ಹೆರಿಗೆ ರಜೆ ನಿರಾಕರಿಸಿ ಸೇವೆಯಿಂದ ವಜಾ : ಪೌರಾಡಳಿತಕ್ಕೆ 25 ಸಾ.ರೂ. ದಂಡ
Team Udayavani, Feb 20, 2021, 6:20 AM IST
ಬೆಂಗಳೂರು: ಗುತ್ತಿಗೆ ಆಧಾರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಮಹಿಳಾ ಅಧಿಕಾರಿಗೆ ಹೆರಿಗೆ ರಜೆ ನೀಡದೆ ಸೇವೆಯಿಂದ ವಜಾಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿ ಪೌರಾಡಳಿತ ನಿರ್ದೇಶನಾಲಯಕ್ಕೆ ಹೈಕೋರ್ಟ್ 25 ಸಾ.ರೂ. ದಂಡ ವಿಧಿಸಿದೆ.
ಹೆರಿಗೆಗಾಗಿ ತೆರಳಿದ ಕಾರಣಕ್ಕೆ ತನ್ನನ್ನು ಸೇವೆಯಿಂದ ವಜಾಗೊಳಿಸಿದ ಪೌರಾಡಳಿತ ನಿರ್ದೇಶನಾಲಯದ ಆದೇಶವನ್ನು ರದ್ದುಪಡಿಸುವಂತೆ ಕೋರಿ ಗುತ್ತಿಗೆ ಆಧಾರದಲ್ಲಿ ಯೋಜನ ಮಾಹಿತಿ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಬೆಂಗಳೂರಿನ ನಿವಾಸಿ ಬಿ.ಎಸ್. ರಾಜೇಶ್ವರಿ ಸಲ್ಲಿಸಿದ್ದ ಅರ್ಜಿಯನ್ನು ಪುರಸ್ಕರಿಸಿದ ನ್ಯಾ| ಎಂ. ನಾಗಪ್ರಸನ್ನ ಅವರು ಈ ಆದೇಶ ಹೊರಡಿಸಿದ್ದಾರೆ.
ಮಹಿಳಾ ಉದ್ಯೋಗಿಗೆ ಹೆರಿಗೆ ರಜೆ ಕೇಳುವ ಹಕ್ಕನ್ನು ಸಂವಿಧಾನದ ಪರಿಚ್ಛೇದ 42ರಲ್ಲಿ ನೀಡಿದೆ. ಈ ಪ್ರಕರಣದಲ್ಲಿ ಅರ್ಜಿದಾರರಿಗೆ ಹೆರಿಗೆ ರಜೆ ನೀಡದೆ ಸೇವೆಯಿಂದ ವಜಾಗೊಳಿಸಲಾಗಿದೆ. ಆ ಮೂಲಕ ಆಕೆಗೆ ಸಂವಿಧಾನದತ್ತವಾಗಿ ದೊರೆತ ಹಕ್ಕು ಮತ್ತು ಮಾನವ ಹಕ್ಕು ಸ್ಪಷ್ಟವಾಗಿ ಉಲ್ಲಂ ಸಲಾಗಿದೆ. ಇದು ಕಾನೂನು ಬಾಹಿರ ಕ್ರಮ ಎಂದು ಹೈಕೋರ್ಟ್ ಆದೇಶದಲ್ಲಿ ಅಭಿಪ್ರಾಯಪಟ್ಟಿದೆ.
ಅಲ್ಲದೆ, ರಾಜೇಶ್ವರಿಯನ್ನು ವಜಾಗೊಳಿಸಿದ ಆದೇಶ ರದ್ದು ಪಡಿಸಿ, ನ್ಯಾಯಾಲಯದ ಆದೇಶ ಪ್ರತಿ ದೊರೆತ ದಿನದಿಂದ ಎರಡು ವಾರದೊಳಗೆ ಅರ್ಜಿದಾರರನ್ನು ಸೇವೆಗೆ ಮರು ನಿಯೋಜಿಸಬೇಕು. ವಜಾಗೊಳಿಸಿದ ದಿನದಿಂದ ಮರು ನಿಯೋಜಿಸುವ ದಿನದವರೆಗೂ ಶೇ.50ರಷ್ಟು ವೇತನ ಹಿಂಬಾಕಿ ಪಾವತಿಸಬೇಕು. ಸೇವೆಯಿಂದ ವಜಾ ಗೊಳಿಸಿದ್ದ ಕಾರಣಕ್ಕೆ ಅರ್ಜಿದಾರರಿಗೆ 25 ಸಾ. ರೂ. ಪಾವತಿಸಬೇಕು. ಆ ಹಣವನ್ನು ಆದೇಶ ಹೊರಡಿಸಿದ ಅಧಿಕಾರಿಯಿಂದ ವಸೂಲು ಮಾಡಬೇಕೆಂದು ಹೇಳಿದೆ.
