ರಾಜ್ಯದಲ್ಲಿಂದು 1,206 ಕೋವಿಡ್ ಕೇಸ್ ಪತ್ತೆ; ಪಾಸಿಟಿವ್ ದರ ಶೇ.9.62ಕ್ಕೆ ಏರಿಕೆ
Team Udayavani, Aug 15, 2022, 8:54 PM IST
ಬೆಂಗಳೂರು: ರಾಜ್ಯದಲ್ಲಿ ಸೋಮವಾರ 1,206 ಕೋವಿಡ್ ಪಾಸಿಟಿವ್ ವರದಿಯಾಗಿದೆ. ಪಾಸಿಟಿವ್ ದರ ಶೇ.9.62ಕ್ಕೆ ಏರಿಕೆಯಾಗುವ ಮೂಲಕ ದಾಖಲೆ ಸೃಷ್ಟಿಯಾಗಿದೆ.
ಸೋಮವಾರ 12,533 ಮಂದಿಯನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. ಬೆಂಗಳೂರು ನಗರ 870, ಮೈಸೂರು 60, ಚಿಕ್ಕಮಗಳೂರು 42, ಬಳ್ಳಾರಿ 38, ಬೆಳಗಾವಿ 33, ಮಂಡ್ಯ 20, ರಾಯಚೂರು 19, ಕೋಲಾರ 18,ಕಲಬುರಗಿ 17, ಕೊಡಗು 12, ರಾಮನಗರ 11, ಚಾಮರಾಜನಗರ, ದಕ್ಷಿಣ ಕನ್ನಡ 10, ಧಾರವಾಡ 8, ಉಡುಪಿ, ಶಿವಮೊಗ್ಗ 5,ಚಿತ್ರದುರ್ಗ, ಗದಗ 4, ಬಾಗಲಕೋಟೆ, ದಾವಣಗೆರೆ, ಉ.ಕ., ಹಾಸನ 3, ಚಿಕ್ಕಬಳ್ಳಾಪುರ, ಕೊಪ್ಪಳ 2, ಬೆಂಗಳೂರು ಗ್ರಾಮಾಂತರ, ಬೀದರ್, ತುಮಕೂರು, ಯಾದಗಿರಿ ಜಿಲ್ಲೆಯಲ್ಲಿ ತಲಾ ಒಂದು ಪಾಸಿಟಿವ್ ವರದಿಯಾಗಿದೆ.
ರಾಜ್ಯದಲ್ಲಿ ಕೋವಿಡ್ ಮರಣ ಪ್ರಕರಣ ಹೆಚ್ಚಳ
ಬೆಂಗಳೂರು: ರಾಜ್ಯದಲ್ಲಿ ಕಳೆದೆ ನಾಲ್ಕೈದು ತಿಂಗಳಿನಿಂದ ಶೂನ್ಯಕ್ಕೆ ತಲುಪಿದ ಕೋವಿಡ್ ಸೋಂಕಿತರ ಮರಣ ಪ್ರಕರಣ ಹಾಗೂ ಆಸ್ಪತ್ರೆಗೆ ದಾಖಲಾತಿ ಪ್ರಮಾಣದಲ್ಲಿ ಏರಿಕೆ ಕಾಣುತ್ತಿರುವುದು ಆರೋಗ್ಯ ಇಲಾಖೆಗೆ ತಲೆನೋವಾಗಿ ಪರಿಣಮಿಸಿದೆ.
ಒಮಿಕ್ರಾನ್ ಮೂರನೇ ಅಲೆಯು ಡಿಸೆಂಬರ್ ಅಂತ್ಯದಲ್ಲಿ ಕಾಣಿಸಿಕೊಂಡು, ಫೆಬ್ರವರಿ ಅಂತ್ಯಕ್ಕೆ ಕಡಿಮೆಯಾಗಿತ್ತು. ಈ ಅಲೆಯಲ್ಲಿ ಅನಾರೋಗ್ಯದಿಂದ ಬಳುತ್ತಿದ್ದ 1,634 ಕೋವಿಡ್ ಸೋಂಕಿತರು ಮೃತಪಟ್ಟಿದ್ದಾರೆ. ತದನಂತರ ದಿನದಲ್ಲಿ ಕೊರೊನಾ ಮರಣ ಪ್ರಮಾಣದಲ್ಲಿ ತೀರಾ ಇಳಿಕೆಯಾಗಿತ್ತು. ಆದರೆ ಕಳೆದ ಒಂದು ವಾರದಿಂದ ದಿನವೊಂದಕ್ಕೆ ಸರಾಸರಿ 3 ಮರಣ ಪ್ರಕರಣಗಳು ವರದಿಯಾಗುತ್ತಿದೆ.
