ರಾಜ್ಯದ ಕೆ.ಎಲ್‌.ರಾಹುಲ್‌ಗೆ ಮತ್ತೂಂದು ಅವಕಾಶ ಸಿಗುತ್ತಾ?


Team Udayavani, Feb 15, 2019, 4:57 AM IST

k-l-rahul.jpg

ಮುಂಬೈ: ವಿಶ್ವಕಪ್‌ ಪಂದ್ಯಾವಳಿಗೂ ಮುನ್ನ ತವರಿನಲ್ಲಿ ಕೊನೆಯ ಅಂತಾರಾಷ್ಟ್ರೀಯ ಸರಣಿ ಆಡಲಿರುವ ಭಾರತ, ಇನ್ನು ಕೆಲವೇ ದಿನಗಳಲ್ಲಿ ಆಸ್ಟ್ರೇಲಿಯ ತಂಡವನ್ನು ಎದುರಿಸಲಿದೆ. ಕಾಂಗರೂ ವಿರುದ್ಧ 2 ಟಿ20 ಮತ್ತು 5 ಏಕದಿನ ಪಂದ್ಯಗಳ ಸರಣಿಯಲ್ಲಿ ಪಾಲ್ಗೊಳ್ಳಲಿದೆ. ಇದಕ್ಕಾಗಿ ಶುಕ್ರವಾರ ಮುಂಬೈನಲ್ಲಿ ಸಭೆ ಸೇರಲಿರುವ ಆಯ್ಕೆಗಾರರು ತಂಡವನ್ನು ಪ್ರಕಟಿಸಲಿದ್ದಾರೆ.

ತೃತೀಯ ಆರಂಭಿಕನಾಗಿ ಮತ್ತೆ ಕೆ.ಎಲ್‌. ರಾಹುಲ್‌ ಅವರನ್ನು ಆರಿಸುವ ದಟ್ಟ ಸಾಧ್ಯತೆಗಳಿವೆ. ಫಾರ್ಮ್ ಕೊರತೆಯಿಂದ ಇತ್ತೀಚೆಗೆ ತಂಡದಿಂದ ಹೊರಬಿದ್ದಿದ್ದರೂ, ಅವರು ಪ್ರತಿಭಾವಂತನೆನ್ನುವುದು ಹಲವು ಬಾರಿ ಸಾಬೀತಾಗಿದೆ. ಜೊತೆಗೆ ತಂಡದ ವ್ಯವಸ್ಥಾಪಕ ಮಂಡಳಿ, ಮುಖ್ಯವಾಗಿ ನಾಯಕ ಕೊಹ್ಲಿಯ ಭರವಸೆ ವಿಶ್ವಾಸ ಹೊಂದಿದ್ದಾರೆ.

ಆದ್ದರಿಂದ ರಾಹುಲ್‌ಗೆ ಇನ್ನೊಂದು ಅವಕಾಶ ಸಿಗುವುದು ಖಚಿತ. ಇಲ್ಲಿ ರಾಹುಲ್‌ ಮಿಂಚಿದರೆ, ಅವರು ವಿಶ್ವಕಪ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇಲ್ಲವಾದರೆ ಬಹುತೇಕ ಭಾರತ ತಂಡದಲ್ಲಿ ಮತ್ತೆ ಆಡುವ ಆಸೆಯನ್ನು ಕೈಬಿಡಬೇಕಾಗುತ್ತದೆ. ಏಕದಿನ ಸರಣಿಗೂ ಮುನ್ನ ಆಡಲಾಗುವ 2 ಟಿ20 ಪಂದ್ಯಗಳಿಗೆ ರೋಹಿತ್‌ ಶರ್ಮ ಅವರಿಗೆ ವಿಶ್ರಾಂತಿ ನೀಡುವ ಸಾಧ್ಯತೆ ಇರುವುದರಿಂದ ರಾಹುಲ್‌ ಮರಳುವುದು ಸುಲಭವಾಗಿದೆ. ಅವರು ಧವನ್‌ ಜೊತೆಗೆ ಇನಿಂಗ್ಸ್‌ ಆರಂಭಿಸಬಹುದು.

