ಉದ್ಘಾಟನಾ ಪಂದ್ಯದಲ್ಲೇ ಭಾರತದ ಆಟ: ಗಾವಸ್ಕರ್‌ ಬ್ಯಾಟಿಂಗ್‌ ಅಭ್ಯಾಸ!

ಇಂಗ್ಲೆಂಡ್‌-ಭಾರತ ನಡುವೆ ನಡೆದಿತ್ತು ವಿಶ್ವಕಪ್‌ ಮೊದಲ ಪಂದ್ಯ

Team Udayavani, May 17, 2019, 9:38 AM IST

suniul

ವಿಶ್ವಕಪ್‌ ಚರಿತ್ರೆಯ ಉದ್ಘಾಟನಾ ಪಂದ್ಯದಲ್ಲೇ ಭಾರತ ಆಡಲಿಳಿದಿತ್ತು ಎಂಬುದು ಹೆಮ್ಮೆಯ ಸಂಗತಿ. 1975ರ ಜೂನ್‌ 7ರಂದು ಆತಿಥೇಯ ಇಂಗ್ಲೆಂಡ್‌ ಮತ್ತು ಭಾರತ ತಂಡಗಳು ಐತಿಹಾಸಿಕ ಲಾರ್ಡ್ಸ್‌ ನಲ್ಲಿ ಕಣಕ್ಕಿಳಿಯುವುದರೊಂದಿಗೆ ವಿಶ್ವಕಪ್‌ಗೆ ಅಧಿಕೃತ ಚಾಲನೆ ಲಭಿಸಿತು.

ಏಕದಿನ ಮಟ್ಟಿಗೆ ಆಗ ಎಲ್ಲವೂ ಅನನುಭವಿ ತಂಡಗಳೇ. ಭಾರತ ಅದುವರೆಗೆ ಕೇವಲ 3 ಏಕದಿನ ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿತ್ತು. ಹೀಗಾಗಿ ಸೀಮಿತ ಓವರ್‌ಗಳ ಪಂದ್ಯದ ಪರಿಭಾಷೆ, ಆಟದ ಶೈಲಿ… ಯಾವುದನ್ನೂ ಅರ್ಥೈಸಿಕೊಂಡಿರಲಿಲ್ಲ. ಭಾರತ ಆಗಿನ್ನೂ ಟೆಸ್ಟ್‌ ಗುಂಗಿನಲ್ಲೇ ಇತ್ತು. ಇದಕ್ಕೆ ಉದ್ಘಾಟನಾ ಪಂದ್ಯದ ಫ‌ಲಿತಾಂಶವೇ ಸಾಕ್ಷಿ.

202 ರನ್ನುಗಳ ಭಾರೀ ಸೋಲು ಈ ಪಂದ್ಯದಲ್ಲಿ ಭಾರತಕ್ಕೆ ಎದುರಾದದ್ದು 202 ರನ್ನುಗಳ ಸೋಲು! ಮೈಕ್‌ ಡೆನ್ನಿಸ್‌ ನೇತೃತ್ವದ ಇಂಗ್ಲೆಂಡ್‌ ಮೊದಲು ಬ್ಯಾಟಿಂಗ್‌ ನಡೆಸಿ 4 ವಿಕೆಟಿಗೆ 344 ರನ್‌ ಪೇರಿಸಿತು. ಭಾರತದ ಸ್ಕೋರ್‌ 60 ಓವರ್‌ಗಳಲ್ಲಿ 3 ವಿಕೆಟಿಗೆ 132 ರನ್‌!

174 ಎಸೆತಗಳಿಂದ 36 ರನ್‌! ಆರಂಭಕಾರ ಸುನೀಲ್‌ ಗಾವಸ್ಕರ್‌ ಪೂರ್ತಿ 60 ಓವರ್‌ಗಳ ತನಕ ಕ್ರೀಸ್‌ ಆಕ್ರಮಿಸಿ ಕೊಂಡು, 174 ಎಸೆತಗಳಿಂದ ಔಟಾಗದೆ 36 ರನ್‌ ಮಾಡುವ ಮೂಲಕ ಭಾರತದ “ಏಕದಿನ ಸಾಮರ್ಥ್ಯ’ವನ್ನು ಜಗಜ್ಜಾಹೀರು ಮಾಡಿದರು! 59 ಎಸೆತಗಳಿಂದ 37 ರನ್‌ ಮಾಡಿದ ಗುಂಡಪ್ಪ ವಿಶ್ವನಾಥ್‌ ಅವರದೇ ಭಾರತದ ಸರದಿಯ ಅತ್ಯಧಿಕ ವೈಯಕ್ತಿಕ ಗಳಿಕೆ. ಇಂಗ್ಲೆಂಡ್‌ ಪರ ಆರಂಭಕಾರ ಡೆನ್ನಿಸ್‌ ಅಮಿಸ್‌ 147 ಎಸೆತಗಳಿಂದ 137 ರನ್‌ ಬಾರಿಸಿ ವಿಶ್ವಕಪ್‌ ಇತಿಹಾಸದ ಮೊದಲ ಶತಕಕ್ಕೆ ಸಾಕ್ಷಿಯಾದರು. ವಿಶ್ವಕಪ್‌ನಲ್ಲಿ ಮೊದಲ ವಿಕೆಟ್‌ ಉರುಳಿಸಿದ ಸಾಧಕನೆಂಬ ಹೆಗ್ಗಳಿಕೆ ಮೊಹಿಂದರ್‌ ಅಮರನಾಥ್‌ ಅವರದಾಯಿತು.

