“ವಿಶ್ವ 10ಕೆ’ ಮ್ಯಾರಥಾನ್: ಅಂದಮ್ಲಾಕ್ ಬೆಲಿಹು, ಟಿರೋಪ್ಗೆ ಪ್ರಶಸ್ತಿ
Team Udayavani, May 20, 2019, 10:08 AM IST
ಬೆಂಗಳೂರು: ಉದ್ಯಾನನಗರಿಯಲ್ಲಿ ರವಿವಾರ ನಡೆದ “ವಿಶ್ವ 10ಕೆ’ ಮ್ಯಾರಥಾನ್ ಕೂಟದಲ್ಲಿ ಇಥಿಯೋಪಿಯ, ಕೀನ್ಯಾ ಆ್ಯತ್ಲೀಟ್ಗಳು ಪ್ರಾಬಲ್ಯ ಮೆರೆದಿದ್ದಾರೆ. ಪುರುಷರ ವಿಭಾಗದಲ್ಲಿ ಇಥಿಯೋಪಿಯದ ಅಂದಮ್ಲಾಕ್ ಬೆಲಿಹು (27 ನಿಮಿಷ, 56 ಸೆಕೆಂಡ್ಸ್) ಹಾಗೂ ಮಹಿಳಾ ಅಗ್ನೆಸ್ ಟಿರೋಪ್ (33 ನಿಮಿಷ, 55 ಸೆಕೆಂಡ್ಸ್) ಮೊದಲ ಸ್ಥಾನದೊಂದಿಗೆ 2 ಲಕ್ಷ ರೂ. ನಗದು ಹಾಗೂ ಸ್ಮರಣಿಕೆ ಪಡೆದುಕೊಂಡಿದ್ದಾರೆ.
ಬೆಲಿಹುಗೆ ಪ್ರಬಲ ಸ್ಪರ್ಧೆ
ಬೆಲಿಹುಗೆ ಮ್ಯಾರಥಾನ್ನ ಕೊನೆಯ ತನಕ ಉಗಾಂಡದ ಮ್ಯಾಂಡೇ ಬುಶೆಂಡಿಚ್ (28 ನಿಮಿಷ, 03 ಸೆಕೆಂಡ್ಸ್) ಪ್ರಬಲ ಸ್ಪರ್ಧೆ ನೀಡಿದ್ದರು. ಇಬ್ಬರ ನಡುವಿನ ಹೋರಾಟದಲ್ಲಿ ಕೊನೆಗೂ ಬೆಲಿಹು ಪರಾಕ್ರಮ ಮೆರೆದು ಗೆಲುವಿನ ನಗು ಬೀರಿದರು. ಬುಶೆಂಡಿಚ್ ದ್ವಿತೀಯ ಸ್ಥಾನ ಪಡೆದುಕೊಂಡರು.
ಒಲಿಂಪಿಕ್ಸ್ನಲ್ಲಿ ಪದಕ ಗೆದ್ದಿದ್ದ ಕೀನ್ಯಾದ ಪೌಲ್ ತನುಯ್ ನಿರಾಸೆ ಅನುಭವಿಸಿದ್ದಾರೆ. ಅವರು 28 ನಿಮಿಷ 39 ಸೆಕೆಂಡ್ಸ್ನಲ್ಲಿ ಗುರಿ ತಲುಪಿ 6ನೇ ಸ್ಥಾನಿಯಾದರು. ಇಥಿಯೋಪಿಯದ ಬಿರ್ಹಾನು ಲೆಗೀಸ್ ತೃತೀಯ (28 ನಿಮಿಷ, 23 ಸೆಕೆಂಡ್ಸ್), ಕೀನ್ಯಾದ ಜೆಫ್ರಿ ಕೊಯೆಚ್ 4ನೇ (28 ನಿಮಿಷ, 27 ಸೆಕೆಂಡ್ಸ್) ಹಾಗೂ ಕೀನ್ಯಾದ ಮ್ಯಾಥ್ಯೂ ಕೆಮೆಲಿ (28 ನಿಮಿಷ, 36 ಸೆಕೆಂಡ್ಸ್) 5ನೇ ಸ್ಥಾನ ಪಡೆದರು.
ಮಹಿಳಾ ವಿಭಾಗದಲ್ಲಿ ಟಿರೋಪ್ ಸುಲಭದಲ್ಲಿ ಗೆದ್ದರು. ಇಥಿಯೋಪಿಯದ ಸೆನ್ಬೆರ್ ಟೆಫೆರಿ, ಲೆಟೆನ್ಬೆಟ್ ಗಿಡೆ ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದುಕೊಂಡರು. ಇಥಿಯೋಪಿಯಾದ ನೆಟ್ಸಾನೆಟ್ 4ನೇ ಸ್ಥಾನ ಪಡೆದು ನಿರಾಶೆ ಅನುಭವಿಸಿದರು.