ಎಡಗೈ ವೇಗಿ ಯಾರು?: ಯಾರು ಇತ್ತೀಚಿನ ಆಸ್ಟ್ರೇಲಿಯ, ನ್ಯೂಜಿಲೆಂಡ್‌ ಪ್ರವಾಸದಲ್ಲಿ ಏಕದಿನ ಸರಣಿ ಗೆದ್ದು ಹೊಸ ಭರವಸೆ ಮೂಡಿಸಿದರೂ, ಭಾರತ ತಂಡ ಕೆಲವು ವಿಭಾಗಗಳಲ್ಲಿ ಸಾಕಷ್ಟು ಸುಧಾರಣೆ ಕಾಣಲಿಕ್ಕಿದೆ. ಮುಖ್ಯವಾಗಿ ಎಡಗೈ ವೇಗಿಗಳ ಆಯ್ಕೆಯೊಂದು ಅಂತಿಮಗೊಳ್ಳಬೇಕಿದೆ. ಇತ್ತೀಚೆಗೆ ದೇಶಿ ಕ್ರಿಕೆಟ್‌ನಲ್ಲಿ ಮತ್ತೆ ಮಿಂಚಲಾರಂಭಿಸಿದ ಜೈದೇವ್‌ ಉನಾಡ್ಕತ್‌ ಮತ್ತು ಈಗಾಗಲೇ ತಂಡದಲ್ಲಿರುವ ಖಲೀಲ್‌ ಅಹ್ಮದ್‌ ರೇಸ್‌ನಲ್ಲಿದ್ದಾರೆ. ಇವರಲ್ಲಿ ಯಾರು ಆಯ್ಕೆ ಆಗಬಹುದೆಂಬುದೊಂದು ಕುತೂಹಲ. 2010ರಲ್ಲೇ ಭಾರತ ತಂಡಕ್ಕೆ ಬಂದರೂ ಉನಾಡ್ಕತ್‌ ನಿರಂತರವಾಗಿ ಆಡುವ ಬಳಗದಲ್ಲಿ ಕಾಣಿಸಿಕೊಂಡವರಲ್ಲ. ಈ ಬಾರಿ ರಣಜಿಯಲ್ಲಿ ಉತ್ತಮ ಬೌಲಿಂಗ್‌ ಫಾರ್ಮ್ ಪ್ರದರ್ಶಿಸಿದ ಅವರು ನಾಯಕನಾಗಿ ಸೌರಾಷ್ಟ್ರವನ್ನು ಫೈನಲಿಗೂ ಕೊಂಡೊಯ್ದಿದ್ದರು. ಹೀಗಾಗಿ ತಂಡಕ್ಕೆ ಮರಳಿದರೂ ಅಚ್ಚರಿ ಇಲ್ಲ.

2ನೇ ವಿಕೆಟ್‌ ಕೀಪರ್‌ ಯಾರು?: ತಜ್ಞ ಬ್ಯಾಟ್ಸಮನ್  ಮತ್ತು ದ್ವಿತೀಯ ವಿಕೆಟ್‌ ಕೀಪರ್‌ ಸ್ಥಾನಕ್ಕಾಗಿ ರಿಷಭ್‌ ಪಂತ್‌-ದಿನೇಶ್‌ ಕಾರ್ತಿಕ್‌ ನಡುವೆ ದೊಡ್ಡ ಹೋರಾಟ ಕಂಡುಬರುವುದು ಖಂಡಿತ. ಹಾಗೆಯೇ ವಿಶ್ರಾಂತಿಯಲ್ಲಿದ್ದ ವಿರಾಟ್‌ ಕೊಹ್ಲಿ, ಜಸ್‌ಪ್ರೀತ್‌ ಬುಮ್ರಾ ಮರಳಿರುವುದರಿಂದ ಹಿಂದಿನ ಸರಣಿಯಲ್ಲಿ ಆಡಿದ್ದ ಇಬ್ಬರು ಜಾಗ ಖಾಲಿ ಮಾಡಲೇಬೇಕಿದೆ.

