ಜೊಕೋ-ಆ್ಯಂಡರ್ಸನ್‌ ಫೈನಲ್‌


Team Udayavani, Jul 15, 2018, 10:44 AM IST

wmldn.gif

ಲಂಡನ್‌: ಮೂರು ಬಾರಿಯ ಚಾಂಪಿಯನ್‌ ನೊವಾಕ್‌ ಜೊಕೋವಿಕ್‌ ಮತ್ತು ದಕ್ಷಿಣ ಆಫ್ರಿಕಾದ ಕೆವಿನ್‌ ಆ್ಯಂಡರ್ಸನ್‌ ರವಿವಾರ ವಿಂಬಲ್ಡನ್‌ ಪ್ರಶಸ್ತಿಗಾಗಿ ಸೆಣಸಲಿದ್ದಾರೆ. ಶನಿವಾರಕ್ಕೆ ಮುಂದೂಡಲ್ಪಟ್ಟ ದ್ವಿತೀಯ ಸೆಮಿಫೈನಲ್‌ನಲ್ಲಿ ನೊವಾಕ್‌ ಜೊಕೋವಿಕ್‌ 6-4, 3-6, 7-6 (11-9), 3-6, 10-8 ಅಂತರ ದಿಂದ ರಫೆಲ್‌ ನಡಾಲ್‌ ಅವರನ್ನು ಪರಾಭವಗೊಳಿಸಿದರು. ಇತ್ತೀಚಿನ ವರ್ಷಗಳಲ್ಲಿ ಕಳಪೆ ಫಾರ್ಮ್ ಹಾಗೂ ಫಿಟ್‌ನೆಸ್‌ ಸಮಸ್ಯೆ ಯಿಂದ ನರಳುತ್ತಿದ್ದ ಜೊಕೋವಿಕ್‌ 2015ರಲ್ಲಿ ಕೊನೆಯ ಸಲ ವಿಂಬಲ್ಡನ್‌ ಚಾಂಪಿಯನ್‌ ಆಗಿದ್ದರು.

ಮ್ಯಾರಥಾನ್‌ ಸೆಮಿಫೈನಲ್‌!
ಇದಕ್ಕೂ ಮುನ್ನ ದಕ್ಷಿಣ ಆಫ್ರಿಕಾದ ಎಕವಿನ್‌ ಆ್ಯಂಡರ್ಸನ್‌ ಮತ್ತು ಅಮೆರಿಕದ ಜಾನ್‌ ಇಸ್ನರ್‌ ನಡುವಿನ ಶುಕ್ರವಾರ ರಾತ್ರಿಯ ವಿಂಬಲ್ಡನ್‌ ಸೆಮಿಫೈನಲ್‌ ಕಾಳಗ ಮ್ಯಾರಥಾನ್‌  ರಾಕೆಟ್‌ ಸಮರವೊಂದಕ್ಕೆ ಸಾಕ್ಷಿ ಯಾಯಿತು. ಇದು ವಿಂಬಲ್ಡನ್‌ ಕೂಟದ ಅತ್ಯಂತ ದೀರ್ಘಾವಧಿಯ ಸೆಮಿಫೈನಲ್‌ ಪಂದ್ಯವಾಗಿ ಇತಿಹಾಸ ನಿರ್ಮಿಸಿತು. ಇವರಿಬ್ಬರ ನಡುವಿನ ಪಂದ್ಯ ಒಟ್ಟು 6 ಗಂಟೆ, 36 ನಿಮಿಷಗಳ ತನಕ ಸಾಗಿತು. ಅಪರಾಹ್ನ 1.10ಕ್ಕೆ ಆರಂಭಗೊಂಡ ಈ ಸ್ಪರ್ಧೆ ಮುಗಿದದ್ದು ರಾತ್ರಿ 7.46ಕ್ಕೆ!

