14 ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಬಡ್ತಿ
Team Udayavani, Jan 1, 2018, 9:46 AM IST
ಬೆಂಗಳೂರು: ಹೊಸ ವರ್ಷಾಚರಣೆ ವೇಳೆ 30 ಮಂದಿ ಅಧಿಕಾರಿಗಳ ವರ್ಗಾವಣೆ ಮಾಡಲಾಗಿದೆ. ಜತೆಗೆ, 14 ಮಂದಿ ಹಿರಿಯ ಐಪಿಎಸ್ ಅಧಿಕಾರಿಗಳಿಗೆ ಮುಂಬಡ್ತಿ ನೀಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ನಾಲ್ವರಿಗೆ ಹೆಚ್ಚುವರಿ ಪೊಲೀಸ್
ಮಹಾನಿರ್ದೇಶಕರು, ಮೂವರು ಐಜಿಪಿ ಹಾಗೂ ಏಳು ಮಂದಿಯನ್ನು ಡಿಐಜಿಗಳನ್ನಾಗಿ ಮುಂಬಡ್ತಿ ನೀಡಲಾಗಿದೆ.
ಮುಂಬಡ್ತಿ-ಡಾ ಎಂ.ಎ.ಸಲೀಂ (ಅಪರಾಧ ಮತ್ತು ತಾಂತ್ರಿಕ ಸೇವೆಗಳು ಹಾಗೂ ಸಂಚಾರ ಮತ್ತು ರಸ್ತೆ ಸುರಕ್ಷಾ ಆಯುಕ್ತರು), ಕೆ.ಎಸ್.ಆರ್.ಚರಣ್ ರೆಡ್ಡಿ (ಪೊಲೀಸ್ ತರಬೇತಿ), ಕೆ.ರಾಮಚಂದ್ರರಾವ್ (ಮಾನವ ಹಕ್ಕುಗಳು ಹಾಗೂ ನಾಗರೀಕ ಹಕ್ಕುಗಳ
ನಿರ್ದೇಶನಾಲಯ), ಮಾಲಿನಿ ಕೃಷ್ಣಮೂರ್ತಿ(ಲಾಜಿಸ್ಟಿಕ್ ಮತ್ತು ಆತ್ಯಾಧುನಿಕ ವಿಭಾಗ) ಇವರಿಗೆ ಹೆಚ್ಚುವರಿ ಪೊಲೀಸ್
ಮಹಾನಿರ್ದೇಶಕ (ಎಡಿಜಿಪಿ) ಹುದ್ದೆಗೆ ಮುಂಬಡ್ತಿ ನೀಡಲಾಗಿದೆ. ಅದೇ ರೀತಿ ಮೂವರು ಅಧಿಕಾರಿಗಳಿಗೆ ಐಜಿಪಿ ಹುದ್ದೆಗೆ ಮುಂಬಡ್ತಿ ನೀಡಲಾಗಿದ್ದು, ದಿವ್ಯಜ್ಯೋತಿ ರಾಯ್(ಐಜಿಪಿ, ಸದ್ಯ ಕೇಂದ್ರ ಸೇವೆಯಲ್ಲಿದ್ದಾರೆ). ಡಿ.ರೂಪಾ(ಗೃಹರಕ್ಷಕ ದಳ ಹೆಚ್ಚುವರಿ ಕಮಾಡೆಂಟ್), ಎನ್.ಶಿವಪ್ರಸಾದ್ (ಐಜಿಪಿ ಬಳ್ಳಾರಿ ವಲಯ).
ಹಾಗೆಯೇ ಏಳು ಮಂದಿಯನ್ನು ಡಿಐಜಿಯಾಗಿ ಮುಂಬಡ್ತಿ ನೀಡಲಾಗಿದೆ. ಸಂದೀಪ್ ಪಾಟೀಲ್ (ಕೆಎಸ್ಆರ್ಪಿ,ಬೆಂಗಳೂರು), ಪಿ.ಎಸ್.ಹರ್ಷಾ, (ವಾರ್ತಾ ಇಲಾಖೆ ನಿರ್ದೇಶಕರು), ಲಾಬೂರಾವ್ (ಸದ್ಯ ಗುಪ್ತಚರ ಇಲಾಖೆ ಕೇಂದ್ರ ಸೇವೆಯಲ್ಲಿದ್ದಾರೆ), ವಿಕಾಸ್ ಕುಮಾರ್ ವಿಕಾಸ್( ಆಯುಕ್ತರು, ಸಮಾಜ ಕಲ್ಯಾಣ ಇಲಾಖೆ,), ಟಿ.ಡಿ.ಪವಾರ್(ಎಸಿಬಿ), ಅಣ್ಣೆಗೇರಿ ಮಂಜುನಾಥ್(ನಾಗರಿಕ ಹಕ್ಕುಗಳ ನಿರ್ದೇ ಶನಾಲಯ), ರವಿಕುಮಾರ್ ಎಚ್ .ನಾಯಕ್(ಗುಪ್ತಚರ ಇಲಾಖೆ) ಮುಂಬಡ್ತಿ ನೀಡಲಾಗಿದೆ. ಇದೇ ವೇಳೆ ಅಭಿಷೇಕ್ ಗೋಯಲ್, ಕೌಶಲೇಂದ್ರ ಕುಮಾರ್, ರಮಣಗುಪ್ತ (ಕೇಂದ್ರ ಸೇವೆಯಲ್ಲಿದ್ದಾರೆ.), ಬಿ.ಆರ್.ರವಿಕಾಂತೇಗೌಡ,
ಆರ್.ದಿಲೀಪ್, ಎಸ್.ಎನ್.ಸಿದ್ದರಾಮಪ್ಪ, ಆರ್. ರಮೇಶ್, ಎಸ್.ಡಿ.ಶರಣಪ್ಪ, ಎಂ.ಎನ್.ಅನುಚೇತ್, ಶಾಂತನು ಸಿನ್ಹಾ, ಬೊರಸೆ ಭೂಷಣ್ ಗುಲಾಬ್ ರಾವ್, ಸಿ. ವಂಶಿ ಕೃಷ್ಣ, ಅಭಿನವ್ ಖರೆ, ಬಿ.ರಮೇಶ್, ಈಡ ಮಾರ್ಟಿನ್, ರವಿ ಡಿ.ಚನ್ನಣ್ಣನವರ್ ಇವರಿಗೆ
