ವಿಂಬಲ್ಡನ್ ಟೆನಿಸ್: ಮರ್ರೆ,ವೀನಸ್ ದ್ವಿತೀಯ ಸುತ್ತಿಗೆ
Team Udayavani, Jul 4, 2017, 3:50 AM IST
ಲಂಡನ್: ಹಾಲಿ ಚಾಂಪಿಯನ್ ಬ್ರಿಟನ್ನ ಆ್ಯಂಡಿ ಮರ್ರೆ, ಅಮೆರಿಕದ ವೀನಸ್ ವಿಲಿಯಮ್ಸ್ ಅವರು ವಿಂಬಲ್ಡನ್ ಟೆನಿಸ್ ಕೂಟದ ಮೊದಲ ಸುತ್ತಿನಲ್ಲಿ ಸುಲಭ ಗೆಲುವು ಸಾಧಿಸಿ ಮುನ್ನಡೆದಿದ್ದಾರೆ.
ಅಗ್ರ ಶ್ರೇಯಾಂಕದ ಮತ್ತು ವಿಶ್ವದ ನಂಬರ್ ವನ್ ಮರ್ರೆ ಅವರು ಕಝಾಕ್ನ ಅಲೆಕ್ಸಾಂಡರ್ ಬುಬ್ಲಿಕ್ ಅವರನ್ನು 6-1, 6-4, 6-2 ಸೆಟ್ಗಳಿಂದ ಕೆಡಹಿದರು. ಈ ಪಂದ್ಯದ ನಡುವೆ ಮಳೆಯಿಂದಾಗಿ ಕೆಲಹೊತ್ತು ಆಟ ಸ್ಥಗಿತಗೊಂಡಿತ್ತು. ಮರ್ರೆ ದ್ವಿತೀಯ ಸುತ್ತಿನಲ್ಲಿ ಡಾಸ್ಟಿನ್ ಬ್ರೌನ್ ಅವರನ್ನು ಎದುರಿಸಲಿದ್ದಾರೆ. ಬ್ರೌನ್ ಇನ್ನೊಂದು ಪಂದ್ಯದಲ್ಲಿ ಪೋರ್ಚುಗಲ್ನ ಜೊವೊ ಸೌಸ ಅವರನ್ನು 3-6, 7-6 (7-5, 6-4, 6-4 ಸೆಟ್ಗಳಿಂದ ಸೋಲಿಸಿದ್ದರು.
ವನಿತೆಯರ ಸಿಂಗಲ್ಸ್ನಲ್ಲಿ ವೀನಸ್ ವಿಲಿಯಮ್ಸ್ ಅವರು ಎಲಿಸ್ ಮಾರ್ಟೆನ್ಸ್ ಅವರನ್ನು 7-6 (9-7), 6-4 ಸೆಟ್ಗಳಿಂದ ಸೋಲಿಸಿ ದ್ವಿತೀಯ ಸುತ್ತಿಗೇರಿದರು. ಎರಡನೇ ಶ್ರೇಯಾಂಕದ ಸಿಮೋನಾ ಹಾಲೆಪ್ ಅವರು ನ್ಯೂಜಿಲ್ಯಾಂಡಿನ ಮರಿನಾ ಎರಕೋವಿಕ್ ಅವರನ್ನು 6-4, 6-1 ಸೆಟ್ಗಳಿಂದ ಪರಾಭವಗೊಳಿಸಿ ಮುನ್ನಡೆದರು. ಉಕ್ರೈನಿನ ನಾಲ್ಕನೇ ಶ್ರೇಯಾಂಕದ ಎಲಿನಾ ಸ್ವಿಟೋಲಿನಾ ಇನ್ನೊಂದು ಪಂದ್ಯದಲ್ಲಿ ಆ್ಯಶ್ಲೇಗ್ ಬಾರ್ಟಿ ಅವರ ವಿರುದ್ಧ 7-5, 7-6 (10-8) ಸೆಟ್ಗಳಿಂದ ಗೆದ್ದು ಬಂದರು.
