ಧೋನಿಯನ್ನು ನಾನೇಕೆ ಟೀಕಿಸಲಿ: ಕುಲದೀಪ್
ಮಾಧ್ಯಮ ವರದಿ ವಿರುದ್ಧ ಕಿಡಿಕಾರಿದ ಸ್ಪಿನ್ನರ್
Team Udayavani, May 17, 2019, 6:00 AM IST
ಮುಂಬೈ: ಧೋನಿಯನ್ನು ತಾನು ಟೀಕಿಸಿದ್ದೇನೆ ಎಂಬ ವರದಿಗಳು ಸುಳ್ಳು, ಕೆಲವು ವ್ಯಕ್ತಿಗಳು ವದಂತಿ ಹಬ್ಬಿಸುವುದನ್ನು ಬಹಳ ಸಂಭ್ರಮಿಸುತ್ತಾರೆ ಎಂದು ಭಾರತದ ಖ್ಯಾತ ಎಡಗೈ ಲೆಗ್ಸ್ಪಿನ್ನರ್ ಕುಲದೀಪ್ ಯಾದವ್ ಕಿಡಿಕಾರಿದ್ದಾರೆ.
ಇತ್ತೀಚೆಗೆ ನಡೆದ ಕಾರ್ಯಕ್ರಮವೊಂದರಲ್ಲಿ ಅನೌಪಚಾರಿಕವಾಗಿ ಮಾತನಾಡಿದ್ದ ಅವರು, ಧೋನಿ ಹಲವು ತಪ್ಪು ಮಾಡುತ್ತಾರೆ. ಆದರೆ ಅವರಿಗೆ ಅದನ್ನು ಹೇಳಲು ಸಾಧ್ಯವಿಲ್ಲ. ಅವರು ಬಹುತೇಕ ಮಾತೇ ಆಡುವುದಿಲ್ಲ. ಓವರ್ಗಳ ಮಧ್ಯೆ ಮಾತ್ರ ಮಾತನಾಡುತ್ತಾರೆ. ಆಗ ಏನಾದರೂ ಅನಿಸಿದರೆ ಹೇಳುತ್ತಾರೆ ಎಂದು ಹೇಳಿದ್ದರು ಎಂದು ವರದಿಗಳಾಗಿದ್ದವು. ಇದು ಸುದ್ದಿಯಾಗುತ್ತಲೇ ಆಕ್ರೋಶಗೊಂಡಿರುವ ಕುಲದೀಪ್, ತಾನು ಅಂತಹ ಸಂದರ್ಶನವನ್ನು ಯಾರಿಗೂ ನೀಡಿಯೇ ಇಲ್ಲ. ಅದು ಹೇಗೆ ಇಂತಹ ವರದಿಗಳನ್ನು ಹಬ್ಬಿಸುತ್ತಾರೊ ಗೊತ್ತಾಗುವುದಿಲ್ಲ ಎಂದು ನೊಂದುಕೊಂಡಿದ್ದಾರೆ.
ಈ ಬಗ್ಗೆ ಆಂಗ್ಲ ಮಾಧ್ಯಮವೊಂದಕ್ಕೆ ಪ್ರತಿಕ್ರಿಯೆ ನೀಡಿದ ಯಾದವ್, ಎಂ.ಎಸ್.ಧೋನಿ ಹಿರಿಯ ಕ್ರಿಕೆಟಿಗ, ಅವರ ಸಲಹೆಗಳು ನನಗೆ ಮಾತ್ರವಲ್ಲ ತಂಡದ ಎಲ್ಲರಿಗೂ ಬಹುಮೌಲ್ಯಯುತವಾಗಿವೆ. ಅವರು ವಿಕೆಟ್ ಹಿಂದುಗಡೆ ಇದ್ದರೆ, ನಮ್ಮ ಕೆಲಸ ಬಹಳ ಸಲೀಸಾಗುತ್ತದೆ. ಅದನ್ನು ಯಾರೂ ಬದಲಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟೀಕರಿಸಿದ್ದಾರೆ. ಅಲ್ಲದೇ ಧೋನಿಯ ಸಾಮರ್ಥ್ಯವನ್ನು ಹೊಗಳುವ ಮೂಲಕ, ತಾನು ಅವರ ಬಗ್ಗೆ ಮಾತನಾಡಲು ಸಾಧ್ಯವೇ ಇಲ್ಲ ಎಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL; ಆರ್ ಸಿಬಿ ಕಪ್ ಗೆಲ್ಲಬೇಕಾದರೆ ಮೊದಲು….: ರಾಬಿನ್ ಉತ್ತಪ್ಪ ಹೇಳಿದ್ದೇನು?
IPL 2024; ಎಂ.ಎಸ್ ಧೋನಿ ದಾಖಲೆ ಮುರಿದ ಕೆ.ಎಲ್ ರಾಹುಲ್
MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್
Delhi ತವರಿಗೆ ಮರಳಿದ ಖುಷಿಯಲ್ಲಿ: ಕೋಟ್ಲಾದಲ್ಲಿ ಹೈದರಾಬಾದ್ ವಿರುದ್ಧ ಮುಖಾಮುಖಿ
RCB ; ರವಿವಾರ ಕೆಕೆಆರ್ ವಿರುದ್ಧ ಈಡನ್ನಲ್ಲಿ ಗೋ ಗ್ರೀನ್ ಗೇಮ್
MUST WATCH
ಹೊಸ ಸೇರ್ಪಡೆ
Bidar; ಖೂಬಾ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವೆ: ಈಶ್ವರ್ ಖಂಡ್ರೆ
Neha ಹತ್ಯೆ ಪ್ರಕರಣ; ಎನ್ಐಎ ತನಿಖೆ; ಮಹಿಳೆಯರು ಕಿರುಕತ್ತಿ ಹೊಂದಲು ಅವಕಾಶ:ವಿಎಚ್ಪಿ ಆಗ್ರಹ
ಅಂಡಾಶಯದ ಕ್ಯಾನ್ಸರ್ ನಿಂದ 30 ರ ಹರೆಯದಲ್ಲಿ ಖ್ಯಾತ ಫ್ಯಾಷನ್ ಇನ್ ಫ್ಲುಯೆನ್ಸರ್ ನಿಧನ
Nalkane Ayama Movie Review; ದೆವ್ವದ ಕಾಟದ ಹಿಂದೊಂದು ಅಸಲಿ ಆಟ!
IPL; ಆರ್ ಸಿಬಿ ಕಪ್ ಗೆಲ್ಲಬೇಕಾದರೆ ಮೊದಲು….: ರಾಬಿನ್ ಉತ್ತಪ್ಪ ಹೇಳಿದ್ದೇನು?