ಉಡುಪಿ ಆಭರಣ ಮೋಟಾರ್ಸ್ನಲ್ಲಿ ಒಂದೇ ದಿನ 52 ಕಾರು ವಿತರಣೆ
Team Udayavani, Sep 10, 2019, 3:02 AM IST
ಬೆಂಗಳೂರು: ಆಟೋಮೊಬೈಲ್ ಕ್ಷೇತ್ರದ ಮುಂಚೂಣಿ ಕಾರು ತಯಾರಕ ಸಂಸ್ಥೆ ಮಾರುತಿ-ಸುಜುಕಿ ಇಂಡಿಯಾ ಲಿ.,ನ ವಿವಿಧ ಶ್ರೇಣಿಯ 52 ಕಾರುಗಳನ್ನು ಉಡುಪಿ ಜಿಲ್ಲೆಯ ಅಧಿಕೃತ ವಿತರಕ ಆಭರಣ ಮೋಟಾರ್ಸ್ ಗೌರಿ-ಗಣೇಶ ಹಬ್ಬದ ದಿನದಂದು ವಿತರಣೆ ಮಾಡಿದೆ.
ಮುಂಗಡ ಬುಕ್ಕಿಂಗ್ ಮಾಡಿ ಹಬ್ಬದ ದಿನದಂದು ಹೊಸ ಕಾರು ಡೆಲಿವರಿ ಪಡೆಯಲು ಉತ್ಸುಕರಾಗಿದ್ದ ಗ್ರಾಹಕರಿಗೆ ಶುಭಾಶಯ ಗಳೊಂದಿಗೆ ಉಡುಗೊರೆ ನೀಡಿ ಕಾರಿನ ಕೀ ನೀಡಿ ಸತ್ಕರಿಸಿದೆ. ಅಂದು ಆಭರಣ ಮೋಟಾರ್ಸ್ ದೊಡ್ಡ ಮಟ್ಟದಲ್ಲಿ ಕಾರುಗಳನ್ನು ವಿತರಣೆ ಮಾಡಿ ಸಾಧನೆ ಮಾಡಿದೆ. ಹಬ್ಬದ ವಿಶೇಷವಾಗಿ ಹೊಸ ಕಾರುಗಳನ್ನು ಖರೀದಿ ಸಲು ಬಂದ ಗ್ರಾಹಕರಿಗೆ ಮಾರುತಿ ಫೈನಾನ್ಸ್ ತಂಡ ಉತ್ತಮ ರೀತಿಯಲ್ಲಿ ಸಹಕಾರ ನೀಡಿದೆ.
ಕಾರುಗಳನ್ನು ವಿತರಣೆ ಮಾಡಿ ಮಾತನಾಡಿದ ಶೋರೂಂ ವ್ಯವಸ್ಥಾಪಕರು ಮೊದಲು ತಮ್ಮ ಗ್ರಾಹಕರಿಗೆ ಗೌರಿ-ಗಣೇಶ ಹಬ್ಬದ ಶುಭಾಶಯಗಳನ್ನು ತಿಳಿಸಿ, 52 ಮಾರುತಿ-ಸುಜುಕಿಯ ವಿವಿಧ ಶ್ರೇಣಿಯ ಕಾರುಗಳನ್ನು ವಿತರಣೆ ಮಾಡಿರುವುದು ಇದೇ ಮೊದಲು. ಹೊಸ ಕಾರುಗಳ ವಿತರಣೆಯಲ್ಲಿ ಆಭರಣ ಮೋಟಾರ್ ಮೈಲಿಗಲ್ಲನ್ನು ಸಾಧಿಸಿದೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BJP MP ಜಿಗಜಿಣಗಿ ಮಾಡಿದ ಅಪಮಾನವನ್ನು ಸಮಾಜದ ಮನೆ ಮನೆಗೆ ತಿಳಿಸುತ್ತೇವೆ: ರಾಠೋಡ
D.K. Suresh ಅವರದ್ದು ಹೃದಯವಂತಿಕೆಯಲ್ಲವೇ?: ಡಿಸಿಎಂ ಡಿ.ಕೆ. ಶಿವಕುಮಾರ್ ವಾಗ್ದಾಳಿ
Thirthahalli: ರಾಜ್ಯದ 28 ಕ್ಷೇತ್ರವನ್ನೂ ಗೆಲ್ಲಿಸಬೇಕೆಂದು ಜೆಡಿಎಸ್ ಪಕ್ಷದೊಂದಿಗೆ ಮೈತ್ರಿ
Kalaburagi: ನನ್ನ ಹೆಣದ ಮೇಲೆ ಬಿಜೆಪಿ ಚುನಾವಣೆ ಮಾಡಲು ಹೊರಟಿದೆ: ಪ್ರಿಯಾಂಕ್
ದಿಂಗಾಲೇಶ್ವರ ಸ್ವಾಮೀಜಿಗೆ ತಪ್ಪು ತಿಳಿವಳಿಕೆಯಾಗಿದ್ದರೆ ಸರಿಪಡಿಸುವೆ: ಸಚಿವ ಪ್ರಹ್ಲಾದ ಜೋಶಿ