ಜು.1ರಿಂದ ಆ.15 ನಡುವೆ ರಾಜ್ಯಾದ್ಯಂತ ಒಟ್ಟು 71 ಮರಣ ಪ್ರಕರಣಗಳು ದಾಖಲಾಗಿದೆ. ಅವುಗಳಲ್ಲಿ 38 ಪ್ರಕರಣಗಳಲ್ಲಿ ಕೋವಿಡ್ ಸೋಂಕಿತರು ತೀವ್ರ ತರಹ ಉಸಿರಾಟ ಸಮಸ್ಯೆಯಿಂದ (ಸಾರಿ) ಹಾಗೂ 33 ಐಎಲ್ಐ ಸಂಬಂಧಿಸಿದ ಸೋಂಕಿಗೆ ತುತ್ತಾಗಿ ಮೃತಪಟ್ಟಿದ್ದಾರೆ. ಪ್ರಸ್ತುತ ಬಿಟ್ಟು ಬಿಟ್ಟು ಮಳೆಯಾಗುತ್ತಿದ್ದು, ಚಳಿ ವಾತಾವರಣ ಇರುವುದರಿಂದ ಸೋಂಕಿತರಿಗೆ ಆರೋಗ್ಯ ಸಮಸ್ಯೆ, ಉಸಿರಾಟದ ತೊಂದರೆ, ಜ್ವರ, ಕೆಮ್ಮಿನಿಂದ ಬಳಲುತ್ತಿರುವರಲ್ಲಿ ಸೋಂಕು ಉಲ್ಬಣಗೊಂಡು ಮೃತಪಡುತ್ತಿದ್ದಾರೆ.
ಪ್ರಸ್ತುತ ಸೋಂಕಿಗೆ ಬಲಿಯಾಗುತ್ತಿರುವರಲ್ಲಿ 45 ವರ್ಷ ಮೇಲ್ಪಟ್ಟವರು ಅಧಿಕವಾಗಿ ಸೋಂಕಿಗೆ ಬಲಿಯಾಗುತ್ತಿದ್ದಾರೆ. ಕಳೆದ ಮೂರು ಅಲೆಯಲ್ಲಿ ಅತ್ಯಧಿಕ ಮರಣ ಸಂಖ್ಯೆ ಬೆಂಗಳೂರು ನಗರ ಜಿಲ್ಲೆಯಲ್ಲಿ ಕಾಣಿಸಿಕೊಳ್ಳುತ್ತಿದ್ದು, ಇದೀಗ ಬೆಂಗಳೂರು ಹೊರತು ಪಡಿಸಿ ಇತರೆ ಜಿಲ್ಲೆಗಳಲ್ಲಿ ಮರಣ ಪ್ರಕರಣ ಹೆಚ್ಚಳವಾಗುತ್ತಿದೆ.
ಉತ್ತರ ಕನ್ನಡ ಮೂಲದ 16 ವರ್ಷದ ಬಾಲಕ ಸೋಂಕಿನಿಂದ ಮೃತಪಟ್ಟಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಆರೋಗ್ಯ ಇಲಾಖೆ ಸೋಂಕಿನ ಲಕ್ಷಣ ಹೊಂದಿರುವವರನ್ನು ಆಸ್ಪತ್ರೆಗೆ ಸೇರ್ಪಡೆ ಮಾಡುತ್ತಿದೆ. ರಾಜ್ಯದ ಸರ್ಕಾರಿ ಆರೋಗ್ಯ ವ್ಯವಸ್ಥೆಯಲ್ಲಿ 267 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರಲ್ಲಿ ಜನರಲ್ ಬೆಡ್ನಲ್ಲಿ 216, ಆಕ್ಸಿಜನ್ ಬೆಡ್ನಲ್ಲಿ 16, ಐಸಿಯುನಲ್ಲಿ 33 ಹಾಗೂ ಐಸಿಯು ವೆಂಟಿಲೇಟರ್ನಲ್ಲಿ ಇಬ್ಬರು ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ಸಕ್ರಿಯ ಪ್ರಕರಣಗಳ ಸಂಖ್ಯೆ 10,000ಕ್ಕೆ ಏರಿಕೆಯಾಗಿದೆ.
ರಾಜ್ಯದಲ್ಲಿ ಕೊರೊನಾ ಲಸಿಕೆ ಉಚಿತವಾಗಿ ವಿತರಿಸಲಾಗುತ್ತಿದೆ. ಈಗಾಗಲೇ ಎರಡು ಡೋಸ್ ಕೋವಿಡ್ ಲಸಿಕೆ ಪಡೆದುಕೊಂಡವರಲ್ಲಿ ಶೇ.83 ಮಂದಿ ಅರ್ಹ ಫಲಾನುಭವಿಗಳು ಮುನ್ನೆಚ್ಚರಿಕೆ ಡೋಸ್ ಪಡೆಯಬೇಕಿದೆ. ಮುನ್ನೆಚ್ಚರಿಕೆ ಡೋಸ್ಗೆ ಅರ್ಹರಾಗಿರುವಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ ಈ ಲಸಿಕೆ ಸಹಾಯಕವಾಗಲಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದರು.
ರಾಜ್ಯದಲ್ಲಿ ವಯಸ್ಸಾಗಿರುವ ಹಾಗೂ ಅನಾರೋಗ್ಯದಿಂದ ಬಳುತ್ತಿರುವವರು ಹೆಚ್ಚಿನ ಸಂಖ್ಯೆಯಲ್ಲಿ ಆಸ್ಪತ್ರೆಗೆ ದಾಖಲಾಗುತ್ತಿದ್ದು, ಐಸಿಯು ದಾಖಲಾತಿಯಲ್ಲಿ ಶೇ.5 ಏರಿಕೆ ಕಂಡಿದೆ. ಪ್ರಸ್ತುತ ಕೋವಿಡ್ ಸೋಂಕಿತರ ಸಂಪರ್ಕಕ್ಕೆ ಬಂದಿರುವ ಪ್ರಾಥಮಿಕ ಸಂಪರ್ಕಿತರನ್ನು ಕಡ್ಡಾಯವಾಗಿ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ.
-ಡಾ. ರಂದೀಪ್, ಆರೋಗ್ಯ ಆಯುಕ್ತರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ
ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ
ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ
Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