3 ದಿನ ಬಳಿಕ ಸಾವು ಗೆದ್ದ ಅಮರ ಪ್ರೇಮಿಗಳು!
Team Udayavani, Mar 23, 2019, 12:30 AM IST
ಧಾರವಾಡ: ಪತಿ-ಪತ್ನಿ ಪ್ರೀತಿ ಎಷ್ಟು ಗಾಢ ಎನ್ನು ವುದಕ್ಕೆ ಜಗತ್ತಿನಲ್ಲಿ ಸಾವಿರಾರು ಉದಾ ಹರಣೆಗಳು ಸಿಗುತ್ತವೆ. ಆದರೆ ಸಾವಿನ ಸಂಕಟದಲ್ಲೂ ತನ್ನ ಪತ್ನಿ ಯನ್ನು ಮೊದಲು ರಕ್ಷಿಸುವಂತೆ ಪಟ್ಟು ಹಿಡಿದ ಪತಿರಾಯ ಕೊನೆಗೂ ಪತ್ನಿ ಜತೆಗೆ ಸಾವು ಗೆದ್ದು ಬಂದ ಘಟನೆ ಧಾರವಾಡದ ಕುಸಿದ ಕಟ್ಟಡದಲ್ಲಿ ಶುಕ್ರವಾರ ನಡೆಯಿತು.
ಸತತ ಮೂರು ದಿನಗಳ ಕಾಲ ಕುಸಿದ ಕಟ್ಟಡದ ಅವಶೇಷಗಳಡಿ ಬಿದ್ದಿದ್ದರೂ ತನ್ನ ಪ್ರೀತಿಯ ಪತ್ನಿಯ ಜೀವ ಮೊದಲು ಉಳಿಸಿ ಎಂದು ಎನ್ಡಿಆರ್ಎಫ್ ಸಿಬಂದಿಯನ್ನು ಅಂಗಲಾಚಿ ಬೇಡಿದ ಅಮರ ಪ್ರೇಮಿ ದಿಲೀಪ್, ತಾನು ಬರಲು ಅವಕಾಶ ಇದ್ದರೂ ಮೊದಲು ಪತ್ನಿ ಯನ್ನು ರಕ್ಷಿಸಿ ಬಳಿಕ ತಾನು ಹೊರ ಬಂದಿದ್ದಾನೆ. ಶುಕ್ರವಾರ ಅಪರಾಹ್ನ ಕಾರ್ಯಾ ಚರಣೆ ವೇಳೆ ಅವಶೇಷ ಗಳ ಅಡಿಯಲ್ಲಿ ಜನ ಬದು ಕಿರುವ ಕುರುಹು ಹಿಡಿದು ಹೊರಟ ಎನ್ಡಿಆರ್ಎಫ್ಗೆ ಮೊದಲು ಸಿಕ್ಕಿದ್ದು ದಾಖಲು ಮಾಲು ಕೊಕರೆ (ದಿಲೀಪ). ಕೂಡಲೇ ಅವನಿಗೆ ನೀರು ಕೊಟ್ಟು ತೆವಳುತ್ತ ಮುಂದಕ್ಕೆ ಬರುವಂತೆ ಕೋರಿ ದರು. ಆದರೆ ಇದಕ್ಕೆ ಒಪ್ಪದ ದಿಲೀಪ್, ಮೊದಲು ತನ್ನ ಪತ್ನಿ ಸಂಗೀತಾ ಳನ್ನು ರಕ್ಷಿಸುವಂತೆ ಕೋರಿದ. ಕೊನೆಗೆ ಅವಶೇಷಗಳಡಿಯಿಂದ ಆಕೆಯೊಂದಿಗೆ ಹೊರಬಂದ.
ಪತ್ನಿ ಜೀವಕ್ಕಾಗಿ ಹೋರಾಟ
ಧಾರವಾಡ ತಾಲೂಕಿನ ಕೊಕ್ರೆ ಪುರದ ದಾಖಲು ಮಾಲು ಕೊಕರೆ (ದಿಲೀಪ) ಹಾಗೂ ಸಂಗೀತಾ ಕೂಲಿ ಕಾರ್ಮಿಕ ದಂಪತಿ. ಕಟ್ಟಡದ ಅವಶೇಷಗಳ ನಡುವೆ ಪಾರ್ಕಿಂಗ್ ಜಾಗದಲ್ಲಿ ಸಿಲುಕಿದ್ದರು.
