ವಿಂಬಲ್ಡನ್ ಗ್ರ್ಯಾನ್‌ಸ್ಲಾಂ ಟೆನಿಸ್ ಟೂರ್ನಿ: ವೀನಸ್‌ ದಾಖಲೆ ಮುರಿಯುವತ್ತ ಸ್ವಿಯಾಟೆಕ್‌

ಜೊಕೋವಿಕ್‌, ನಡಾಲ್‌ ಅವರಿಂದಲೂ ವಿಶಿಷ್ಟ ಸಾಧನೆ

Team Udayavani, Jun 26, 2022, 11:20 PM IST

ವಿಂಬಲ್ಡನ್ ಗ್ರ್ಯಾನ್‌ಸ್ಲಾಂ ಟೆನಿಸ್ ಟೂರ್ನಿ: ವೀನಸ್‌ ದಾಖಲೆ ಮುರಿಯುವತ್ತ ಸ್ವಿಯಾಟೆಕ್‌

ಲಂಡನ್‌: ಐತಿಹಾಸಿಕ “ಸೆಂಟರ್‌ ಕೋರ್ಟ್‌’ನ ಶತಮಾನೋತ್ಸವ ಸಂಭ್ರಮ ದೊಂದಿಗೆ 2022ನೇ ಸಾಲಿನ ಪ್ರತಿಷ್ಠಿತ ವಿಂಬಲ್ಡನ್‌ ಗ್ರ್ಯಾನ್‌ಸ್ಲಾಮ್‌ ಪಂದ್ಯಾವಳಿ ಸೋಮವಾರದಿಂದ ಮೊದಲ್ಗೊಳ್ಳಲಿದೆ.

ಹಾಲಿ ಚಾಂಪಿಯನ್‌ ನೊವಾಕ್‌ ಜೊಕೋವಿಕ್‌ ಪ್ರಶಸ್ತಿ ಉಳಿಸಿಕೊಳ್ಳುವರೇ ಅಥವಾ ಇದಕ್ಕೆ ಬೇರೆ ವಾರಸುದಾರರು ಬಂದಾರೆಯೇ, ವನಿತಾ ಚಾಂಪಿಯನ್‌ ಆ್ಯಶ್ಲಿ ಬಾರ್ಟಿ ನಿವೃತ್ತಿ ಆಗಿರುವುದರಿಂದ ಈ ಬಾರಿಯ ಕಿರೀಟ ಯಾರಿಗೆ… ಎಂಬುದೆಲ್ಲ ಈ ವಿಂಬಲ್ಡನ್‌ ಕೂಟವನ್ನು ಕುತೂಹಲದಿಂದ ಕಾಯುವಂತೆ ಮಾಡಿದೆ.

ಸ್ವಿಯಾಟೆಕ್‌ ಸತತ 35 ಜಯ
ಈ ಸಂದರ್ಭದಲ್ಲಿ ಪೋಲೆಂಡ್‌ ಆಟಗಾರ್ತಿ ಐಗಾ ಸ್ವಿಯಾಟೆಕ್‌ ಆಟ, ಸಾಧನೆ ಕಣ್ಮುಂದೆ ಸುಳಿಯುತ್ತದೆ. ಅಗ್ರ ರ್‍ಯಾಂಕಿಂಗ್‌ ಹಾಗೂ ಅಗ್ರ ಶ್ರೇಯಾಂಕದ ಆಟಗಾರ್ತಿಯಾಗಿರುವ ಸ್ವಿಯಾಟೆಕ್‌ ಈ ಶತಮಾನದಲ್ಲಿ ಸಾಧಿಸಿದ ಸತತ 35 ಗೆಲು ವಿನ ಜಂಟಿ ದಾಖಲೆಯೊಂದಿಗೆ ಕಣಕ್ಕೆ ಧುಮುಕುತ್ತಿದ್ದಾರೆ. ವೀನಸ್‌ ವಿಲಿಯಮ್ಸ್‌ ಕೂಡ ಇಷ್ಟೇ ಗೆಲುವು ಸಾಧಿಸಿದ್ದಾರೆ. ಮೊದಲ ಸುತ್ತಿನ ಪಂದ್ಯ ಗೆದ್ದರೆ ಸ್ವಿಯಾಟೆಕ್‌ ಹೊಸ ಎತ್ತರ ತಲುಪುವರು.