ಗಾವಸ್ಕರ್‌ ಬ್ಯಾಟಿಂಗ್‌ ಅಭ್ಯಾಸ!
ಉದ್ಘಾಟನಾ ಪಂದ್ಯದಲ್ಲಿ ಸುನೀಲ್‌ ಗಾವಸ್ಕರ್‌ ಅವರ ಆಮೆಗತಿಯ ಆಟ ಕಂಡು ರೋಸಿಹೋದ ಅಭಿಮಾನಿಯೊಬ್ಬ ಅಂಗಳಕ್ಕೆ ಹಾರಿ ಅವರನ್ನು ತರಾಟೆಗೆ ತೆಗೆದುಕೊಂಡ ಘಟನೆಯೂ ಸಂಭವಿಸಿತ್ತು. ಬಳಿಕ ತಮ್ಮ ಆಟದ ಕುರಿತು ಪ್ರತಿಕ್ರಿಯಿಸಿದ ಗಾವಸ್ಕರ್‌, “ಇಂಗ್ಲೆಂಡಿನ ಆ ಬೃಹತ್‌ ಮೊತ್ತವನ್ನು ಹಿಂದಿಕ್ಕಲು ನಮ್ಮಿಂದ ಹೇಗೂ ಆಗುತ್ತಿರಲಿಲ್ಲ. ಹೀಗಾಗಿ ನಾನು ಬ್ಯಾಟಿಂಗ್‌ ಪ್ರ್ಯಾಕ್ಟೀಸ್‌ ನಡೆಸಿದೆ’ ಎಂದಿದ್ದರು!

ಭಾರತ ತಂಡ
ಎಸ್‌. ವೆಂಕಟರಾಘವನ್‌ (ನಾಯಕ), ಸುನೀಲ್‌ ಗಾವಸ್ಕರ್‌, ಅಂಶುಮನ್‌ ಗಾಯಕ್ವಾಡ್‌,  ಏಕನಾಥ್‌ ಸೋಲ್ಕರ್‌, ಜಿ.ಆರ್‌. ವಿಶ್ವನಾಥ್‌, ಬೃಜೇಶ್‌ ಪಟೇಲ್‌, ಮೊಹಿಂದರ್‌ ಅಮರನಾಥ್‌,  ಫ‌ರೂಖ್‌ ಇಂಜಿನಿಯರ್‌, ಅಬಿದ್‌ ಅಲಿ, ಮದನ್‌ಲಾಲ್‌, ಕರ್ಸನ್‌ ಘಾವ್ರಿ, ಬಿಶನ್‌ ಸಿಂಗ್‌ ಬೇಡಿ.