ಪುರುಷರ ಇನ್ನೊಂದು ಪಂದ್ಯದಲ್ಲಿ ಜೋ ವಿಲ್ಫೆಡ್ ಸೋಂಗ ಅವರು ಬ್ರಿಟನ್ನ ಕ್ಯಾಮರೂನ್ ನೂರಿ ಅವರನ್ನು 6-3, 6-2, 6-2 ನೇರ ಸೆಟ್ಗಳಲ್ಲಿ ಉರುಳಿಸಿ ದ್ವಿತೀಯ ಸುತ್ತಿಗೇರಿದರು. ಜಪಾನಿನ ಕೆಯಿ ನಿಶಿಕೋರಿ ಇಟಲಿಯ ಮಾರ್ಕೊ ಸೆಚಿನಾಟೊ ಅವರನ್ನು 6-2, 6-2, 6-0 ಸೆಟ್ಗಳಿಂದ ಸೋಲಿಸಿದರು. ಸೆಚಿನಾಟೊ ಸೀನಿಯರ್ ಮಟ್ಟದಲ್ಲಿ ಹುಲ್ಲುಹಾಸಿನ ಅಂಗಣದಲ್ಲಿ ಆಡಿದ ಮೊದಲ ಪಂದ್ಯ ಇದಾಗಿದೆ.
ಗಾಯದ ಸಮಸ್ಯೆಯಿಂದಾಗಿ ನಿಕ್ ಕಿರ್ಗಿಯೋಸ್ ಅವರು ಮೊದಲ ಸುತ್ತಿನ ಪಂದ್ಯದ ನಡುವೆ ಹೊರನಡೆದರು. ಅವರ ಎದುರಾಳಿ ಪಿಯರ್ ಹ್ಯೂಗ್ಸ್ ಹೆರ್ಬೆಟ್ 6-3, 6-4 ಸೆಟ್ಗಳಿಂದ ಮುನ್ನಡೆಯಲ್ಲಿರುವಾಗ ಕಿರ್ಗಿಯೋಸ್ ಪಂದ್ಯ ತ್ಯಜಿಸುವ ನಿರ್ಧಾರ ಪ್ರಕಟಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Wrestlers: ದುಬಾೖ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಇಬ್ಬರು ಕುಸ್ತಿಪಟುಗಳು
LSG vs CSK: ಲಕ್ನೋದಲ್ಲೂ ಚೆನ್ನೈ ಫೇವರಿಟ್
IPL; ರೋಚಕ ಪಂದ್ಯದಲ್ಲಿ ಪಂಜಾಬ್ ಎದುರು 9 ರನ್ ಜಯ ಸಾಧಿಸಿದ ಮುಂಬೈ
Austria Marathon: ಭಾರತವನ್ನು ಪ್ರತಿನಿಧಿಸಲಿರುವ ಕೊಡಗಿನ ಅಪ್ಪಚಂಗಡ ಬೆಳ್ಯಪ್ಪ
ಮೊಣಕಾಲಿನ ಗಾಯಕ್ಕೆ ಶಸ್ತ್ರಚಿಕಿತ್ಸೆ ಅಗತ್ಯ ಒಲಿಂಪಿಕ್ಸ್ನಿಂದ ಹೊರಬಿದ್ದ ಶ್ರೀಶಂಕರ್
MUST WATCH
ಹೊಸ ಸೇರ್ಪಡೆ
Puttur: ಶ್ರೀ ಮಹಾಲಿಂಗೇಶ್ವರ ದೇವರ ಅವಭೃಥ ಸವಾರಿ
Neha Hiremath Case; ಕೊಲೆಗಡುಕನನ್ನು ಎನ್ ಕೌಂಟರ್ ಮಾಡಿ: ಪ್ರಮೋದ್ ಮುತಾಲಿಕ್ ಆಗ್ರಹ
Neha Hiremath Case: ಹಂತಕನ ಊರಿನಲ್ಲಿ ಪ್ರತಿಭಟನೆ, ಮುಸ್ಲಿಂ ಸಮುದಾಯದ ಸಾಥ್
Belagavi; ಕಾಂಗ್ರೆಸ್ ಸರ್ಕಾರದ ಓಲೈಕೆಯಿಂದ ಜಿಹಾದಿ ಕೃತ್ಯಗಳು ಹೆಚ್ಚುತ್ತಿದೆ: ಶೆಟ್ಟರ್
Bengaluru: ರೈಲಿಗೆ ಸಿಲುಕಿ ವೈದ್ಯ, ಸ್ಟಾಫ್ ನರ್ಸ್ ಆತ್ಮಹತ್ಯೆ