್ಲಿ ಹೇಳಿದ್ದರು’ ಎಂದು ಗಂಗೂಲಿ ಅಂದಿನ ಘಟನೆಯನ್ನು ಬಿಚ್ಚಿಟ್ಟರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!
Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ
Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..
T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?
ನರಗುಂದ: ಸಮಾಜದಲ್ಲಿ ದೇವಸ್ಥಾನಗಳು ಭಕ್ತಿಯ ಸಂಗಮ- ಶಾಂತಲಿಂಗ ಸ್ವಾಮೀಜಿ