ಖೇಲ್ ರತ್ನ, ಅರ್ಜುನ, ದ್ರೋಣಾಚಾರ್ಯ ಪ್ರಶಸ್ತಿ ವಿಜೇತರ ಹೆಸರು ಪ್ರಕಟ
Team Udayavani, Aug 22, 2017, 3:53 PM IST
ಹೊಸದಿಲ್ಲಿ : ಕ್ರೀಡಾ ಸಚಿವಾಲಯ ಇಂದು ಮಂಗಳವಾರ ರಾಜೀವ್ ಗಾಂಧಿ ಖೇಲ್ ರತ್ನ, ಅರ್ಜುನ, ದ್ರೋಣಾಚಾರ್ಯ ಮತ್ತು ಧ್ಯಾನ್ ಚಂದ್ ಅವಾರ್ಡ್ಗಳನ್ನು ಪ್ರಕಟಿಸಿದೆ.
ಕ್ರಿಕೆಟಿಗ ಚೇತೇಶ್ವರ ಪೂಜಾರ ಮತ್ತು ಹರ್ಮನ್ ಪ್ರೀತ್ ಕೌರ್, ಗಾಲ್ಫ್ ಆಟಗಾರ ಎಸ್ ಎಸ್ ಪಿ ಚೌರಾಶಿಯಾ, ಟೆನಿಸ್ ಆಟಗಾರ ಸಾಕೇತ್ ಮೈನೇನಿ ಸಹಿತ 17 ಕ್ರೀಡಾಳುಗಳಿಗೆ 2107ರ ಅರ್ಜುನ ಪ್ರಶಸ್ತಿ ಘೋಷಿಸಲಾಗಿದೆ.
ಪ್ಯಾರಾ ಆತ್ಲೀಟ್ಗಳಾದ ಮರಿಯಪ್ಪನ್, ವರುಣ ಸಿಂಗ್ ಭಾಟಿ, ವಿ ಜೆ ಸುರೇಖಾ (ಬಿಲ್ಗಾರಿಕೆ), ಟ್ರ್ಯಾಕ್ ಆ್ಯಂಡ್ ಫೀಲ್ಡ್ ಅತ್ಲೀಟ್ಗಳಾದ ಖುಷ್ ಬೀರ್ ಕೌರ್ ಮತ್ತು ಆರೋಕಿಯಾ ರಾಜೀವ್ ಸೇರಿದಂತೆ ಹಲವು ಸಾಧಕರ ಹೆಸರು ಪಟ್ಟಿಯಲ್ಲಿದೆ.
ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿಗೆ ಪ್ಯಾರಾ ಅತ್ಲೀಟ್ ದೇವೇಂದ್ರ ಝಝಾರಿಯಾ ಮತ್ತು ಹಾಕಿ ಆಟಗಾರ ಸರ್ದಾರ್ ಸಿಂಗ್ ಅವರನ್ನು ಆಯ್ಕೆ ಮಾಡಲಾಗಿದೆ.