ಶತಮಾನದ ಸತತ ಗೆಲುವಿನ ಸಾಧನೆ ಯಲ್ಲಿ ಇವರಿಗಿಂತ ಮುಂದಿರುವ ಇಬ್ಬರೂ ಪುರುಷ ಟೆನಿಸಿಗರು ಎಂಬುದನ್ನು ಗಮನಿಸಬೇಕು. ಇವರೆಂದರೆ ನೊವಾಕ್‌ ಜೊಕೋವಿಕ್‌ (43) ಮತ್ತು ರೋಜರ್‌ ಫೆಡರರ್‌ (41).

ಐಗಾ ಸ್ವಿಯಾಟೆಕ್‌ ಸತತ 6 ಟೆನಿಸ್‌ ಪ್ರಶಸ್ತಿಗಳನ್ನು ಗೆದ್ದು ವಿಂಬಲ್ಡನ್‌ ಅಖಾಡಕ್ಕೆ ಇಳಿಯಲಿದ್ದಾರೆ. ಇವರ ತಾಜಾ ಪ್ರಶಸ್ತಿ “ಫ್ರೆಂಚ್‌ ಓಪನ್‌’.

“ವೀನಸ್‌ ವಿಲಿಯಮ್ಸ್‌ ಅವರನ್ನು ಮೀರಿ ನಿಲ್ಲುವುದೆಂದರೆ ಅದೊಂದು ವಿಶೇಷ ಸಾಧನೆ’ ಎಂಬುದು ಸ್ವಿಯಾಟೆಕ್‌ ಅವರ ಖುಷಿಯ ನುಡಿಗಳು. ಅಷ್ಟೇ ಅಲ್ಲ, 21 ವರ್ಷದೊಳಗೆ ಸತತ 7 ಗ್ರ್ಯಾನ್‌ಸ್ಲಾಮ್‌ ಪಂದ್ಯಾವಳಿಗಳಲ್ಲಿ 4ನೇ ಹಾಗೂ ಇದರಾಚೆಯ ಸುತ್ತು ತಲುಪಿದ ವಿಶ್ವದ ಏಕೈಕ ಆಟಗಾರ್ತಿ ಎಂಬುದೂ ಸ್ವಿಯಾಟೆಕ್‌ ಪಾಲಿನ ಹೆಗ್ಗಳಿಕೆ.

ಜೊಕೋ ಸೋಲದೆ 5 ವರ್ಷ!
ಜೊಕೋವಿಕ್‌ ಕೂಡ ವಿಂಬಲ್ಡನ್‌ನಲ್ಲಿ ವಿಶೇಷ ದಾಖಲೆ ಸ್ಥಾಪಿಸಿದ್ದಾರೆ. ಇವರಿಲ್ಲಿ ಸೋಲದೆ 5 ವರ್ಷಗಳೇ ಉರುಳಿವೆ! ಅದು 2017ರ ಟೂರ್ನಿ. ಅದು ಕೂಡ ಸೋಲಲ್ಲ. ಥಾಮಸ್‌ ಬೆರ್ಡಿಶ್‌ ಎದುರಿನ ಪಂದ್ಯದಲ್ಲಿ ಗಾಯಾಳಾಗಿ ನಿವೃತ್ತರಾಗಿದ್ದರು. 2018ರಿಂದ ಮೊದಲ್ಗೊಂಡು ಸತತ 3 ವರ್ಷ ವಿಂಬಲ್ಡನ್‌ಗೆ ಜೊಕೋ ಅವರೇ ಕಿಂಗ್‌. 2020ರಲ್ಲಿ ಕೋವಿಡ್‌ ಕಾರಣದಿಂದ ಟೂರ್ನಿ ನಡೆದಿರಲಿಲ್ಲ.