13 ಆಟಗಾರರ ಆಯ್ಕೆ ಅಂತಿಮ: ಒಂದು ಮೂಲದ ಪ್ರಕಾರ ಆಯ್ಕೆಗಾರರು ಈಗಾಗಲೇ ವಿಶ್ವಕಪ್‌ಗಾಗಿ 13 ಆಟಗಾರನ್ನು ಗುರುತಿಸಿ ಇಟ್ಟಿದ್ದಾರೆ. ಇವರೆಂದರೆ ಕೊಹ್ಲಿ, ಧವನ್‌, ರೋಹಿತ್‌, ರಾಯುಡು, ಧೋನಿ, ಜಾಧವ್‌, ಪಾಂಡ್ಯ, ವಿಜಯ್‌ ಶಂಕರ್‌, ಚಹಲ್‌, ಕುಲದೀಪ್‌, ಭುವನೇಶ್ವರ್‌, ಬುಮ್ರಾ ಮತ್ತು ಶಮಿ. ಈ ಪಟ್ಟಿಗೆ ಇನ್ನೂ 3-4 ಆಟಗಾರರನ್ನು ಸೇರಿಸಿ ಅಂತಿಮ ತಂಡವನ್ನು ಐಸಿಸಿಗೆ ರವಾನಿಸಬೇಕಿದೆ. ಹೀಗಾಗಿ ಆಸ್ಟ್ರೇಲಿಯ ಸರಣಿಗಾಗಿ ನಡೆಯುವ ತಂಡದ ಆಯ್ಕೆ ಹೆಚ್ಚು ಸ್ಪರ್ಧಾತ್ಮಕವಾಗಿರುವುದರಲ್ಲಿ ಅನುಮಾನವಿಲ್ಲ

