ಹಾಕಿ: ಒಲಿಂಪಿಕ್‌ ಚಿನ್ನವಿಲ್ಲದೆ 40 ವರ್ಷ! ; 1980ರ ಮಾಸ್ಕೊ ಕೂಟದ ಬಂಗಾರವೇ ಕೊನೆಯದು…


Team Udayavani, Jul 29, 2020, 11:41 PM IST

ಹಾಕಿ: ಒಲಿಂಪಿಕ್‌ ಚಿನ್ನವಿಲ್ಲದೆ 40 ವರ್ಷ! ; 1980ರ ಮಾಸ್ಕೊ ಕೂಟದ ಬಂಗಾರವೇ ಕೊನೆಯದು…

ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used

ಹೊಸದಿಲ್ಲಿ: ಒಲಿಂಪಿಕ್ಸ್‌ ಹಾಕಿಯೆಂದರೆ ಭಾರತವೇ ಕಿಂಗ್‌ ಎಂಬ ಕಾಲ ಒಂದಿತ್ತು.

1928ರಿಂದ ಮೊದಲ್ಗೊಂಡು ಎಂಟು ಚಿನ್ನ, ಒಂದು ಬೆಳ್ಳಿ, ಎರಡು ಕಂಚು ಹೆದ್ದ ಹೆಗ್ಗಳಿಕೆ ಭಾರತದ್ದು.

ಇದರಲ್ಲಿ 1928-1956ರ ಅವಧಿಯಲ್ಲಿ ಸತತ ಆರು ಸಲ ಕಿರೀಟ ಏರಿಸಿಕೊಂಡದ್ದು ಭಾರತದ ಅಸಾಮಾನ್ಯ ಸಾಧನೆಯೇ ಆಗಿದೆ.

ಆದರೆ 1980ರ ಬಳಿಕ ಭಾರತೀಯ ಹಾಕಿಗೆ ಪದಕದ ತೀವ್ರ ಬರಗಾಲ ಬಡಿದಿದೆ.

ಅಂದಿನ ಮಾಸ್ಕೊ ಒಲಿಂಪಿಕ್ಸ್‌ ಬಳಿಕ ಚಿನ್ನವಿರಲಿ, ಕನಿಷ್ಠ ಕಂಚು ಕೂಡ ಗೆಲ್ಲಲು ಭಾರತಕ್ಕೆ ಸಾಧ್ಯವಾಗಿಲ್ಲ.

1980ರಲ್ಲಿ ಸ್ಪೇನ್‌ ತಂಡವನ್ನು 4-3 ಅಂತರದಿಂದ ಮಣಿಸುವ ಮೂಲಕ ಭಾರತ ಬಂಗಾರಕ್ಕೆ ಮುತ್ತಿಕ್ಕಿತ್ತು. 1980ರ ಜುಲೈ 29ರಂದು ಭಾರತಕ್ಕೆ ಈ ಪದಕ ಒಲಿದಿತ್ತು. ಬುಧವಾರ ಇದಕ್ಕೆ ಭರ್ತಿ 40 ವರ್ಷ ತುಂಬಿತು.

ಆರೇ ತಂಡಗಳ ಸ್ಪರ್ಧೆ
ಆದರೆ ಇದೇನೂ ಹೆಗ್ಗಳಿಕೆಯ ಪದಕವಾಗಿರಲಿಲ್ಲ. ಅಂದಿನ ಮಾಸ್ಕೊ ಕೂಟಕ್ಕೆ ಬಹಳಷ್ಟು ದೇಶಗಳು ಬಹಿಷ್ಕಾರ ಹಾಕಿದ್ದವು. ಹಾಕಿಯಲ್ಲಿ ಕಣಕ್ಕಿಳಿದದ್ದು 6 ತಂಡಗಳು ಮಾತ್ರ! ಭಾರತ, ಸ್ಪೇನ್‌ ಹೊರತುಪಡಿಸಿ ಉಳಿದೆಲ್ಲವೂ ಲೆಕ್ಕದ ಭರ್ತಿಯ ತಂಡಗಳಾಗಿದ್ದವು. ಇವುಗಳೆಂದರೆ ಪೋಲೆಂಡ್‌, ಕ್ಯೂಬಾ, ತಾಂಜಾನಿಯಾ ಮತ್ತು ಆತಿಥೇಯ ರಶ್ಯ.

