ಗೊಂದಲ ಮೂಡಿಸಿದ ರೆಸ್ಲರ್ ನಿಶಾ ದಹಿಯಾ ಹತ್ಯೆ ಸುದ್ದಿ
Team Udayavani, Nov 11, 2021, 5:08 AM IST
ಸೋನೆಪತ್: ನಿಶಾ ದಹಿಯಾ ಎಂಬ ಹೆಸರಿನ ವನಿತಾ ಕುಸ್ತಿಪಟು ಮತ್ತು ಆಕೆಯ ಸಹೋದರನ ಹತ್ಯೆ ಪ್ರಕರಣ ಬುಧವಾರ ಸಂಜೆ ಭಾರೀ ಗೊಂದಲ ಮೂಡಿಸಿತು.
ಹತ್ಯೆಯಾದ ನಿಶಾ ದಹಿಯಾ ಅಂಡರ್-23 ವಿಭಾಗದ ವಿಶ್ವ ಚಾಂಪಿಯನ್ಶಿಪ್ ಕಂಚಿನ ಪದಕ ವಿಜೇತ ಕುಸ್ತಿಪಟು ಎಂದು ಬ್ರೇಕಿಂಗ್ ನ್ಯೂಸ್ ಬರತೊಡಗಿತು. ಆದರೆ ತಾನು ಆರಾಮವಾಗಿದ್ದೇನೆ, ಉತ್ತರಪ್ರದೇಶದ ಗೋಂಡಾಕ್ಕೆ ಕುಸ್ತಿ ಸ್ಪರ್ಧೆಯಲ್ಲಿ ಭಾಗವಹಿಸಲು ಆಗಮಿಸಿದ್ದೇನೆ ಎಂದು ನಿಶಾ ದಹಿಯಾ ವೀಡಿಯೋ ಮೂಲಕ ಸ್ಪಷ್ಟನೆ ನೀಡಿದ ಬಳಿಕವಷ್ಟೇ ಈ ಗೊಂದಲಕ್ಕೆ ತೆರೆ ಬಿದ್ದದ್ದು.
ವೀಡಿಯೋದಲ್ಲಿ ಒಲಿಂಪಿಕ್ಸ್ ಕಂಚಿನ ಪದಕ ವಿಜೇತೆ ಸಾಕ್ಷಿ ಮಲಿಕ್ ಕೂಡ ಇದ್ದರು.
ಸೋನೆಪತ್ನ ಹಲಾಲ್ಪುರದಲ್ಲಿರುವ “ಸುಶೀಲ್ ಕುಮಾರ್ ರೆಸ್ಲಿಂಗ್ ಕುಸ್ತಿ ಅಕಾಡೆಮಿ’ಯ ಹೊರಗೆ ಅಪರಿಚಿತರು ನಿಶಾ ದಹಿಯಾ ಹೆಸರಿನ ಬೇರೋರ್ವ ಕುಸ್ತಿಪಟು, ಆಕೆಯ ಸಹೋದರ ಸೂರಜ್ ದಹಿಯಾ ಅವರನ್ನು ಹತ್ಯೆ ಮಾಡಿದ್ದರು. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡ ಇವರ ತಾಯಿಯನ್ನು ರೋಹrಕ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಇದನ್ನೂ ಓದಿ:96 ಲಕ್ಷ ಕೋಟಿ ರೂ. ಪರಿಹಾರ ನೀಡಿ! ಮಾಲಿನ್ಯದ ದುಷ್ಪರಿಣಾಮ ತಡೆಗೆ ಆರ್ಥಿಕ ಸಹಾಯ ಕೋರಿಕೆ
“ಹತ್ಯೆಗೊಳಗಾದ ಕುಸ್ತಿಪಟು ಹಲಾಲ್ಪುರ ಗ್ರಾಮದವರು. ಆಕೆಯ ಹೆಸರು ಕೂಡ ನಿಶಾ ದಹಿಯಾ. ಆದರೆ ಅಂಡರ್-23 ವಿಶ್ವ ಚಾಂಪಿಯನ್ಶಿಪ್ನಲ್ಲಿ ಪದಕ ಗೆದ್ದ ನಿಶಾ ದಹಿಯಾ ಅಲ್ಲ’ ಎಂದು ಕೋಚ್ ರಣಧೀರ್ ಮಲಿಕ್ ಸ್ಪಷ್ಟಪಡಿಸಿದ್ದಾರೆ.