ಟಾಪ್ ನ್ಯೂಸ್

Ram Navami Procession: ರಾಮನವಮಿ ಮೆರವಣಿಗೆ ವೇಳೆ ಘರ್ಷಣೆ: 20ಕ್ಕೂ ಹೆಚ್ಚು ಮಂದಿಗೆ ಗಾಯ

Ram Navami Procession: ರಾಮನವಮಿ ಮೆರವಣಿಗೆ ವೇಳೆ ಘರ್ಷಣೆ: 20ಕ್ಕೂ ಹೆಚ್ಚು ಮಂದಿಗೆ ಗಾಯ

2-shimoga

Bhadravathi: ಲಾರಿ ಡಿಕ್ಕಿ, ರೈಲು ಹಳಿಗಳು ಏರುಪೇರು; ಎರಡೂವರೆ ತಾಸು ಪ್ರಯಾಣಿಕರು ಹೈರಾಣು

1-24-thursday

Daily Horoscope: ಕೊಟ್ಟ ಮಾತಿಗೆ ತಪ್ಪದಂತೆ ಎಚ್ಚರಿಕೆ ಇರಲಿ,ಅನವಶ್ಯ ವಿವಾದಗಳಿಂದ ದೂರವಿರಿ

Elections; ದೇಶದಲ್ಲಿ ಹಂತ 1: ಬಹಿರಂಗ ಪ್ರಚಾರ ಅಂತ್ಯ, ನಾಳೆ ಮತದಾನ

Elections; ದೇಶದಲ್ಲಿ ಹಂತ 1: ಬಹಿರಂಗ ಪ್ರಚಾರ ಅಂತ್ಯ, ನಾಳೆ ಮತದಾನ

1eqqewe

IPL; ಪಂಜಾಬ್‌ ಕಿಂಗ್ಸ್‌-ಮುಂಬೈ ಇಂಡಿಯನ್ಸ್‌ : ಒಂದೇ ದೋಣಿಯ ಪಯಣಿಗರು

Lok Sabha Polls 2024 ಕರ್ನಾಟಕದ ನಂಟು ಹೊರರಾಜ್ಯದಲ್ಲಿ ಸ್ಪರ್ಧೆ

Lok Sabha Polls 2024; ಕರ್ನಾಟಕದ ನಂಟು ಹೊರರಾಜ್ಯದಲ್ಲಿ ಸ್ಪರ್ಧೆ

ಭಾರತದ ಜಿಡಿಪಿ ಶೇ.6.8 ದರದಲ್ಲಿ ಪ್ರಗತಿ: ಐಎಂಎಫ್ ಅಂದಾಜು

ಭಾರತದ ಜಿಡಿಪಿ ಶೇ.6.8 ದರದಲ್ಲಿ ಪ್ರಗತಿ: ಐಎಂಎಫ್ ಅಂದಾಜು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

vivada

ವಿಶ್ವಕಪ್‌ ಮುಗಿದರೂ ವಿವಾದ ಮುಗಿದಿಲ್ಲ !

williams

ಐಸಿಸಿ ನಿಯಮ ಪ್ರಶ್ನಿಸುವ ಉದ್ದೇಶವಿಲ್ಲ: ವಿಲಿಯಮ್ಸನ್‌

stoks

4 ವರ್ಷಗಳ ಶ್ರಮಕ್ಕೆ ಇಂದು ಪ್ರತಿಫ‌ಲ: ಸ್ಟೋಕ್ಸ್‌

Neesham

ಕ್ರೀಡೆಗಿಂತ ಬೇಕರಿಯೇ ಬೆಸ್ಟ್ : ಜೇಮ್ಸ್ ನೀಶಮ್ ಹತಾಶೆಯ ನುಡಿ

stokes

ಓವರ್‌ ಥ್ರೋ ಎಸೆತದಲ್ಲಿ 6 ಅಲ್ಲ, ಐದು ರನ್ ಆಗಬೇಕಿತ್ತು!

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Ram Navami Procession: ರಾಮನವಮಿ ಮೆರವಣಿಗೆ ವೇಳೆ ಘರ್ಷಣೆ: 20ಕ್ಕೂ ಹೆಚ್ಚು ಮಂದಿಗೆ ಗಾಯ

Ram Navami Procession: ರಾಮನವಮಿ ಮೆರವಣಿಗೆ ವೇಳೆ ಘರ್ಷಣೆ: 20ಕ್ಕೂ ಹೆಚ್ಚು ಮಂದಿಗೆ ಗಾಯ

2-shimoga

Bhadravathi: ಲಾರಿ ಡಿಕ್ಕಿ, ರೈಲು ಹಳಿಗಳು ಏರುಪೇರು; ಎರಡೂವರೆ ತಾಸು ಪ್ರಯಾಣಿಕರು ಹೈರಾಣು

1-24-thursday

Daily Horoscope: ಕೊಟ್ಟ ಮಾತಿಗೆ ತಪ್ಪದಂತೆ ಎಚ್ಚರಿಕೆ ಇರಲಿ,ಅನವಶ್ಯ ವಿವಾದಗಳಿಂದ ದೂರವಿರಿ

Elections; ದೇಶದಲ್ಲಿ ಹಂತ 1: ಬಹಿರಂಗ ಪ್ರಚಾರ ಅಂತ್ಯ, ನಾಳೆ ಮತದಾನ

Elections; ದೇಶದಲ್ಲಿ ಹಂತ 1: ಬಹಿರಂಗ ಪ್ರಚಾರ ಅಂತ್ಯ, ನಾಳೆ ಮತದಾನ

1eqqewe

IPL; ಪಂಜಾಬ್‌ ಕಿಂಗ್ಸ್‌-ಮುಂಬೈ ಇಂಡಿಯನ್ಸ್‌ : ಒಂದೇ ದೋಣಿಯ ಪಯಣಿಗರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.