ದುರ್ಬಲ ತಾಂಜಾನಿಯಾವನ್ನು 18-0 ಗೋಲುಗಳಿಂದ ಮಣಿಸಿದ ಭಾರತ ಭರ್ಜರಿ ಆರಂಭ ಮಾಡಿತು. ಆದರೆ ಪೋಲೆಂಡ್‌ ಮತ್ತು ಸ್ಪೇನ್‌ ವಿರುದ್ಧ ಡ್ರಾ ಸಾಧಿಸಿತು. ಬಳಿಕ ಕ್ಯೂಬಾವನ್ನು 13-0 ಅಂತರದಿಂದ, ರಶ್ಯವನ್ನು 4-2ರಿಂದ ಹಿಮ್ಮೆಟ್ಟಿಸಿ ಪ್ರಶಸ್ತಿ ಸುತ್ತಿಗೆ ಲಗ್ಗೆ ಇರಿಸಿತು.

ರೋಚಕ ಹಣಾಹಣಿ
ಫೈನಲ್‌ ಹಣಾಹಣಿಯ ಮೊದಲಾರ್ಧದಲ್ಲಿ 2-0 ಮುನ್ನಡೆ ಸಾಧಿಸಿದ ಭಾರತ 16 ವರ್ಷಗಳ ಬಳಿಕ ಚಿನ್ನವನ್ನು ಖಾತ್ರಿಪಡಿಸಿತು. ಎರಡೂ ಗೋಲುಗಳನ್ನು ಸುರೀಂದರ್‌ ಸಿಂಗ್‌ ಸೋಧಿ ಬಾರಿಸಿದ್ದರು. ವಿರಾಮದ ಆರಂಭದಲ್ಲೇ ಎಂ.ಕೆ. ಕೌಶಿಕ್‌ ಮತ್ತೂಂದು ಗೋಲು ಸಿಡಿಸಿದರು. ಬಳಿಕ ಸ್ಪೇನ್‌ ನಾಯಕ ಜುವಾನ್‌ ಅಮಟ್‌ 2 ಗೋಲು ಬಾರಿಸಿ ಹೋರಾಟ ಜಾರಿಯಲ್ಲಿರಿಸಿದರು. ಬಳಿಕ ಮೊಹಮ್ಮದ್‌ ಶಾಹಿದ್‌ 4ನೇ ಗೋಲಿನ ಕಾಣಿಕೆ ನೀಡಿದರು. ಅಮಟ್‌ ಹ್ಯಾಟ್ರಿಕ್‌ ಪೂರೈಸಿದರು. ಆದರೆ ಅದೃಷ್ಟ ವಿ. ಭಾಸ್ಕರನ್‌ ಬಳಗಕ್ಕೆ ಒಲಿದಿತ್ತು!

ಟೋಕಿಯೊದಲ್ಲಿ ಭಾರತದ ಹಾಕಿ ಸುವರ್ಣ ಯುಗ ಮರುಕಳಿಸೀತೇ ಎಂಬ ನಿರೀಕ್ಷೆಯೀಗ ಒಂದು ವರ್ಷ ಮುಂದೂಡಲ್ಪಟ್ಟಿದೆ.