ಪಾರ್ಕಿಂಗ್ ಸ್ಥಳದಲ್ಲಿ ಕಾಂಕ್ರಿಟ್ ಹಾಕುವ ಕೆಲಸದಲ್ಲಿದ್ದಾಗ ಕಟ್ಟಡ ಏಕಾಏಕಿ ಕುಸಿದಿತ್ತು. ಕೆಲವು ಸಮಯ ಏನಾಗುತ್ತಿದೆ ಎಂದೇ ಗೊತ್ತಾ ಗಿರಲಿಲ್ಲ. ಅನಂತರ ಕರೆ ದಾಗ ಪತ್ನಿಯ ಧ್ವನಿ ಕೇಳಿಸಿತು. ಐದಾರು ಅಡಿ ದೂರದಲ್ಲಿ ಬಿದ್ದಿದ್ದ ಪತ್ನಿಯ ಧ್ವನಿ ಕೇಳಿದರೂ ಅತ್ತ ಹೋಗಲು ಆಗುತ್ತಿರಲಿಲ್ಲ. ಇದ್ದ ಲ್ಲಿಂದಲೇ ಆಕೆಗೆ ಧೈರ್ಯ ತುಂಬಿದೆ. ಅನಂತರ ಕೆಲಸಕ್ಕೆ ಬಳಸು ತ್ತಿದ್ದ ಸುತ್ತಿಗೆಯಿಂದ ಅಡ್ಡ ಲಾಗಿದ್ದ ಅವಶೇಷಗಳನ್ನು ನಿಧಾನ ವಾಗಿ ತೆರವುಗೊಳಿಸಿ ಒಂದು ದಿನ ಬಳಿಕ ಆಕೆಯ ಬಳಿ ತಲು ಪಿದೆ. ಬದುಕಿದರೂ, ಸತ್ತರೂ ಜತೆ ಯಾಗಿಯೇ ಇರೋಣ ಎಂದು ಆಕೆಗೆ ಧೈರ್ಯ ತುಂಬಿ ನೆರವಿಗಾಗಿ ಕಾದೆವು. ಮೊದಲ ದಿನ ಹಗಲು ಮಾತ್ರ ಗೊತ್ತಾಯಿತು. ಅನಂತರ ಏನೂ ಗೊತ್ತಾಗಲಿಲ್ಲ ಎಂದು ತನ್ನ ಹೋರಾಟವನ್ನು ವಿವರಿಸಿದರು ದಿಲೀಪ.
ಸಿಮೆಂಟ್ ನೀರು ಕುಡಿದೆವು
ಒಂದು ದಿನ ಕಳೆಯುತ್ತಿದ್ದಂತೆ ನೀರಿನ ದಾಹ ಹೆಚ್ಚಾಯಿತು. ಜೀವ ಉಳಿಸಿಕೊಳ್ಳಬೇಕು ಎಂದು ಪಕ್ಕದಲ್ಲೇ ಇದ್ದ ಸಿಮೆಂಟ್ ನೀರು ಕುಡಿದೆವು. ಸಿಮೆಂಟ್ ನೀರು ಕುಡಿದಿದ್ದರಿಂದ ಪತ್ನಿ ವಾಂತಿ ಮಾಡಿಕೊಂಡಳು. ಆದರೂ ದಾಹ ತಡೆಯ ಲಾಗದೆ ನಾಲ್ವರು ಮಕ್ಕಳಿ ಗಾಗಿ ಜೀವ ಉಳಿಸಿ ಕೊಳ್ಳಲು ಎರಡೂ¾ರು ಬಾರಿ ಅದೇ ನೀರು ಕುಡಿದಿ ದ್ದೇವೆ ಎಂದರು ದಿಲೀಪ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
PSI re-examination: ಪಿಎಸ್ಐ ಮರು ಪರೀಕ್ಷೆ, ಅಂತಿಮ ಅಂಕಪಟ್ಟಿ ಬಿಡುಗಡೆ
Lok sabha polls: ಸುರೇಶ್ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್ ದಾಸ್
Congress candidate: ನಾನು ಹುಟ್ಟಿದಾಗ ಒಕ್ಕಲಿಗ, ಬೆಳೆಯುತ್ತ ವಿಶ್ವಮಾನವ: ಲಕ್ಷ್ಮಣ್
Dinesh Gundu Rao: ಕ್ಷಯ ರೋಗ ನಿಯಂತ್ರಣ ಔಷಧ ಪೂರೈಕೆಗೆ ಕೇಂದ್ರಕ್ಕೆ ಮನವಿ; ದಿನೇಶ್
Lok Sabha elections: ಸಂಸದ ಬಸವರಾಜುಗೆ “ಗೋ ಬ್ಯಾಕ್’ ಎಂದ ಬಿಜೆಪಿಗರು!
MUST WATCH
ಹೊಸ ಸೇರ್ಪಡೆ
Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್, ಸ್ಟೋಯಿನಿಸ್, ಅಗರ್ ಹೊರಕ್ಕೆ
ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್
Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್
Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್ಗಳು: ಪ್ರವಾಸಿಗರಿಗೆ ಭಯ
IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್ಗಳ ಜಯ