ಕರಿದ ಎಣ್ಣೆಯ ಮೂಲಕ 9 ವರ್ಷದಿಂದ ಓಡುತ್ತಿರುವ ಕಾರು!

ಕರಿದ ಎಣ್ಣೆ ಸಂಸ್ಕರಣೆಯಲ್ಲಿ ಬಂದ ತ್ಯಾಜ್ಯದಿಂದ ಉತ್ಪನ್ನ ತಯಾರು

Team Udayavani, Jul 14, 2022, 2:24 PM IST

10car

ಬೆಂಗಳೂರು: ಕರಿದ ಎಣ್ಣೆಯನ್ನು ಸಂಸ್ಕರಿಸುವ ಮೂಲಕ ಜೈವಿಕ ಇಂಧನವನ್ನಾಗಿ ಮಾರ್ಪ ಡಿಸಿ ಡೀಸೆಲ್‌ ಕಾರಿಗೆ ಬಳಕೆ ಮಾಡುವ ಮೂಲಕ ಇಲ್ಲೊಬ್ಬ ಯುವಕ ದಾಖಲೆ ಮಾಡಿದ್ದಾನೆ.

ಜಿಕೆವಿಕೆಯಿಂದ ಪ್ರಮಾಣ ಪತ್ರ ಪಡೆದ ಈ ಜೈವಿಕ ಇಂಧನವನ್ನು ಡೀಸೆಲ್‌ ಚಾಲಿತ ಎಲ್ಲಾ ಗಾಡಿಗಳಲ್ಲಿ ಬಳಸಬಹುದಾಗಿದ್ದು, ಅವಿನಾಶ್‌ ನಾರಾಯಣಸ್ವಾಮಿ ಎಂಬಾತ ತಮ್ಮ ಕಾರಿಗೆ ಸುಮಾರು 9 ವರ್ಷಗಳಿಂದ ಡಿಸೇಲ್‌ ಹಾಕುವ ಬದಲಿಗೆ, ಅವರೇ ತಯಾರಿಸಿದ ಜೈವಿಕ ಇಂಧನ ಬಳಸುತ್ತಿದ್ದಾರೆ. ಇದುವರೆಗೆ ಸುಮಾರು 1.20 ಲಕ್ಷ ಕಿ. ಮೀ. ದೂರ ಕಾರು ಕ್ರಮಿಸಿದೆ.

ಹೋಟೆಲ್‌ಗ‌ಳಿಂದ ಕರಿದ ಎಣ್ಣೆಯನ್ನು ಖರೀದಿಸಿ, ಅದನ್ನು 6ರಿಂದ 7 ಗಂಟೆಗಳ ಕಾಲ ವಿವಿಧ ಹಂತಗಳಲ್ಲಿ ಸಂಸ್ಕರಣೆ ಮಾಡುವುದರಿಂದ ಒಂದು ಲೀಟರ್‌ ಕರಿದ ಎಣ್ಣೆಗೆ 700ರಿಂದ 800 ಎಂ.ಎಲ್‌ ಜೈವಿಕ ಇಂಧನ ದೊರೆಯುತ್ತದೆ. ಅಷ್ಟೇ ಅಲ್ಲದೆ ಇದರ ಬೆಲೆಯೂ ಇತರೆ ಇಂಧನಕ್ಕೆ ಹೋಲಿ ಸಿದರೆ ಕಡಿಮೆ ವೆಚ್ಚ ಮತ್ತು ಪರಿಸರ ಸ್ನೇಹಿಯಾಗಿರಲಿದೆ. ಜೈವಿಕ ಇಂಧನದ ಬೆಲೆ ಗರಿಷ್ಠ ಎಂದರೂ 60 ರಿಂದ 65 ರೂ. ವೆಚ್ಚ ತಗುಲಬಹುದು.

