ರಾಜ್ಯದಲ್ಲಿ 107 ಪಾಸಿಟಿವ್ ಪ್ರಕರಣ ; 110 ಮಂದಿ ಸೋಂಕಿನಿಂದ ಗುಣಮುಖ
Team Udayavani, May 23, 2022, 8:40 PM IST
ಬೆಂಗಳೂರು: ರಾಜ್ಯದಲ್ಲಿ ಸೋಮವಾರ 107ಪಾಸಿಟಿವ್ ಪ್ರಕರಣ ದಾಖಲಾಗಿದ್ದು, 110 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ. ಶೂನ್ಯ ಮರಣ ದಾಖಲಾಗಿದೆ.
ಬೆಂಗಳೂರು ನಗರ 100, ಮೈಸೂರು 3, ಬಳ್ಳಾರಿ 2,ಚಿತ್ರದುರ್ಗ ಹಾಗೂ ಉಡುಪಿ ಒಂದು ಪಾಸಿಟಿವ್ ವರದಿಯಾಗಿದೆ.
ಉಳಿದಂತೆ ದಕ್ಷಿಣಕನ್ನಡ, ಉತ್ತರ ಕನ್ನಡ, ದಾವಣಗೆರೆ, ತುಮಕೂರು, ಬೀದರ್, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಧಾರವಾಡ, ಗದಗ, ಹಾಸನ, ಹಾವೇರಿ, ಕಲಬುರಗಿ, ಕೊಡಗು, ಕೋಲಾರ, ಕೊಪ್ಪಳ, ಮಂಡ್ಯ, ರಾಯಚೂರು , ರಾಮನಗರ, ಶಿವಮೊಗ್ಗ , ವಿಜಯಪುರ, ಯಾದಗಿರಿ, ಬಾಗಲಕೋಟೆ, ಬೆಳಗಾವಿ, ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಶೂನ್ಯ ಪ್ರಕರಣ ದಾಖಲಾಗಿದೆ.