ಕುಸ್ತಿಪಟು ಸತೀಶ್ಗೆ 25 ಲಕ್ಷ ರೂ. ಪರಿಹಾರ ನೀಡಲು ದಿಲ್ಲಿ ಹೈಕೋರ್ಟ್
Team Udayavani, Sep 4, 2017, 9:35 AM IST
ಹೊಸದಿಲ್ಲಿ: ಕುಸ್ತಿಪಟು ಸತೀಶ್ ಕುಮಾರ್ ವಿರುದ್ಧ ಬೇಜವಾಬ್ದಾರಿಯುತ ನಿಷೇಧ ಕ್ರಮ ತೆಗೆದುಕೊಂಡ ಭಾರತೀಯ ಕುಸ್ತಿ ಫೆಡರೇಶನ್ (ಡಬ್ಲ್ಯುಎಫ್ಐ)ಕ್ಕೆ ದಿಲ್ಲಿ ಹೈಕೋರ್ಟ್ ಚಾಟಿ ಬೀಸಿದೆ. 25 ಲಕ್ಷ ರೂ.ಪರಿಹಾರ ನೀಡಬೇಕು ಎಂದು ರವಿವಾರ ಆದೇಶ ನೀಡಿದೆ. ಅಷ್ಟೇ ಅಲ್ಲ ಸತೀಶ್ ಕುಮಾರ್ ಭವಿಷ್ಯದ ಜತೆ ಚೆಲ್ಲಾಟ ಆಡಿರುವ ಅಧಿಕಾರಿ ವಿರುದ್ಧ ಭಾರತೀಯ ಕುಸ್ತಿ ಫೆಡರೇಶನ್ ತನಿಖೆ ನಡೆಸಿ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಸೂಚಿಸಿದೆ. ಮುಂದಿನ ದಿನಗಳಲ್ಲಿ ಇಂತಹದೊಂದು ಅಚಾತುರ್ಯ ಮತ್ತೆ ಮರುಕಳಿಸಬಾರದು ಎನ್ನುವುದನ್ನು ಕೋರ್ಟ್ ಇದೇ ವೇಳೆ ಸ್ಪಷ್ಟಪಡಿಸಿದೆ. ಅಲ್ಲದೆ ಕುರುಡು ಕಣ್ಣಿನಿಂದ ಕ್ರಮ ತೆಗೆದುಕೊಂಡ ಡಬ್ಲ್ಯುಎಫ್ಐ ವಿರುದ್ಧ ಕೋರ್ಟ್ ಟೀಕಾ ಪ್ರಹಾರ ಮಾಡಿದೆ. ಇದರಲ್ಲಿ ಸತೀಶ್ ಅವರದ್ದು ಏನೂ ತಪ್ಪಿಲ್ಲ. ಎಂದು ನ್ಯಾಯಾಲಯ ಒಟ್ಟು 30 ಪುಟಗಳ ಸುದೀರ್ಘ ವಿವರಣೆಯಲ್ಲಿ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Lok Sabha Polls: “ಮೋದಿ ಮತ್ತೂಮ್ಮೆ ಪ್ರಧಾನಿಯಾಗಿಸುವ ಪಣ ತೊಡಿ’ : ಬಿ.ವೈ. ರಾಘವೇಂದ್ರ
Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್
Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ
ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್
LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