ಎಸ್ಪಿ ದರ್ಜೆಯಲ್ಲೇ ಮುಂಬಡ್ತಿ(ಕಿರಿಯ ಆಡಳಿತ) ನೀಡಲಾಗಿದ್ದು, ಪ್ರಸ್ತುತ ಸ್ಥಳದಲ್ಲೇ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ವರ್ಗಾವಣೆ ಅಲೋಕ್ ಮೋಹನ್(ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಎಸಿಬಿ), ಅಲೋಕ್ ಕುಮಾರ್(ಉತ್ತರ ವಲಯ ಐಜಿಪಿ, ಬೆಳಗಾವಿ), ಬಿ.ಕೆ.ಸಿಂಗ್(ಪಶ್ಚಿಮ ವಲಯ ಹೆಚುrವರಿ ಪೊಲೀಸ್ ಆಯುಕ್ತ ಹಾಗೂ ಗೌರಿ ಹತ್ಯೆಯ ಪ್ರಕರಣದ ವಿಶೇಷ ತನಿಖಾ ದಳ), ಎಸ್.ಮುರುಗನ್(ಈಶಾನ್ಯ ವಲಯ, ಕಲಬುರಗಿ), ಕೆ.ವಿ.ಶರತ್ ಚಂದ್ರ(ಪೂರ್ವ ವಲಯ, ದಾವಣಗೆರೆ), ಸೌಮೇಂದ್ರ
ಮುಖರ್ಜಿ(ಐಜಿಪಿ, ವಿಶೇಷ ತನಿಖಾ ದಳ). ಆರ್. ರಮೇಶ್(ಕಮಾಡೆಂಡ್ ಗೃಹ ರಕ್ಷಕ ದಳ), ವರ್ತಿಕಾ ಕಟಿಯಾರ್(ಸಿಎಆರ್, ಬೆಂಗಳೂರು), ಅರುಣ್ ಕೆ, ಎಂ.ಎಸ್.ಮೊಹಮ್ಮದ್ ಸುಜಿತಾ (ಲೋಕಾಯುಕ್ತ ವಿಶೇಷ ತನಿಖಾ ದಳ, ಬೆಂಗಳೂರು) ಹಾಗೂ
ಸಂಜೀವ್ ಎಂ.ಪಾಟೀಲ್(ಡಿಸಿಪಿ ಆಡಳಿತ ವಿಭಾಗ,ಬೆಂಗಳೂರು) ಇಲ್ಲಿಗೆ ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
PSI re-examination: ಪಿಎಸ್ಐ ಮರು ಪರೀಕ್ಷೆ, ಅಂತಿಮ ಅಂಕಪಟ್ಟಿ ಬಿಡುಗಡೆ
Lok sabha polls: ಸುರೇಶ್ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್ ದಾಸ್
Congress candidate: ನಾನು ಹುಟ್ಟಿದಾಗ ಒಕ್ಕಲಿಗ, ಬೆಳೆಯುತ್ತ ವಿಶ್ವಮಾನವ: ಲಕ್ಷ್ಮಣ್
Dinesh Gundu Rao: ಕ್ಷಯ ರೋಗ ನಿಯಂತ್ರಣ ಔಷಧ ಪೂರೈಕೆಗೆ ಕೇಂದ್ರಕ್ಕೆ ಮನವಿ; ದಿನೇಶ್
Lok Sabha elections: ಸಂಸದ ಬಸವರಾಜುಗೆ “ಗೋ ಬ್ಯಾಕ್’ ಎಂದ ಬಿಜೆಪಿಗರು!
MUST WATCH
ಹೊಸ ಸೇರ್ಪಡೆ
Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್, ಸ್ಟೋಯಿನಿಸ್, ಅಗರ್ ಹೊರಕ್ಕೆ
ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್
Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್
Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್ಗಳು: ಪ್ರವಾಸಿಗರಿಗೆ ಭಯ
IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್ಗಳ ಜಯ