2 ವರ್ಷದ ಪುನೀತ್ಗೆ ಮದ್ರಾಸ್ನಲ್ಲಿ ಲಿಂಗದೀಕ್ಷೆ!
Team Udayavani, Oct 30, 2021, 10:19 AM IST
ಸಿಂದಗಿ: ಪವರ್ಸ್ಟಾರ್ ಪುನೀತ್ ರಾಜಕುಮಾರ ಕುಟುಂಬಕ್ಕೂ ವಿಜಯಪುರ ಜಿಲ್ಲೆಯ ಸಿಂದಗಿಗೂ ಎಲ್ಲಿಲ್ಲದ ನಂಟು. ಗದುಗಿನ ಲಿಂ|ಪುಟ್ಟರಾಜ ಗವಾಯಿಗಳು ಸಂಗೀತ ಸಮಾ ರಂಭಕ್ಕಾಗಿ 1977ರಲ್ಲಿ ಮದ್ರಾಸ್ಗೆ ತೆರಳಿದ್ದ ಸಂದರ್ಭ ಅವರ ಜತೆ ಸಿಂದಗಿ ಪಟ್ಟಣದ ಊರನ ಹಿರಿಯ ಮಠದ (ಹಾವೇ ರಿಯ ಸಿಂದಗಿ ಮಠ) ಪೀಠಾ ಧಿಪತಿಗಳಾಗಿದ್ದ ಲಿಂ|ಶಾಂತವೀರ ಪಟ್ಟಾಧ್ಯಕ್ಷರು ಇದ್ದರು.
ಪುಟ್ಟರಾಜ ಗವಾಯಿಗಳ ಶಿಷ್ಯರಾದ ವೀರೇಶ ಮದರಿ ಎನ್ನುವವರು ಕನ್ನಡ ಚಿತ್ರರಂಗದ ಗೀತೆಗಳಿಗಾಗಿ ವಯಲಿನ್ ನುಡಿಸುತ್ತಿದ್ದರು. ಅವರು ಮೇರುನಟ ಡಾ|ರಾಜಕುಮಾರ ಅವರಿಗೆ ನಿಮ್ಮ ಮನೆಗೆ ಪುಟ್ಟರಾಜ ಗವಾಯಿಗಳನ್ನು ಊಟಕ್ಕೆ ಕರೆದುಕೊಂಡು ಬರುತ್ತಿರುವೆ ಎಂದು ವಿನಂತಿಸಿಕೊಂಡಿದ್ದರು. ಆಗ ಡಾ|ರಾಜ್ ಅವರು ನಿಸ್ಸಂಕೋಚವಾಗಿ ಕರೆದುಕೊಂಡು ಬನ್ನಿ ಎಂದಿದ್ದರು.
ಆದರೆ, ಪುಟ್ಟರಾಜ ಗವಾಯಿಗಳು ಲಿಂಗದೀಕ್ಷೆ ತೆಗೆದುಕೊಳ್ಳ ದವರ ಮನೆಯಲ್ಲಿ ಉಪಾಹಾರ-ಊಟ ಸೇವನೆ ಇಲ್ಲ ಎಂಬ ಪದ್ಧತಿ ಅನುಸರಿಸುತ್ತಿದ್ದರು. ಈ ಸಂಗತಿ ಗೊತ್ತಾದ ಬಳಿಕ ಅವರ ಜೊತೆಯಲ್ಲಿಯೇ ಇದ್ದ ಸಿಂದಗಿ ಶಾಂತವೀರ ಪಟ್ಟಾಧ್ಯಕ್ಷರು ಡಾ|ರಾಜಕುಮಾರ ಕುಟುಂಬಕ್ಕೆ ಲಿಂಗದೀಕ್ಷೆ ನೀಡಿದ್ದರು. ಬಳಿಕ ಡಾ|ರಾಜ್ಕುಮಾರ ಮನೆಯಲ್ಲಿ ಪುಟ್ಟರಾಜ ಗವಾಯಿಗಳು, ಶಾಂತವೀರ ಪಟ್ಟಾಧ್ಯಕ್ಷರು ಅವರ ಶಿಷ್ಯ ಬಳಗ ಊಟ ಸೇವಿಸಿ ದ್ದರು.
ಇದನ್ನೂ ಓದಿ;- ನನಸಾಗದ ಪುನೀತ್ ಚಿತ್ರೀಕರಣದ ಕನಸು!
ಆಗ ಪುನೀತ್ ಎರಡು ವರ್ಷದವರಾಗಿದ್ದರು ಎನ್ನುವು ದನ್ನು ಸ್ಥಳೀಯ ಊರನ ಮಠದ ಪೀಠಾಧಿ ಪತಿಗಳಾದ ಶಿವಾ ನಂದ ಶಿವಾಚಾರ್ಯರು ತಿಳಿಸಿದ್ದಾರೆ. ಇದಾದ ಬಳಿಕ ಗಜಲ್ ಗಾಯಕ ದಿ| ರವೀಂದ್ರ ಹಂದಿಗನೂರ ಅವರು ಶಾಂತವೀರ ಪಟ್ಟಾಧ್ಯಕ್ಷರು ಅವರ ಹೆಸರಿನ ಮೇಲೆ ಹಾಡುಗಳನ್ನು ಹಾಡು ವಂತೆ ಡಾ| ರಾಜಕುಮಾರಗೆ ತಿಳಿಸಿದಾಗ ಅವರು ಎರಡು ಗೀತೆಗಳನ್ನು ಹಾಡಿದ್ದರು. ಹೀಗಾಗಿ ಪುನೀತ್ ರಾಜಕುಮಾರ ಕುಟುಂಬಕ್ಕೂ ಸಿಂದಗಿಗೂ ಎಲ್ಲಿಲ್ಲದ ನಂಟು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
IPL; ಸ್ಟಾಯಿನಿಸ್ ಏಟಿಗೆ ತವರಲ್ಲೆ ಚಾಂಪಿಯನ್ ಚೆನ್ನೈ ಠುಸ್!
Congress vs BJP; ಬ್ರಹ್ಮಾವರದಲ್ಲಿ ಶಕ್ತಿ ಪ್ರದರ್ಶನದ ವೇದಿಕೆ!
Shikaripur; ಸಂಭ್ರಮದ ಹುಚ್ಚರಾಯಸ್ವಾಮಿ ಬ್ರಹ್ಮ ರಥೋತ್ಸವ:ಯಡಿಯೂರಪ್ಪ ಕುಟುಂಬ ಭಾಗಿ
Patanjali ತಪ್ಪು ಜಾಹೀರಾತು; ಕ್ಷಮೆಯಾಚಿಸಿದ ಬಾಬಾ ರಾಮ್ ದೇವ್,ಬಾಲಕೃಷ್ಣ
Gayatri Siddeshwar: ಸಮಗ್ರ ನೀರಾವರಿ ಸೌಲಭ್ಯಕ್ಕೆ ಆದ್ಯತೆ; ಗಾಯಿತ್ರಿ