ದ್ರವ್ಯಸೇವನೆ ಆರೋಪ: ಕಾಲಮಿತಿಯೊಳಗೆ ಸಿಬಿಐ ತನಿಖೆಗೆ ಯಾದವ್ ಆಗ್ರಹ
Team Udayavani, Jan 21, 2019, 11:01 AM IST
ಹೊಸದಿಲ್ಲಿ : ದ್ರವ್ಯ ಸೇವನೆಗಾಗಿ 2016ರ ರಯೋ ಡಿ ಜನೈರೋ ಒಲಿಂಪಿಕ್ಸ್ ಗೆ ಮುನ್ನ ಅಮಾನತಾಗಿದ್ದ ಭಾರತೀಯ ಕುಸ್ತಿ ಪಟು ನರಸಿಂಗ್ ಯಾದವ್ ಅವರು ಇಂದು ಸೋಮವಾರ ತನ್ನ ವಿರುದ್ಧದ ಆರೋಪಗಳ ತನಿಖೆಯನ್ನು ಕಾಲಮಿತಿಯೊಳಗೆ ಮುಗಿಸುವಂತೆ ಸಿಬಿಐ ಗೆ ನಿರ್ದೇಶ ನೀಡಬೇಕೆಂದು ಕೋರಿ ದಿಲ್ಲಿ ಹೈಕೋರ್ಟ್ ಮೆಟ್ಟಲೇರಿದ್ದಾರೆ.
ಯಾದವ್ ಅವರ ಮನವಿಯ ವಿಚಾರಣೆ ನಡೆಸಿದ ದಿಲ್ಲಿ ಹೈಕೋರ್ಟ್, ಅಮಾನತಾಗಿರುವ ಕುಸ್ತಿ ಪಟುವಿನ ವಿರುದ್ಧದ ಆರೋಪಗಳ ತನಿಖೆಯನ್ನು ಅತ್ಯಂತ ನಿಧಾನ ಗತಿಯಲ್ಲಿ ನಡೆಸುತ್ತಿರುವ ಸಿಬಿಐ ಅನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿತು.
ಶೀಘ್ರ ತನಿಖೆ ನಡೆಸುವಲ್ಲಿ ಸಿಬಿಐ ತನ್ನಲ್ಲಿನ ಸಂಬಂಧಿತ ಅಧಿಕಾರಿಗಳಿಂದ ಅಗತ್ಯ ಸೂಚನೆಯನ್ನು ಪಡೆಯದೇ ಹೋದಲ್ಲಿ ತಾನು ಮಧ್ಯಪ್ರವೇಶಿಸಿ ಸೂಕ್ತ ಆದೇಶ ಹೊರಡಿಸಬೇಕಾದೀತು ಎಂದು ಹೈಕೋರ್ಟ್ ಸಿಬಿಐಗೆ ಎಚ್ಚರಿಕೆ ನೀಡಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Jayaprakash Hegde “ಉತ್ತಮ ಕೆಲಸ ಮಾಡಿಸಿಕೊಳ್ಳಬೇಕಾದ ಅವಶ್ಯಕತೆ ಮತದಾರರಿಗಿದೆ’
Kundapura “ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಗೆಲ್ಲಿಸಿ’: ಜಯಪ್ರಕಾಶ್ ಹೆಗ್ಡೆ
Malpe ಮೀನುಗಾರಿಕೆ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ: ಜೆ.ಪಿ. ಹೆಗ್ಡೆ
Subramanya ಏನೆಕಲ್ಲು: ಕಾರಿಗೆ ಗೂಡ್ಸ್ ಆಟೋ ಢಿಕ್ಕಿ
Rahul Gandhi: ಜಾತಿಗಣತಿಯನ್ನು ಯಾವ ಶಕ್ತಿಯೂ ತಡೆಯಲಾರದು: ರಾಹುಲ್ ಗಾಂಧಿ