ಹತ್ಯೆಗೆ ಕಾರಣ ಏನೆಂದು ತಿಳಿದು ಬಂದಿಲ್ಲ. ಇದರ ಹಿಂದೆ ಅಕಾಡೆಮಿಯ ಕೋಚ್ ಒಬ್ಬರು ಶಾಮೀಲಾಗಿರುವ ಸಾಧ್ಯತೆ ಇದೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ತನಿಖೆ ಮುಂದುವರಿದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL; ಲಕ್ನೋ ಸೂಪರ್ ಜೈಂಟ್ಸ್ ಎದುರಾಳಿ:ಚೆನ್ನೈಗೆ ಇದು ಸೇಡಿನ ಪಂದ್ಯ
IPL; ಆಸ್ಟ್ರೇಲಿಯನ್ ಆಲ್ರೌಂಡರ್ ಮಾರ್ಷ್ ಔಟ್
IPL ನಾಯಕರಿಗೆ ದಂಡ, ಕೊಹ್ಲಿಗೂ ದಂಡ ; 29 ಸಲ 200 ರನ್ ನೀಡಿದ ಆರ್ಸಿಬಿ!
IPL; ಮುಂಬೈ ಎದುರು ರಾಜಸ್ಥಾನ್ ಯಶಸ್ವಿ ಗೆಲುವಿನ ಓಟ: ಜೈಸ್ವಾಲ್ ಅಮೋಘ ಶತಕ
IPL 2024; ಏಳು ಪಂದ್ಯ ಸೋತರೂ ಇನ್ನೂ ಆರ್ ಸಿಬಿಗೆ ಇದೆ ಪ್ಲೇ ಆಫ್ ಅವಕಾಶ: ಇಲ್ಲಿದೆ ವಿವರ
MUST WATCH
ಹೊಸ ಸೇರ್ಪಡೆ
ತಾಳಿಭಾಗ್ಯ ಯೋಜನೆ ತಂದ ‘ಕಾಂಗ್ರೆಸ್’ ಕಿತ್ತುಕೊಳ್ಳುವ ಕೆಲಸ ಎಂದೂ ಮಾಡಲ್ಲ: H.K. Patil
Mumbai Airport: ನ್ಯೂಡಲ್ಸ್ ಪ್ಯಾಕೇಟ್ ನೊಳಗೆ ಕೋಟ್ಯಂತರ ಮೌಲ್ಯದ ವಜ್ರ ಕಳ್ಳಸಾಗಣೆ!
ʼದುರ್ಗಿʼಯಾಗಿ ಚಂದನವನಕ್ಕೆ ಕಾಲಿಟ್ಟ ಕಾಲಿವುಡ್ ಬೆಡಗಿ: ಡಾಲಿ ಜೊತೆ ರೊಮ್ಯಾನ್ಸ್
LS Polls: ಮಹಿಳಾ ಮೀಸಲಾತಿ ಕೊಟ್ಟಿದ್ದು ಮೋದಿ, ಕಾಂಗ್ರೆಸ್ನಿಂದ ಸುಳ್ಳಿನ ರಾಜಕಾರಣ: BYR
ಮಗಳ ಪ್ರಕರಣ ದಿಕ್ಕು ತಪ್ಪುತ್ತಿದೆ ಎಂದಿದ್ದ ನೇಹಾಳ ತಂದೆ ರಾಜ್ಯ ಸರಕಾರದ ಕ್ಷಮೆ ಕೇಳಿದ್ದೇಕೆ?