ವಿಶ್ವ ಬ್ಯಾಡ್ಮಿಂಟನ್: ಸಿಂಧು ಬೆಳ್ಳಿಗೆ ತೃಪ್ತಿ
Team Udayavani, Aug 28, 2017, 10:25 AM IST
ಗ್ಲಾಸ್ಗೋ: ಭಾರತದ ಭರವಸೆಯ ಶಟ್ಲರ್ಗಳಾದ ಸೈನಾ ನೆಹ್ವಾಲ್ ಮತ್ತು ಪಿವಿ ಸಿಂಧು ಅವರನ್ನು ಅನುಕ್ರಮವಾಗಿ ಸೆಮಿಫೈನಲ್ ಮತ್ತು ಫೈನಲ್ನಲ್ಲಿ ವೀರೋಚಿತವಾಗಿ ಸೋಲಿಸಿದ ಜಪಾನಿನ ನಜೋಮಿ ಒಕುಹಾರಾ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ಶಿಪ್ನ ವನಿತಾ ವಿಭಾಗದ ಸಿಂಗಲ್ಸ್ ಪ್ರಶಸ್ತಿ ಗೆದ್ದುಕೊಂಡಿದ್ದಾರೆ. ಈ ಮೂಲಕ ಭಾರತಕ್ಕೆ ಚಿನ್ನ ನಿರಾಕರಿಸಿದ್ದಾರೆ. ಇದರಿಂದಾಗಿ ಸಿಂಧು ಬೆಳ್ಳಿ ಮತ್ತು ಸೈನಾ ಕಂಚಿಗೆ ತೃಪ್ತಿಪಟ್ಟುಕೊಳ್ಳಬೇಕಾಯಿತು.
ರವಿವಾರ ನಡೆದ ವನಿತೆಯರ ಫೈನಲ್ ಹೋರಾಟದಲ್ಲಿ ಸಿಂಧು ಮತ್ತು ಒಕುಹಾರಾ ವೀರಾವೇಶದಿಂದ ಆಡಿದರು. ಅಂತಿಮವಾಗಿ ಒಕುಹಾರಾ 21-19. 20-22, 22-20 ಗೇಮ್ಗಳಿಂದ ಗೆದ್ದು ಮೊದಲ ಬಾರಿ ಚಿನ್ನ ಗೆದ್ದು ಸಂಭ್ರಮಿಸಿದರು.
ವಿಶ್ವ ಚಾಂಪಿಯನ್ಶಿಪ್ನಲ್ಲಿ ಸಿಂಧುಗೆ 3ನೇ ಪದಕ: ಗ್ಲಾಸ್ಗೋದಲ್ಲಿ ರವಿವಾರ ನಡೆದ ವಿಶ್ವ ಚಾಂಪಿಯನ್ಶಿಪ್ ಅಂತಿಮ ಪಂದ್ಯದಲ್ಲಿ ಸೋತ ಸಿಂಧು ಬೆಳ್ಳಿ ಗೆದ್ದಿದ್ದಾರೆ. ಇದು ವಿಶ್ವ ಚಾಂಪಿಯನ್ಶಿಪ್ನಲ್ಲಿ ಸಿಂಧು ಗೆದ್ದ 3ನೇ ಪದಕ. ಇದಕ್ಕೂ ಮುನ್ನ ಅವರು ಎರಡು ಕಂಚಿನ ಪದಕಗಳನ್ನು ಗೆದ್ದಿದ್ದರು. 2013, 2014ರಲ್ಲಿ ನಡೆದ ಕೂಟಗಳಲ್ಲಿ ಸತತವಾಗಿ ಸೆಮಿಫೈನಲ್ ತಲುಪಿ ಸೋತಿದ್ದರು.