2013ರಿಂದ ತನ್ನ ಕಾರಿಗೆ ಜೈವಿಕ ಇಂಧನವನ್ನು ಬಳಸಲಾಗುತ್ತಿದ್ದು, ಇದುವರೆಗೆ ಯಾವುದೇ ಸಮಸ್ಯೆ ಕಂಡು ಬಂದಿಲ್ಲ. ಒಂದು ಲೀಟರ್‌ ಜೈವಿಕ ಇಂಧನಕ್ಕೆ ಕಾರು 15- 17 ಮೈಲೇಜ್‌ ನೀಡುತ್ತಿದೆ. ಹೊಗೆ ತಪಾಸಣೆಯಲ್ಲೂ ಡಿಸೇಲ್‌ ಬಳಕೆ ಗಾಡಿಗಳಿಗಿಂತ ಅತ್ಯಂತ ಕಡಿಮೆ ಮಾಲಿನ್ಯದ ಫ‌ಲಿತಾಂಶ ಬಂದಿದೆ. ಇಷ್ಟೇ ಅಲ್ಲದೇ ಇಂಧನ ತಯಾರಿಸುವಾಗ ಬರುವ ತ್ಯಾಜ್ಯದಿಂದ ಹ್ಯಾಂಡ್‌ವಾಶ್‌, ಫ್ಲೋರ್‌ ಕ್ಲೀನರ್‌ ಸೇರಿದಂತೆ ಇತರೆ ಉಪಉತ್ಪನ್ನಗಳನ್ನು ತಯಾರಿಸಲಾಗುತ್ತಿದೆ ಎನ್ನುತ್ತಾರೆ ಅವಿನಾಶ್‌.

ಇದನ್ನೂ ಓದಿ:ಪಿಎಸ್ಐ ಅಕ್ರಮ; ಬಂಧಿತ ಅಧಿಕಾರಿಗಳ ಮಂಪರು ಪರೀಕ್ಷೆ ಮಾಡಿ: ಸಿದ್ದರಾಮಯ್ಯ

ರಾಜ್ಯದ ಪ್ರತಿ ಜಿಲ್ಲೆಯಲ್ಲಿಯೂ ಇದರ ಘಟಕ ವನ್ನು ತೆರೆಯಲಾಗಿದ್ದು, ಕಾರ್ಖಾನೆಗಳಲ್ಲಿ ಯಂತ್ರ ಗಳನ್ನು ಚಲಾಯಿಸಲು ಪ್ರಾಯೋಗಿಕವಾಗಿ ಬಳಸಲಾಗುತ್ತಿದೆ. ಅಲ್ಲದೆ, ಈ ಇಂಧನದಿಂದಾಗುವ ಅನು ಕೂಲ ಮತ್ತು ಅನನುಕೂಲಗಳ ಕುರಿತು ಸಂಶೋ ಧನೆಗಳೂ ನಡೆಯುತ್ತಿವೆ. ಈ ಇಂಧನವು ಸಂಪೂರ್ಣವಾಗಿ ಆತ್ಮನಿರ್ಭರ ಮತ್ತು ಪರಿಸರ ಸ್ನೇಹಿ ಇಂಧನವಾಗಿದೆ ಎಂದು ಹೇಳುತ್ತಾರೆ. ಜೈವಿಕ ಇಂಧನ ಮತ್ತು ಉಪ ಉತ್ಪನ್ನಗಳನ್ನು ತಯಾರಿಸುತ್ತಿರುವ ಹಿನ್ನೆಲೆ ಇಂಡಿಯನ್‌ ಬುಕ್‌ ಆಫ್‌ ರೆಕಾಡ್‌ ನಲ್ಲಿ ಅವಿನಾಶ್‌ ದಾಖಲೆ ಬರೆದಿದ್ದಾರೆ.

-ಭಾರತಿ ಸಜ್ಜನ್‌

ಟಾಪ್ ನ್ಯೂಸ್

ಹಳದಿ ಶಾಸ್ತ್ರದ ವೇಳೆ ವರನಿಗೆ ವಿದ್ಯುತ್ ಸ್ಪರ್ಶ… ಆಸ್ಪತ್ರೆ ದಾರಿಯಲ್ಲಿ ಕೊನೆಯುಸಿರು

ಹಳದಿ ಶಾಸ್ತ್ರದ ವೇಳೆ ವಿದ್ಯುತ್ ಸ್ಪರ್ಶ… ಆಸ್ಪತ್ರೆ ದಾರಿ ಮಧ್ಯೆ ಕೊನೆಯುಸಿರೆಳೆದ ವರ

Inheritance Tax:  ಸ್ಯಾಮ್‌ ಪಿತ್ರೋಡಾ ಹೇಳಿದ್ದೇನು-ಏನಿದು ಪಿತ್ರಾರ್ಜಿತ ತೆರಿಗೆ ಜಟಾಪಟಿ!