ಟಾಪ್ ನ್ಯೂಸ್

Amit Shah: 2024ರ ಚುನಾವಣೆಯಲ್ಲಿ ಎನ್‌ ಡಿಎಗೆ 400ಕ್ಕೂ ಅಧಿಕ ಸ್ಥಾನ ಖಚಿತ: ಶಾ

Amit Shah: 2024ರ ಚುನಾವಣೆಯಲ್ಲಿ ಎನ್‌ ಡಿಎಗೆ 400ಕ್ಕೂ ಅಧಿಕ ಸ್ಥಾನ ಖಚಿತ: ಶಾ

11

ಕ್ರಿಕೆಟ್‌ ಬಗ್ಗೆ ಕಿಂಚಿತ್ತೂ ಜ್ಞಾನವಿಲ್ಲದ ವ್ಯಕ್ತಿಗೆ ಡ್ರೀಮ್‌11ನಲ್ಲಿ ಒಲಿಯಿತು 1.5 ಕೋಟಿ

baba-ramdev

Patanjali ತಪ್ಪು ಜಾಹೀರಾತು; ಕ್ಷಮೆಯಾಚಿಸಿದ ಬಾಬಾ ರಾಮ್ ದೇವ್,ಬಾಲಕೃಷ್ಣ

Dr Rajkumar: ಇಂದು ರಾಜ್‌ 96ನೇ ಹುಟ್ಟು ಹಬ್ಬ; ಅರ್ಥಪೂರ್ಣ ಆಚರಣೆಗೆ ಅಭಿಮಾನಿಗಳ ಸಿದ್ಧತೆ

Dr Rajkumar: ಇಂದು ರಾಜ್‌ 96ನೇ ಹುಟ್ಟು ಹಬ್ಬ; ಅರ್ಥಪೂರ್ಣ ಆಚರಣೆಗೆ ಅಭಿಮಾನಿಗಳ ಸಿದ್ಧತೆ

ಅಶ್ಲೀಲ ವಿಡಿಯೋ ಮಾದರಿಯಲ್ಲಿ ಲೈಂಗಿಕ ಕ್ರಿಯೆಗೆ ಒತ್ತಾಯಿಸಿದ್ದಕ್ಕೆ ಮಹಿಳೆಯನ್ನು ಕೊಂದ ಟೆಕಿ

ಅಶ್ಲೀಲ ವಿಡಿಯೋ ಮಾದರಿಯಲ್ಲಿ ಲೈಂಗಿಕ ಕ್ರಿಯೆಗೆ ಒತ್ತಾಯಿಸಿದ್ದಕ್ಕೆ ಮಹಿಳೆಯನ್ನು ಕೊಂದ ಟೆಕಿ

Udupi Chikmagalur Lok Sabha Constituency: ಕಾಫಿನಾಡಲ್ಲಿ ಕೈ-ಕಮಲ ತೀವ್ರ ಪೈಪೋಟಿ

Udupi Chikmagalur Lok Sabha Constituency: ಕಾಫಿನಾಡಲ್ಲಿ ಕೈ-ಕಮಲ ತೀವ್ರ ಪೈಪೋಟಿ

1-aaaa

Scrap mafia ದರೋಡೆಕೋರ ರವಿ ಕಾನಾ ಮತ್ತು ಪ್ರೇಯಸಿ ಕಾಜಲ್ ಥಾಯ್ಲೆಂಡ್‌ ನಲ್ಲಿ ಬಂಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-asdasdas

IPL; ಸ್ಟಾಯಿನಿಸ್‌ ಏಟಿಗೆ ತವರಲ್ಲೆ ಚಾಂಪಿಯನ್‌ ಚೆನ್ನೈ ಠುಸ್‌!

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

IPL 2024; Chahal’s 200-wicket haul; First bowler to achieve this feat

IPL 2024; ಚಹಲ್‌ 200 ವಿಕೆಟ್‌ಗಳ ಕಮಾಲ್‌; ಈ ಸಾಧನೆಗೈದ ಮೊದಲ ಬೌಲರ್‌

CSKvsLSG: ಶತಕ ಸಿಡಿಸಿದ ಚೆನ್ನೈನ ಮೊದಲ ನಾಯಕ ಗಾಯಕ್ವಾಡ್‌

CSKvsLSG: ಶತಕ ಸಿಡಿಸಿದ ಚೆನ್ನೈನ ಮೊದಲ ನಾಯಕ ಗಾಯಕ್ವಾಡ್‌

Rajastan Royals; ಪ್ಲೇ ಆಫ್ ಮೊದಲ ಗುರಿ: ಸಂಜು ಸ್ಯಾಮ್ಸನ್‌

Rajastan Royals; ಪ್ಲೇ ಆಫ್ ಮೊದಲ ಗುರಿ: ಸಂಜು ಸ್ಯಾಮ್ಸನ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-qwewweq

K. Jayaprakash Hegde; ಮೀನುಗಾರಿಕೆ, ಪ್ರವಾಸೋದ್ಯಮದ ಅಭಿವೃದ್ದಿಗೆ ಹೆಚ್ಚಿನ ಆಧ್ಯತೆ 

Amit Shah: 2024ರ ಚುನಾವಣೆಯಲ್ಲಿ ಎನ್‌ ಡಿಎಗೆ 400ಕ್ಕೂ ಅಧಿಕ ಸ್ಥಾನ ಖಚಿತ: ಶಾ

Amit Shah: 2024ರ ಚುನಾವಣೆಯಲ್ಲಿ ಎನ್‌ ಡಿಎಗೆ 400ಕ್ಕೂ ಅಧಿಕ ಸ್ಥಾನ ಖಚಿತ: ಶಾ

11

ಕ್ರಿಕೆಟ್‌ ಬಗ್ಗೆ ಕಿಂಚಿತ್ತೂ ಜ್ಞಾನವಿಲ್ಲದ ವ್ಯಕ್ತಿಗೆ ಡ್ರೀಮ್‌11ನಲ್ಲಿ ಒಲಿಯಿತು 1.5 ಕೋಟಿ

1-asdasdas

IPL; ಸ್ಟಾಯಿನಿಸ್‌ ಏಟಿಗೆ ತವರಲ್ಲೆ ಚಾಂಪಿಯನ್‌ ಚೆನ್ನೈ ಠುಸ್‌!

1-BVR-1

Congress vs BJP; ಬ್ರಹ್ಮಾವರದಲ್ಲಿ ಶಕ್ತಿ ಪ್ರದರ್ಶನದ ವೇದಿಕೆ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.