ಬೆಳ್ಳಿ ಗೆದ್ದು ಇತಿಹಾಸ ನಿರ್ಮಿಸಿದ್ದ ಸೈನಾ: ವಿಶ್ವ ಚಾಂಪಿಯನ್ ಶಿಪ್ ಫೈನಲ್ ತಲುಪಿದ ಭಾರತದ ಮೊದಲ ಸ್ಪರ್ಧಿ ಸೈನಾ ನೆಹ್ವಾಲ್. ಅವರು 2015ರಲ್ಲಿ ಜಕಾರ್ತಾದಲ್ಲಿ ನಡೆದ ಕೂಟದಲ್ಲಿ ಫೈನಲ್ಗೇರಿ ಅಲ್ಲಿ ವೀರೋಚಿತ ಹೋರಾಟ ನೀಡಿ ಸೋತಿದ್ದರು.
ಭಾರತೀಯರಿಗೆ 2ನೇ ಫೈನಲ್: ವಿಶ್ವ ಚಾಂಪಿಯನ್ಶಿಪ್ನಲ್ಲಿ ಫೈನಲ್ಗೇರಿದ ಭಾರತದ 2ನೇ ಸ್ಪರ್ಧಿ ಪಿ.ವಿ.ಸಿಂಧು. ಇದಕ್ಕೂ ಮುನ್ನ 2015ರಲ್ಲಿ ಸೈನಾ ನೆಹ್ವಾಲ್ ಫೈನಲ್ ತಲುಪಿ ಮೊದಲ ಸಾಧಕಿಯಾಗಿದ್ದರು.
ಒಟ್ಟಾರೆ ಭಾರತಕ್ಕೆ 6ನೇ ಪದಕ: ಸಿಂಧು ಅವರ ಬೆಳ್ಳಿ ಸೇರಿ ವಿಶ್ವ ಚಾಂಪಿಯನ್ಶಿಪ್ನಲ್ಲಿ ಭಾರತ ಗೆದ್ದಿರುವ ಪದಕಗಳ ಸಂಖ್ಯೆ 6ಕ್ಕೇರಿದೆ. ಸಿಂಧು 2 ಕಂಚು, 1 ಬೆಳ್ಳಿ , ಸೈನಾ ಬೆಳ್ಳಿ, ಪ್ರಕಾಶ್ ಪಡುಕೋಣೆ ಕಂಚು, ಮಹಿಳಾ ಡಬಲ್ಸ್ನಲ್ಲಿ ಅಶ್ವಿನಿ ಪೊನ್ನಪ್ಪ – ಜ್ವಾಲಾ ಗುಟ್ಟಾ ಕಂಚು ಇದರಲ್ಲಿ ಸೇರಿವೆ.
ಪದಕ ಗೆದ್ದ ಮೊದಲಿಗ ಪ್ರಕಾಶ್ ಪಡುಕೋಣೆ: ವಿಶ್ವ ಚಾಂಪಿಯನ್ಶಿಪ್ನಲ್ಲಿ ಭಾರತದ ಪರ ಪದಕ ಗೆದ್ದ ಮೊದಲ ಸಾಧಕ ಪ್ರಕಾಶ್ ಪಡುಕೋಣೆ. ಪುರುಷರ ಸಿಂಗಲ್ಸ್ನಲ್ಲಿ ಅವರು 1983ರಲ್ಲಿ ಸೆಮಿಫೈನಲ್ನಲ್ಲಿ ಸೋಲುವ ಮೂಲಕ ಕಂಚಿನ ಪದಕಕ್ಕೆ ತೃಪ್ತಿಪಟ್ಟಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್, ಸ್ಟೋಯಿನಿಸ್, ಅಗರ್ ಹೊರಕ್ಕೆ
ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್
Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್
IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್ಗಳ ಜಯ
Delhi: ದುಬಾರಿ ಮರ್ಸಿಡೆಸ್ ಕಾರಿನಲ್ಲಿ ಡ್ರಗ್ಸ್ ಸಾಗಾಟ-ರಾಷ್ಟ್ರಮಟ್ಟದ ಕುಸ್ತಿಪಟು ಬಂಧನ!
MUST WATCH
ಹೊಸ ಸೇರ್ಪಡೆ
Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್, ಸ್ಟೋಯಿನಿಸ್, ಅಗರ್ ಹೊರಕ್ಕೆ
ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್
Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್
Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್ಗಳು: ಪ್ರವಾಸಿಗರಿಗೆ ಭಯ
IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್ಗಳ ಜಯ