3 ಜೀವಕ್ಕೆ ಎರವಾದ ಭವಿಷ್ಯ!
Team Udayavani, Jan 28, 2019, 12:25 AM IST
ಚಿಕ್ಕಬಳ್ಳಾಪುರ: ನಿಮ್ಮ ಮಕ್ಕಳ ಭವಿಷ್ಯ ಚೆನ್ನಾಗಿಲ್ಲ ಎಂಬ ಜೋತಿಷಿಯ ಮಾತು ಕೇಳಿದತಾಯಿ ತನ್ನ ಇಬ್ಬರು ಮಕ್ಕಳನ್ನು ಕೊಂದು ತಾನು ನೇಣಿಗೆ ಶರಣಾಗಿ ಆತ್ಮಹತ್ಯೆ ಮಾಡಿಕೊಂಡಿರುವ ಹೃದಯ ವಿದ್ರಾವಿಕ ಘಟನೆ ಚಿಕ್ಕಬಳ್ಳಾಪುರದಲ್ಲಿ ಶನಿವಾರ ತಡರಾತ್ರಿ ನಡೆದಿದೆ.
ಸರ್ಎಂವಿ ಲೇಔಟ್ನ ವಿ.ಆರ್.ಉಷಾ (32), ಮಕ್ಕಳಾದ ಶಾನ್ವಿತಾ (2.5), ಶಾಮಂತ್ (10) ಮೃತರು. ಶಾಮಂತ್ 3ನೇ ತರಗತಿ ಓದುತ್ತಿದ್ದ. ಉಷಾ ತನ್ನ ಇಬ್ಬರು ಮಕ್ಕಳಾದ ಶಾನ್ವಿತಾ ಮತ್ತು ಶಾಮಂತ್ ಭವಿಷ್ಯದ ಬಗ್ಗೆ ಹಲವು ದಿನಗಳ ಹಿಂದೆ ಜೋತಿಷಿಯೊಬ್ಬರ ಬಳಿ ಭವಿಷ್ಯ ಕೇಳಿದ್ದು, ಈ ವೇಳೆ ನಿಮ್ಮ ಮಕ್ಕಳ ಭವಿಷ್ಯ ಸರಿಯಿಲ್ಲ ಎಂದು ಹೇಳಿದ್ದರು. ಈ ಬಗ್ಗೆ ಉಷಾ ತನ್ನ ಗಂಡ ಅಶೋಕ ಮತ್ತು ಅಕ್ಕ, ತಂಗಿ ಜತೆ ಸಾಕಷ್ಟು ಬಾರಿ ಚರ್ಚೆ ಮಾಡಿದ್ದರು. ಗಂಡ ಕೂಡ ಜೋತಿಷಿಗಳ ಮಾತೆಲ್ಲ ನಂಬಬೇಡ ಎಂದು ಧೈರ್ಯ ಹೇಳಿದ್ದರು.
ಶನಿವಾರ ಪತಿ ತನ್ನ ಸ್ವಗ್ರಾಮ ಅಬ್ಲೂಡುಗೆ ತೋಟದಲ್ಲಿ ಪಂಪ್ ಮೋಟಾರ್ ದುರಸ್ತಿಗೆ ತೆರಳಿದ್ದ ವೇಳೆ ಮನೆಯಲ್ಲಿದ್ದ ಉಷಾ ತಡರಾತ್ರಿ 2 ಗಂಟೆ ವೇಳೆಗೆ ಇಬ್ಬರು ಮಕ್ಕಳಿಗೂ ನಿದ್ರೆ ಮಾತ್ರೆ ಕೊಟ್ಟ ಬಳಿಕ ಕತ್ತು ಹಿಸುಕಿ ಕೊಲೆ ಮಾಡಿ ನೇಣು ಬಿಗಿದುಕೊಂಡಿದ್ದಾರೆ.
ಅಶೋಕ್ ಸರಕಾರಿ ಪ್ರೌಢ ಶಾಲೆ ಯಲ್ಲಿ ದೈಹಿಕ ಶಿಕ್ಷಣ ಶಿಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. 12 ವರ್ಷಗಳ ಉಷಾ ಅವರ ಜತೆ ಮದುವೆಯಾಗಿತ್ತು.
ಪ್ರಕರಣ ಬೆಳಕಿಗೆ ಬಂದಿದ್ದು ಹೇಗೆ?
ಅಶೋಕ್ ಬೆಳಗ್ಗೆ ಮನೆಗೆ ಕರೆ ಮಾಡಿದ್ದು, ಕರೆ ಸ್ಪೀಕರಿಸ ದಿದ್ದಕ್ಕೆ ಆತಂಕಗೊಂಡು ನೆರೆ ಮನೆಯವರಿಗೆ ಕರೆ ಮಾಡಿ ಮನೆಯವರಿಗೆ ಕೊಡುವಂತೆ ತಿಳಿಸಿದ್ದರು. ಪಕ್ಕದ ಮನೆಯವರು ಮನೆ ಬಳಿ ಬಂದು ನೋಡಿದಾಗ ಪ್ರಕರಣ ಬೆಳಕಿಗೆ ಬಂದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್
UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು
Rain: ಉಡುಪಿ ಜಿಲ್ಲೆಗೆ ತಂಪೆರೆದ ಮಳೆರಾಯ, ಜಿಲ್ಲಾದ್ಯಂತ ಗುಡುಗು ಸಹಿತ ಧಾರಾಕಾರ ಮಳೆ
Daily Horoscope: ಉದ್ಯೋಗ ಸ್ಥಾನದಲ್ಲಿ ನೆಮ್ಮದಿಯ ವಾತಾವರಣ, ಅಕಸ್ಮಾತ್ ಧನಪ್ರಾಪ್ತಿ
Heavy Rain; ದುಬಾೖ ಪ್ರಯಾಣ ಬೇಡ: ಸಲಹೆ