ಸಿಎಬಿ ಜತೆಗಿನ ವೃದ್ಧಿಮಾನ್ ಸಾಹಾ ಒಡನಾಟ ಅಂತ್ಯ
Team Udayavani, Jul 2, 2022, 11:01 PM IST
ಕೋಲ್ಕತಾ: ವೃದ್ಧಿಮಾನ್ ಸಾಹಾ ಅವರಿಗೆ ಕ್ರಿಕೆಟ್ ಅಸೋಸಿಯೇಶನ್ ಆಫ್ ಬಂಗಾಲ (ಸಿಎಬಿ) ಶನಿವಾರ ನಿರಾಕ್ಷೇಪಣಾ ಪತ್ರವನ್ನು ನೀಡಿದೆ. ಇದರಿಂದ ಅವರ ಸಿಎಬಿ ಜತೆಗಿನ 15 ವರ್ಷಗಳ ಒಡನಾಟ ಕೊನೆಗೊಂಡಿದೆ.
ವಯಸ್ಸಾದ ಎರಡನೇ ವಿಕೆಟ್ಕೀಪರ್ನ ಅಗತ್ಯವಿಲ್ಲ ಎಂದು ಭಾರತೀಯ ತಂಡ ವ್ಯವಸ್ಥಾಪಕರು ಸ್ಪಷ್ಟವಾಗಿ ಹೇಳಿದ ಬಳಿಕ ಸಾಹಾ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಅವರನ್ನು ಟೀಕಿಸಲು ಆರಂಭಿಸಿದ್ದರು. ಮುಖ್ಯ ಕೋಚ್ ದ್ರಾವಿಡ್ ಬಗ್ಗೆ ಹೇಳಲು ಯಾವುದೇ ವಿಷಯವಿಲ್ಲ ಎಂದು ಸಾಹಾ ಹೇಳಿದ್ದರು. ಮುಂದಿನ ಅಕ್ಟೋಬರ್ಗೆ 38ನೇ ವರ್ಷಕ್ಕೆ ಕಾಲಿಡಲಿರುವ ಸಾಹಾ 40 ಟೆಸ್ಟ್ಗಳಲ್ಲಿ ಆಡಿದ ಅನುಭವ ಹೊಂದಿದ್ದಾರೆ.
ಸಿಎಬಿಗೆ ಬಂದಿರುವ ವೃದ್ಧಿಮಾನ್ ಸಾಹಾ ಅವರು ಅಸೋಸಿಯೇಶನ್ನಿಂದ ನಿರಾಕ್ಷೇಪಣಾ ಪತ್ರ ಪಡೆಯಲು ಅಧ್ಯಕ್ಷ ಅವಿಶೇಕ್ ದಾಲಿ¾ಯಾ ಅವರಿಗೆ ಅರ್ಜಿ ಸಲ್ಲಿಸಿದರು ಎಂದು ಸಿಎಬಿ ತಿಳಿಸಿದೆ.
ಸಾಹಾ ಅವರಿಗೆ ಕೋರಿಕೆಗೆ ಒಪ್ಪಿಗೆ ಸೂಚಿಸಿತಲ್ಲದೇ ಇನ್ನೊಂದು ರಾಜ್ಯದ ಪರ ಕರ್ತವ್ಯ ನಿರ್ವಹಿಸಲು ನಿರಾಕ್ಷೇಣ ಪತ್ರ ನೀಡಿತು. ಸಾಹಾ ಅವರು ತ್ರಿಪುರ ಪರ ಆಟಗಾರ ತಥಾ ಮೆಂಟರ್ ಆಗಿ ಕರ್ತವ್ಯ ನಿರ್ವಹಿಸುವ ಸಾಧ್ಯತೆಯಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Usman Ghani: ಮೋದಿ ಹೇಳಿಕೆ ಟೀಕೆ ಮಾಡಿದ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಉಚ್ಛಾಟನೆ
Lok Sabha Polls: “ಮೋದಿ ಮತ್ತೂಮ್ಮೆ ಪ್ರಧಾನಿಯಾಗಿಸುವ ಪಣ ತೊಡಿ’ : ಬಿ.ವೈ. ರಾಘವೇಂದ್ರ
Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್
Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ
ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್