ಈ ಬಾರಿ ಜೊಕೋವಿಕ್‌ ಗೆದ್ದರೆ 2007ರ ರೋಜರ್‌ ಫೆಡರರ್‌ ಸಾಧನೆ ಬಳಿಕ ತಮ್ಮ ಹೆಸರನ್ನು ನೋಂದಾಯಿಸಿ ಕೊಳ್ಳಲಿದ್ದಾರೆ. ಅಂದು ಫೆಡರರ್‌ ಸತತ 5ನೇ ವಿಂಬಲ್ಡನ್‌ ಕಿರೀಟ ಧರಿಸಿದ್ದರು. 6 ಬಾರಿಯ ವಿಂಬಲ್ಡನ್‌ ಚಾಂಪಿಯನ್‌ ಜೊಕೋವಿಕ್‌ “ಆಲ್‌ ಇಂಗ್ಲೆಂಡ್‌ ಕ್ಲಬ್‌’ನಲ್ಲಿ ಸತತ 21 ಪಂದ್ಯಗಳ ಗೆಲುವಿನ ದಾಖಲೆ ಹೊಂದಿದ್ದಾರೆ. ರಫೆಲ್‌ ನಡಾಲ್‌ ಕೂಡ ವಿಶಿಷ್ಟ ಸಾಧನೆ ಯೊಂದಿಗೆ ಹೋರಾಟ ಆರಂಭಿಸುವರು. ಅವರು ಮೊದಲ ಬಾರಿಗೆ ವರ್ಷದ ಮೊದಲೆರಡು ಗ್ರ್ಯಾನ್‌ಸ್ಲಾಮ್‌ ಪ್ರಶಸ್ತಿ ಗೆದ್ದು ವಿಂಬಲ್ಡನ್‌ ಆಡಲು ಇಳಿಯುತ್ತಿದ್ದಾರೆ. 2022ರ ಆಸ್ಟ್ರೇಲಿಯನ್‌ ಓಪನ್‌ ಮತ್ತು ಫ್ರೆಂಚ್‌ ಓಪನ್‌ ಪ್ರಶಸ್ತಿಗಳೆರಡೂ ನಡಾಲ್‌ ಪಾಲಾಗಿವೆ.

 

ಟಾಪ್ ನ್ಯೂಸ್

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Veerappa Moily ಬಿಜೆಪಿ ವಿರುದ್ಧ ಅಸಮಾಧಾನ ಜ್ವಾಲಾಮುಖಿ ಸ್ಫೋಟ

Veerappa Moily ಬಿಜೆಪಿ ವಿರುದ್ಧ ಅಸಮಾಧಾನ ಜ್ವಾಲಾಮುಖಿ ಸ್ಫೋಟ

ಮತದಾರರ ಚೀಟಿಯಲ್ಲಿ ಕ್ಯುಆರ್‌ ಕೋಡ್‌! ಮಂಗಳೂರು ದಕ್ಷಿಣ-ಉತ್ತರದಲ್ಲಿ ಅನುಷ್ಠಾನ

ಮತದಾರರ ಚೀಟಿಯಲ್ಲಿ ಕ್ಯುಆರ್‌ ಕೋಡ್‌! ಮಂಗಳೂರು ದಕ್ಷಿಣ-ಉತ್ತರದಲ್ಲಿ ಅನುಷ್ಠಾನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-asdasdas

IPL; ಸ್ಟಾಯಿನಿಸ್‌ ಏಟಿಗೆ ತವರಲ್ಲೆ ಚಾಂಪಿಯನ್‌ ಚೆನ್ನೈ ಠುಸ್‌!

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

IPL 2024; Chahal’s 200-wicket haul; First bowler to achieve this feat

IPL 2024; ಚಹಲ್‌ 200 ವಿಕೆಟ್‌ಗಳ ಕಮಾಲ್‌; ಈ ಸಾಧನೆಗೈದ ಮೊದಲ ಬೌಲರ್‌

CSKvsLSG: ಶತಕ ಸಿಡಿಸಿದ ಚೆನ್ನೈನ ಮೊದಲ ನಾಯಕ ಗಾಯಕ್ವಾಡ್‌

CSKvsLSG: ಶತಕ ಸಿಡಿಸಿದ ಚೆನ್ನೈನ ಮೊದಲ ನಾಯಕ ಗಾಯಕ್ವಾಡ್‌

Rajastan Royals; ಪ್ಲೇ ಆಫ್ ಮೊದಲ ಗುರಿ: ಸಂಜು ಸ್ಯಾಮ್ಸನ್‌

Rajastan Royals; ಪ್ಲೇ ಆಫ್ ಮೊದಲ ಗುರಿ: ಸಂಜು ಸ್ಯಾಮ್ಸನ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.