ಪ್ರಕರಣವೇನು? :
ಪೌರಾಡಳಿತ ನಿರ್ದೇಶನಾಲಯವು ತಾಂತ್ರಿಕ ವಿಭಾಗದ ಎಂಐಎಸ್ ಪರಿಣಿತೆ ಹಾಗೂ ಯೋಜನಾ ಮಾಹಿತಿ ಅಧಿಕಾರಿ ಹುದ್ದೆಗೆ 2009ರಲ್ಲಿ ರಾಜೇಶ್ವರಿ ಅವರನ್ನು ಗುತ್ತಿಗೆ ಆಧಾರದಲ್ಲಿ ನೇಮಿಸಿಕೊಂಡಿತ್ತು. ಹೆರಿಗೆ ರಜೆ ನೀಡಲು ಕೋರಿ ಅರ್ಜಿದಾರೆ 2019ರ ಜೂ.11ರಂದು ಅರ್ಜಿ ಸಲ್ಲಿಸಿದ್ದರು. ಆ ಅರ್ಜಿ ಒಪ್ಪದ ನಿರ್ದೇಶನಾಲಯ, ನೋಟಿಸ್ ನೀಡಿ ಕರ್ತವ್ಯಕ್ಕೆ ಹಾಜರಾಗುವಂತೆ ಸೂಚಿಸಿತ್ತು. ಆದರೆ, ಹೆರಿಗೆಗಾಗಿ ಹೋದ ಕಾರಣ ಅರ್ಜಿದಾರೆ ಕರ್ತವ್ಯಕ್ಕೆ ಹಾಜರಾಗಿರಲಿಲ್ಲ. ಇದರಿಂದ ಆಕೆಯ ಗುತ್ತಿಗೆ ರದ್ದುಪಡಿಸಿದ್ದಲ್ಲದೆ ಸೇವೆಯಿಂದ ವಜಾ ಮಾಡಿ 2019ರ ಆ.29ರಂದು ನಿರ್ದೇಶನಾಲಯ ಆದೇಶ ಹೊರಡಿಸಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sagara: ಮಹಿಳೆಯ ಗರ್ಭಕೋಶದಲ್ಲಿದ್ದ 7 ಕೆಜಿ ಗಡ್ಡೆ ಹೊರತೆಗೆದ ವೈದ್ಯರು
Sirsi: ಏ. 28ಕ್ಕೆ ಶಿರಸಿಗೆ ಪ್ರಧಾನಿ ಮೋದಿ… ಸಿದ್ಧತೆ ಆರಂಭ: ಕಾಗೇರಿ
ಮೂಲಭೂತ ಸೌಕರ್ಯ ಕೊಡಿ ಎಂದಿದ್ದೇನೆ ಹೊರತು, ಒಕ್ಕಲೆಬ್ಬಿಸಿ ಎಂದಿಲ್ಲ; ಬೇಳೂರು ಸ್ಪಷ್ಟನೆ
90 ದಿನದಲ್ಲಿ ನೇಹಾ ಕುಟುಂಬಕ್ಕೆ ನ್ಯಾಯ ಸಿಗುವ ವಿಶ್ವಾಸವಿದೆ..: ರಣದೀಪ್ ಸಿಂಗ್ ಸುರ್ಜೇವಾಲಾ
LS Polls: ರಾಜ್ಯದ ಜನರಿಗೆ ಈಶ್ವರಪ್ಪ ಸ್ಪರ್ಧೆ ವಿಷಯ ಈಗ ಖಚಿತ: ಈಶ್ವರಪ್ಪ