ಪಟ್ಟು ಸಡಿಲಿಸದೆ ಕಾದಾಡಿದ ಆ್ಯಂಡರ್ಸನ್‌-ಇಸ್ನರ್‌, ಟೆನಿಸ್‌ ಸ್ಪರ್ಧೆಯೊಂದು ಎಷ್ಟೊಂದು ರೋಚಕವಾಗಿ ಜಿದ್ದಾಜಿದ್ದಿಯಿಂದ ಸಾಗಲಿದೆ ಎಂಬುದನ್ನು ನಿರೂಪಿಸಿದರು. ಜೊಹಾನ್ಸ್‌ಬರ್ಗ್‌ನ ಜಂಟ್ಲಮನ್‌ ಕೆವಿನ್‌ ಆ್ಯಂಡರ್ಸನ್‌ 7-6 (6), 6-7 (5), 6-7 (9), 6-4, 26-24 ಅಂತರದ ಜಯದೊಂದಿಗೆ ಫೈನಲ್‌ ನಗು ಹೊಮ್ಮಿಸಿದರು! ಇದರಲ್ಲಿ ನಿರ್ಣಾಯಕ 5ನೇ ಸೆಟ್‌ ಕಾಳಗವೇ ಹತ್ತಿರ ಹತ್ತಿರ 3 ಗಂಟೆ ಕಾಲ ನಡೆಯಿತೆಂಬುದು ಟೆನಿಸ್‌ ಲೋಕದ ಅಚ್ಚರಿಯೇ ಸೈ. 102 ಏಸ್‌, 264  ಸರ್ವ್‌ ಹಾಗೂ 247 ವಿನ್ನರ್ ಈ ಪಂದ್ಯದ ವಿಸ್ಮಯಗಳಾಗಿ ದಾಖಲಾದವು.

97 ವರ್ಷಗಳಲ್ಲಿ…
ಕಳೆದ 97 ವರ್ಷಗಳಲ್ಲಿ ದಕ್ಷಿಣ ಆಫ್ರಿಕಾದ ಟೆನಿಸಿಗನೋರ್ವ ವಿಂಬಲ್ಡನ್‌ ಫೈನಲ್‌ ತಲುಪಿದ್ದು ಇದೇ ಮೊದಲು.  ಎತ್ತರದ ಲೆಕ್ಕಾಚಾರದಲ್ಲೂ ಈ ಬಾರಿಯ ವಿಂಬಲ್ಡನ್‌ ಹೊಸ ದಾಖಲೆ ಬರೆಯಿತು. 6 ಅಡಿ, 8 ಇಂಚು ಎತ್ತರದ ಆ್ಯಂಡರ್ಸನ್‌, 132 ವರ್ಷಗಳ ವಿಂಬಲ್ಡನ್‌ ಇತಿಹಾಸದಲ್ಲಿ ಫೈನಲ್‌ಗೆ ಲಗ್ಗೆ ಇರಿಸಿದ ಅತ್ಯಂತ ಎತ್ತರದ ಟೆನಿಸಿಗನಾಗಿ ಮೂಡಿಬಂದಿದ್ದಾರೆ.

ಟಾಪ್ ನ್ಯೂಸ್

Vijayapura; Complaint to Election Commission against Yatnal: Shivananda Patil

Vijayapura; ಯತ್ನಾಳ್ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು: ಶಿವಾನಂದ ಪಾಟೀಲ