ಕರಣ್, ಸಂಜೀವನಿ ಚಾಂಪಿಯನ್ಸ್
ಭಾರತೀಯ ಎಲೈಟ್ ಆ್ಯತ್ಲೆಟಿಕ್ಸ್ ವಿಭಾಗದಲ್ಲಿ ಸಂಜೀವನಿ ಜಾಧವ್ ಮಹಿಳೆಯರ ವಿಭಾಗದಲ್ಲಿನ ಪ್ರಥಮ ಸ್ಥಾನದೊಂದಿಗೆ ಚಾಂಪಿಯನ್ ಪಟ್ಟವನ್ನು ಉಳಿಸಿಕೊಂಡರು. ಅವರು 35 ನಿಮಿಷ 10 ಸೆಕೆಂಡ್ಸ್ನಲ್ಲಿ ಗುರಿ ತಲುಪಿದರು. ಪಾರೂಲ್ ಚೌಧರಿ (35 ನಿಮಿಷ, 36 ಸೆಕೆಂಡ್ಸ್) ದ್ವಿತೀಯ ಹಾಗೂ ಚಿಂತಾ ಯಾದವ್ (36 ನಿಮಿಷ, 34 ಸೆಕೆಂಡ್ಸ್) ತೃತೀಯ ಸ್ಥಾನಿಯಾದರು.
ಭಾರತೀಯ ಎಲೈಟ್ ಆ್ಯತ್ಲೆಟಿಕ್ಸ್ ವಿಭಾಗದಲ್ಲಿ ಕರಣ್ ಸಿಂಗ್ (29 ನಿಮಿಷ, 55 ಸೆಕೆಂಡ್ಸ್) ಪುರುಷರ ವಿಭಾಗದ ಚಾಂಪಿಯನ್ ಆದರು. ಲಕ್ಷ್ಮಣ್ ಗೋವಿಂದನ್ (30 ನಿಮಿಷ, 02 ಸೆಕೆಂಡ್ಸ್) ದ್ವಿತೀಯ ಹಾಗೂ ಅವಿನಾಶ್ ಮುಕುಂದ್ (30 ನಿಮಿಷ, 36 ಸೆಕೆಂಡ್ಸ್) ತೃತೀಯ ಸ್ಥಾನ ಪಡೆದುಕೊಂಡರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL; ಲಕ್ನೋ ಸೂಪರ್ ಜೈಂಟ್ಸ್ ಎದುರಾಳಿ:ಚೆನ್ನೈಗೆ ಇದು ಸೇಡಿನ ಪಂದ್ಯ
IPL; ಆಸ್ಟ್ರೇಲಿಯನ್ ಆಲ್ರೌಂಡರ್ ಮಾರ್ಷ್ ಔಟ್
IPL ನಾಯಕರಿಗೆ ದಂಡ, ಕೊಹ್ಲಿಗೂ ದಂಡ ; 29 ಸಲ 200 ರನ್ ನೀಡಿದ ಆರ್ಸಿಬಿ!
IPL; ಮುಂಬೈ ಎದುರು ರಾಜಸ್ಥಾನ್ ಯಶಸ್ವಿ ಗೆಲುವಿನ ಓಟ: ಜೈಸ್ವಾಲ್ ಅಮೋಘ ಶತಕ
IPL 2024; ಏಳು ಪಂದ್ಯ ಸೋತರೂ ಇನ್ನೂ ಆರ್ ಸಿಬಿಗೆ ಇದೆ ಪ್ಲೇ ಆಫ್ ಅವಕಾಶ: ಇಲ್ಲಿದೆ ವಿವರ
MUST WATCH
ಹೊಸ ಸೇರ್ಪಡೆ
Bengalur: ವೈದ್ಯರ ನಿರ್ಲಕ್ಷ್ಯಕ್ಕೆ ರೋಗಿ ಸಾವು; ಠಾಣೆ ಬಳಿ ಶವ ಇರಿಸಿ ಪ್ರತಿಭಟನೆ
Udupi-Chikmagalur Poll: ಬ್ರಹ್ಮಾವರ ಬ್ಲಾಕ್ ಕಾಂಗ್ರೆಸ್ ಸಮಿತಿ- ಇಂದು ಸಾರ್ವಜನಿಕ ಸಭೆ
Police Raid: 346 ರೌಡಿಶೀಟರ್ಗಳ ಮನೆಗಳ ಮೇಲೆ ದಾಳಿ
Harshika Poonachha ದಂಪತಿ ಮೇಲೆ ಹಲ್ಲೆ; ಇಬ್ಬರ ವಿರುದ್ಧ ಕೇಸ್ ದಾಖಲು
Tragedy: ಕುಂದಾಪುರದಿಂದ ನೆಂಟರ ಮನೆಗೆ ಬಂದಿದ್ದ ಇಬ್ಬರು ಬಾಲಕರು ನೀರು ಪಾಲು