ಟಾಪ್ ನ್ಯೂಸ್

RBI: ಏಪ್ರಿಲ್ 1 ರಂದು 2,000 ರೂ ಆರ್ ಬಿಐನಲ್ಲಿ ನೋಟುಗಳ ವಿನಿಮಯ/ಠೇವಣಿ ಸಾಧ್ಯವಿಲ್ಲ

RBI: ಏಪ್ರಿಲ್ 1 ರಂದು 2,000 ರೂ ಆರ್ ಬಿಐನಲ್ಲಿ ನೋಟುಗಳ ವಿನಿಮಯ/ಠೇವಣಿ ಸಾಧ್ಯವಿಲ್ಲ

11-

Inspiration: ಸ್ವಾಮಿ ಸ್ಮರಣಾನಂದ ಸೇವೆ ಎಲ್ಲರಿಗೂ ಸ್ಫೂರ್ತಿದಾಯಕ

ಸ್ಟಾರ್‌ ಸಿನ್ಮಾಗಳ ರಿಲೀಸ್‌ ಟೆನ್ಶನ್‌: ಬಿಡುಗಡೆ ದಿನಾಂಕ ಘೋಷಣೆಗೂ ಮೀನಮೇಷ

Sandalwood: ಸ್ಟಾರ್‌ ಸಿನ್ಮಾಗಳ ರಿಲೀಸ್‌ ಟೆನ್ಶನ್‌: ಬಿಡುಗಡೆ ದಿನಾಂಕ ಘೋಷಣೆಗೂ ಮೀನಮೇಷ

Ballari: ಏ.12ರಂದು ಕೈ ಅಭ್ಯರ್ಥಿ ಈ.ತುಕಾರಾಂ ನಾಮಪತ್ರ ಸಲ್ಲಿಕೆ

Ballari: ಏ.12ರಂದು ಕೈ ಅಭ್ಯರ್ಥಿ ಈ.ತುಕಾರಾಂ ನಾಮಪತ್ರ ಸಲ್ಲಿಕೆ

PM Modi spoke about AI with Bill Gates

ಬಿಲ್ ಗೇಟ್ಸ್‌ ಜತೆ ಮಾತುಕತೆಯಲ್ಲಿ ಪ್ರಧಾನಿ ಮೋದಿ ಎಐ ಚರ್ಚೆ

Jammu-Srinagar National Highway; A taxi rolled into a gorge

Jammu-Srinagar National Highway; ಕಮರಿಗೆ ಉರುಳಿದ ಟ್ಯಾಕ್ಸಿ; ಹತ್ತು ಜನರು ಸಾವು

Son claims Mukhtar Ansari was given ‘slow poison’

Banda; ಗ್ಯಾಂಗ್‌ಸ್ಟರ್‌ ಮುಖ್ತಾರ್ ಅನ್ಸಾರಿಗೆ ವಿಷಪ್ರಾಶನ: ಪುತ್ರನ ಆರೋಪ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kohli IPL 2024

IPL; ಇಂದು ಚಿನ್ನಸ್ವಾಮಿಯಲ್ಲಿ ಆರ್‌ಸಿಬಿ ಬಲೆಗೆ ಬೀಳುತ್ತಾ ಕೋಲ್ಕತಾ?

1-qeqewqeqwe

IPL ಉದ್ಘಾಟನ ಸಮಾರಂಭ ವೀಕ್ಷಣೆ: ಹೊಸ ದಾಖಲೆ

1-kkr

Kolkata Raiders ಕೋಚ್‌ ಬಗ್ಗೆ ಆಟಗಾರ ಡೇವಿಡ್‌ ವೀಸ್‌ ಆರೋಪ

1-addasd

Mumbai Indians: ಸೂರ್ಯಕುಮಾರ್‌ ಶೀಘ್ರ ಚೇತರಿಕೆ ಸಾಧ್ಯತೆ

1-eewqeeeqwewqewq

Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್‌, ಸ್ಟೋಯಿನಿಸ್‌, ಅಗರ್‌ ಹೊರಕ್ಕೆ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

RBI: ಏಪ್ರಿಲ್ 1 ರಂದು 2,000 ರೂ ಆರ್ ಬಿಐನಲ್ಲಿ ನೋಟುಗಳ ವಿನಿಮಯ/ಠೇವಣಿ ಸಾಧ್ಯವಿಲ್ಲ

RBI: ಏಪ್ರಿಲ್ 1 ರಂದು 2,000 ರೂ ಆರ್ ಬಿಐನಲ್ಲಿ ನೋಟುಗಳ ವಿನಿಮಯ/ಠೇವಣಿ ಸಾಧ್ಯವಿಲ್ಲ

12-kejriwal

Delhi CM Arvind Kejriwalಗೆ ಮತ್ತೆ 4 ದಿನ ಇ.ಡಿ. ಕಸ್ಟಡಿ

Belagavi: ಕಣಕುಂಬಿ ಚೆಕ್ ಪೋಸ್ಟ್’ನಲ್ಲಿ ದಾಖಲೆಯಿಲ್ಲದ 7.98 ಲಕ್ಷ ರೂ ವಶಕ್ಕೆ

Belagavi: ಕಣಕುಂಬಿ ಚೆಕ್ ಪೋಸ್ಟ್’ನಲ್ಲಿ ದಾಖಲೆಯಿಲ್ಲದ 7.98 ಲಕ್ಷ ರೂ ವಶಕ್ಕೆ

11-

Inspiration: ಸ್ವಾಮಿ ಸ್ಮರಣಾನಂದ ಸೇವೆ ಎಲ್ಲರಿಗೂ ಸ್ಫೂರ್ತಿದಾಯಕ

ಸ್ಟಾರ್‌ ಸಿನ್ಮಾಗಳ ರಿಲೀಸ್‌ ಟೆನ್ಶನ್‌: ಬಿಡುಗಡೆ ದಿನಾಂಕ ಘೋಷಣೆಗೂ ಮೀನಮೇಷ

Sandalwood: ಸ್ಟಾರ್‌ ಸಿನ್ಮಾಗಳ ರಿಲೀಸ್‌ ಟೆನ್ಶನ್‌: ಬಿಡುಗಡೆ ದಿನಾಂಕ ಘೋಷಣೆಗೂ ಮೀನಮೇಷ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.