ಟೋಕಿಯೋದಲ್ಲಿ ಚಿನ್ನವೇ ಗುರಿ: ಬ್ಲೇಕ್‌


Team Udayavani, Dec 3, 2019, 12:16 AM IST

PTI12_2_2019_000148A

ಮುಂಬಯಿ: ಜಮೈಕಾದ ವಿಶ್ವವಿಖ್ಯಾತ ಓಟಗಾರ ಯೋಹಾನ್‌ ಬ್ಲೇಕ್‌ ಮುಂಬಯಿಗೆ ಆಗಮಿಸಿದ್ದಾರೆ. ಅವರು ಫೆಬ್ರವರಿಯಲ್ಲಿ ನಡೆಯಲಿರುವ “ರೋಡ್‌ ಸೇಫ್ಟಿ ವರ್ಲ್ಡ್ ಸೀರಿಸ್‌’ ಟಿ20 ಸರಣಿಯ ಪ್ರಚಾರ ನಡೆಸುತ್ತಿದ್ದು, ಸೋಮವಾರ ಮಾಧ್ಯಮದವರೊಂದಿಗೆ ಆತ್ಮೀಯವಾಗಿ ಬೆರೆತರು. ಮುಂದಿನ ವರ್ಷದ ಟೋಕಿಯೊ ಒಲಿಂಪಿಕ್ಸ್‌ 100 ಮೀ. ಓಟದಲ್ಲಿ ಚಿನ್ನದ ಪದಕ ಗೆಲ್ಲುವುದೇ ತನ್ನ ಗುರಿ ಎಂದರು.

“100 ಮೀ. ಓಟದಲ್ಲಿ ನಾನು ಯಾವತ್ತೂ ಫೇವರಿಟ್‌. ನಾನು ವಿಶ್ವದಲ್ಲೇ ದ್ವಿತೀಯ ಅತೀ ವೇಗದ ಓಟಗಾರ. ನನ್ನ ಮುಂದಿರುವುದು ಕೊನೆಯ ಒಲಿಂಪಿಕ್ಸ್‌. ಟೋಕಿಯೋದಲ್ಲಿ ಚಿನ್ನದ ಪದಕವನ್ನೇ ಗೆಲ್ಲುವುದು ನನ್ನ ಗುರಿ ಮತ್ತು ಇದನ್ನು ನಾನು ಖಂಡಿತ ಸಾಧಿಸುವ ವಿಶ್ವಾಸದಲ್ಲಿದ್ದೇನೆ’ ಎಂದು ಬ್ಲೇಕ್‌ ಹೇಳಿದರು.

“ಈ ವರೆಗೆ ನಾನು ಎಷ್ಟೋ ಪದಕಗಳನ್ನು ಗೆದ್ದಿರಬಹುದು. ಆದರೆ ಒಲಿಂಪಿಕ್ಸ್‌ ಚಿನ್ನಕ್ಕೆ ಸಾಟಿಯಾಗುವಂಥದ್ದು ಯಾವುದೂ ಇಲ್ಲ’ ಎಂದರು.

ಇದೇ ವೇಳೆ ಮುಂದಿನ ವರ್ಷದ “ಡೈಮಂಡ್‌ ಲೀಗ್‌’ ಕೂಟದಿಂದ 200 ಮೀ. ರೇಸ್‌ ಸಹಿತ 4 ಸ್ಪರ್ಧೆಗಳನ್ನು ಕೈಬಿಟ್ಟ ವಿಶ್ವ ಆ್ಯತ್ಲೆಟಿಕ್ಸ್‌ ಅಸೋಸಿಯೇಶನ್‌ ಅಧ್ಯಕ್ಷ ಸೆಬಾಸ್ಟಿಯನ್‌ ಕೋ ಅವರನ್ನು ಬ್ಲೇಕ್‌ ತರಾಟೆಗೆ ತೆಗೆದುಕೊಂಡರು. ಇದೊಂದು ಮೂರ್ಖ ನಿರ್ಧಾರ ಎಂದರು.