3-Jio

Reliance Jio Profit; ರಿಲಯನ್ಸ್‌ ಜಿಯೊ ನಿವ್ವಳ ಲಾಭ ಶೇ 13ರಷ್ಟು ಹೆಚ್ಚಳ

Vijayapura; ಚುನಾವಣಾ ಬಾಂಡ್ ತನಿಖೆಯಾದರೆ ಮೋದಿ ಜೈಲಿಗೆ: ಎಂ.ಬಿ. ಪಾಟೀಲ್

Vijayapura; ಚುನಾವಣಾ ಬಾಂಡ್ ತನಿಖೆಯಾದರೆ ಮೋದಿ ಜೈಲಿಗೆ: ಎಂ.ಬಿ. ಪಾಟೀಲ್

increase-in-number-of-crime-cases-after-congress-came-minister-joshi

Dharwad; ಕಾಂಗ್ರೆಸ್ ಬಂದ ಮೇಲೆ ಅಪರಾಧ ಪ್ರಕರಣಗಳ ಸಂಖ್ಯೆ ಹೆಚ್ಚಳ: ಸಚಿವ ಜೋಶಿ ಗಂಭೀರ ಆರೋಪ

Bridge Collapse: 8 ವರ್ಷಗಳಿಂದ ನಿರ್ಮಾಣವಾಗುತ್ತಿದ್ದ ಸೇತುವೆ ಕುಸಿತ… ತಪ್ಪಿದ ದುರಂತ

Bridge Collapse: 8 ವರ್ಷಗಳಿಂದ ನಿರ್ಮಾಣವಾಗುತ್ತಿದ್ದ ಸೇತುವೆ ಕುಸಿತ… ತಪ್ಪಿದ ದುರಂತ

bp harish

Harihara; ಅಕ್ರಮ ಮರಳುಗಾರಿಕೆ ಮಾಹಿತಿ ನೀಡಿದ್ದಕ್ಕೆ ಬಿಜೆಪಿ ಶಾಸಕರಿಗೆ ಜೀವ ಬೆದರಿಕೆ

Food ಯಾವತ್ತಾದ್ರೂ ಮಾವಿನ ಕಾಯಿ ಬಜ್ಜಿ ಮಾಡಿದ್ದೀರಾ..? ಇಲ್ಲ ಅಂದ್ರೆ ಟ್ರೈ ಮಾಡಿ ನೋಡಿ

Food: ಯಾವತ್ತಾದ್ರೂ ಮಾವಿನ ಕಾಯಿ ಬಜ್ಜಿ ಮಾಡಿದ್ದೀರಾ..? ಇಲ್ಲ ಅಂದ್ರೆ ಟ್ರೈ ಮಾಡಿ ನೋಡಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Team India; Not Hardik; Bhajji has suggested the name of Team India’s next T20 captain

Team India; ಹಾರ್ದಿಕ್ ಅಲ್ಲ; ಟೀಂ ಇಂಡಿಯಾದ ಮುಂದಿನ ಟಿ20 ನಾಯಕನ ಹೆಸರು ಸೂಚಿಸಿದ ಭಜ್ಜಿ

1-wewqwewq

IPL; ಲಕ್ನೋ ಸೂಪರ್‌ ಜೈಂಟ್ಸ್‌ ಎದುರಾಳಿ:ಚೆನ್ನೈಗೆ ಇದು ಸೇಡಿನ ಪಂದ್ಯ

1-ewewewq

IPL; ಆಸ್ಟ್ರೇಲಿಯನ್‌ ಆಲ್‌ರೌಂಡರ್‌ ಮಾರ್ಷ್‌ ಔಟ್‌

Kohli IPL 2024

IPL ನಾಯಕರಿಗೆ ದಂಡ, ಕೊಹ್ಲಿಗೂ ದಂಡ ; 29 ಸಲ 200 ರನ್‌ ನೀಡಿದ ಆರ್‌ಸಿಬಿ!

1-eewqewqe

IPL; ಮುಂಬೈ ಎದುರು ರಾಜಸ್ಥಾನ್ ಯಶಸ್ವಿ ಗೆಲುವಿನ ಓಟ: ಜೈಸ್ವಾಲ್ ಅಮೋಘ ಶತಕ

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

Vijayapura; Complaint to Election Commission against Yatnal: Shivananda Patil

Vijayapura; ಯತ್ನಾಳ್ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು: ಶಿವಾನಂದ ಪಾಟೀಲ

3-Jio

Reliance Jio Profit; ರಿಲಯನ್ಸ್‌ ಜಿಯೊ ನಿವ್ವಳ ಲಾಭ ಶೇ 13ರಷ್ಟು ಹೆಚ್ಚಳ

Vijayapura; ಚುನಾವಣಾ ಬಾಂಡ್ ತನಿಖೆಯಾದರೆ ಮೋದಿ ಜೈಲಿಗೆ: ಎಂ.ಬಿ. ಪಾಟೀಲ್

Vijayapura; ಚುನಾವಣಾ ಬಾಂಡ್ ತನಿಖೆಯಾದರೆ ಮೋದಿ ಜೈಲಿಗೆ: ಎಂ.ಬಿ. ಪಾಟೀಲ್

increase-in-number-of-crime-cases-after-congress-came-minister-joshi

Dharwad; ಕಾಂಗ್ರೆಸ್ ಬಂದ ಮೇಲೆ ಅಪರಾಧ ಪ್ರಕರಣಗಳ ಸಂಖ್ಯೆ ಹೆಚ್ಚಳ: ಸಚಿವ ಜೋಶಿ ಗಂಭೀರ ಆರೋಪ

Bridge Collapse: 8 ವರ್ಷಗಳಿಂದ ನಿರ್ಮಾಣವಾಗುತ್ತಿದ್ದ ಸೇತುವೆ ಕುಸಿತ… ತಪ್ಪಿದ ದುರಂತ

Bridge Collapse: 8 ವರ್ಷಗಳಿಂದ ನಿರ್ಮಾಣವಾಗುತ್ತಿದ್ದ ಸೇತುವೆ ಕುಸಿತ… ತಪ್ಪಿದ ದುರಂತ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.