ಭಾರತದಲ್ಲಿ ಪ್ರತಿಭಾ ಶೋಧ
ಟೋಕಿಯೊ ಒಲಿಂಪಿಕ್ಸ್‌ ಬಳಿಕ ಭಾರತದಲ್ಲಿ ಆ್ಯತ್ಲೆಟಿಕ್ಸ್‌ ಪ್ರತಿಭೆಗಳನ್ನು ಹುಡುಕುವ ಕಾರ್ಯಕ್ರಮವೊಂದನ್ನು ನಡೆಸುವುದಾಗಿಯೂ ಬ್ಲೇಕ್‌ ಹೇಳಿದರು. “ಭಾರತದಲ್ಲಿ ಬಹಳಷ್ಟು ಆ್ಯತ್ಲೆಟಿಕ್ಸ್‌ ಪ್ರತಿಭೆಗಳಿವೆ. ಕೆಲವರನ್ನು ನಾನು ದೋಹಾದಲ್ಲಿ ಭೇಟಿಯಾಗಿದ್ದೆ. ಸೂಕ್ತ ಮಾರ್ಗದರ್ಶನ ಲಭಿಸಿದರೆ ಇವರೆಲ್ಲ ಬೇರೊಂದು ಎತ್ತರವನ್ನು ಕಾಣಲಿದ್ದಾರೆ’ ಎಂಬುದು ಯೋಹಾನ್‌ ಬ್ಲೇಕ್‌ ನಂಬಿಕೆ.

ಟಾಪ್ ನ್ಯೂಸ್

1-wqweqeqweqweqeeqeqwe

ILO ವರದಿ; ಭಾರತದಲ್ಲಿ ನಿರುದ್ಯೋಗ ಉಲ್ಬಣ

Anant KUmar Hegde

Uttara Kannada BJP; ಅನಂತ್‌ ಕುಮಾರ ಹೆಗಡೆ ತಟಸ್ಥ?: ಪ್ರಚಾರದಿಂದಲೂ ದೂರ

1-wqeweeqwqewq

MGNREGA; ಉದ್ಯೋಗ ಖಾತ್ರಿ ಯೋಜನೆ: ಕಾರ್ಮಿಕರ ವೇತನ ಹೆಚ್ಚಳ

congress

Congress; ಕೋಲಾರಕ್ಕೆ ಗೌತಮ್‌ ಅಚ್ಚರಿಯ ಅಭ್ಯರ್ಥಿ?: 3ನೇ ವ್ಯಕ್ತಿಗೆ ಲಾಭ!

rape

Sullia;ಕೂಜಿಮಲೆ ಪ್ರದೇಶದಲ್ಲಿ ಕಾಣಿಸಿಕೊಂಡಾಕೆ ನಕ್ಸಲ್‌ ಅಲ್ಲ: ರಾಜಸ್ಥಾನಿ ಮಹಿಳೆ !

1-kkr

Kolkata Raiders ಕೋಚ್‌ ಬಗ್ಗೆ ಆಟಗಾರ ಡೇವಿಡ್‌ ವೀಸ್‌ ಆರೋಪ

1ewewwewqqewqeqe

India ಆರ್ಥಿಕ ಬೆಳವಣಿಗೆಗೆ ಅನವಶ್ಯಕ ಪ್ರಚಾರ: ರಾಜನ್‌ ಹೇಳಿಕೆಗೆ ಆಕ್ರೋಶ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-kkr

Kolkata Raiders ಕೋಚ್‌ ಬಗ್ಗೆ ಆಟಗಾರ ಡೇವಿಡ್‌ ವೀಸ್‌ ಆರೋಪ

1-addasd

Mumbai Indians: ಸೂರ್ಯಕುಮಾರ್‌ ಶೀಘ್ರ ಚೇತರಿಕೆ ಸಾಧ್ಯತೆ

1-eewqeeeqwewqewq

Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್‌, ಸ್ಟೋಯಿನಿಸ್‌, ಅಗರ್‌ ಹೊರಕ್ಕೆ

1-hanuma

ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್‌

1-wewqqewqe

Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್‌

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

Lok Sabha Election: ಬಿಜೆಪಿ-ಜೆಡಿಎಸ್‌ “ಜಂಟಿ ಸಮರಾಭ್ಯಾಸ’

Lok Sabha Election: ಬಿಜೆಪಿ-ಜೆಡಿಎಸ್‌ “ಜಂಟಿ ಸಮರಾಭ್ಯಾಸ’

1-wqweqeqweqweqeeqeqwe

ILO ವರದಿ; ಭಾರತದಲ್ಲಿ ನಿರುದ್ಯೋಗ ಉಲ್ಬಣ

Anant KUmar Hegde

Uttara Kannada BJP; ಅನಂತ್‌ ಕುಮಾರ ಹೆಗಡೆ ತಟಸ್ಥ?: ಪ್ರಚಾರದಿಂದಲೂ ದೂರ

1-wqeweeqwqewq

MGNREGA; ಉದ್ಯೋಗ ಖಾತ್ರಿ ಯೋಜನೆ: ಕಾರ್ಮಿಕರ ವೇತನ ಹೆಚ್ಚಳ

congress

Congress; ಕೋಲಾರಕ್ಕೆ ಗೌತಮ್‌ ಅಚ್ಚರಿಯ ಅಭ್ಯರ್ಥಿ?: 3ನೇ ವ್ಯಕ್ತಿಗೆ ಲಾಭ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.