Inheritance Tax:  ಸ್ಯಾಮ್‌ ಪಿತ್ರೋಡಾ ಹೇಳಿದ್ದೇನು-ಏನಿದು ಪಿತ್ರಾರ್ಜಿತ ತೆರಿಗೆ ಜಟಾಪಟಿ!

Rahul Gandhi 3

U-turn ಹೊಡೆದ ರಾಹುಲ್: ಸಂಪತ್ತು ಹಂಚಿಕೆ ಬಗ್ಗೆ ಹೇಳಿಲ್ಲ,ಅನ್ಯಾಯ…

ತಂಗಿ ಮದುವೆಗೆ ಟಿವಿ ಗಿಫ್ಟ್‌ ಕೊಟ್ಟದ್ದಕ್ಕೆ ಅಸಮಾಧಾನ: ಪತಿಯನ್ನು ಥಳಿಸಿ ಕೊಲ್ಲಿಸಿದ ಪತ್ನಿ

ತಂಗಿ ಮದುವೆಗೆ ಟಿವಿ ಗಿಫ್ಟ್‌ ಕೊಟ್ಟದ್ದಕ್ಕೆ ಅಸಮಾಧಾನ: ಪತಿಯನ್ನು ಥಳಿಸಿ ಕೊಲ್ಲಿಸಿದ ಪತ್ನಿ

15

ರಾಹುಲ್ ಗಾಂಧಿ ಹೋದಲ್ಲೆಲ್ಲಾ ನಾವು ಗೆದ್ದಿದೀವಿ: ಬಳ್ಳಾರಿಯಲ್ಲಿ ನಮ್ಮ ಗೆಲುವು ನಿಶ್ಚಿತ

Bommai BJP

Congress ತುಷ್ಟೀಕರಣ ರಾಜಕೀಯಕ್ಕೆ ಮುಸ್ಲಿಂ ಮೀಸಲಾತಿಗೆ ಬೆಂಬಲಿಸುತ್ತದೆ: ಬೊಮ್ಮಾಯಿ

ಭಾರತದಲ್ಲಿ ರಿಲೀಸ್‌ಗೂ ಮುನ್ನ ʼಮಂಕಿ ಮ್ಯಾನ್‌ʼ ಹೆಚ್‌ ಡಿ ಕಾಪಿ ಲೀಕ್: ವಿಳಂಬ ಯಾಕೆ?

ಭಾರತದಲ್ಲಿ ರಿಲೀಸ್‌ಗೂ ಮುನ್ನ ʼಮಂಕಿ ಮ್ಯಾನ್‌ʼ ಹೆಚ್‌ ಡಿ ಕಾಪಿ ಲೀಕ್: ವಿಳಂಬ ಯಾಕೆ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bommai BJP

Congress ತುಷ್ಟೀಕರಣ ರಾಜಕೀಯಕ್ಕೆ ಮುಸ್ಲಿಂ ಮೀಸಲಾತಿಗೆ ಬೆಂಬಲಿಸುತ್ತದೆ: ಬೊಮ್ಮಾಯಿ

Politics: ಮೋದಿ ಸಾರ್ವಜನಿಕರಲ್ಲಿ ಕೋಮು ಭಾವನೆ ಹುಟ್ಟು ಹಾಕುತ್ತಿದ್ದಾರೆ; ಎಚ್.ಕೆ. ಪಾಟೀಲ

Politics: ಮೋದಿ ಸಾರ್ವಜನಿಕರಲ್ಲಿ ಕೋಮು ಭಾವನೆ ಹುಟ್ಟು ಹಾಕುತ್ತಿದ್ದಾರೆ; ಎಚ್.ಕೆ. ಪಾಟೀಲ

2-hubli

Neha Case: ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿ ಸಿಐಡಿ ವಶಕ್ಕೆ

Temperature ರಾಜ್ಯದ 10 ಜಿಲ್ಲೆಗಳಲ್ಲಿ ಬೀಸಲಿದೆ ಬಿಸಿಗಾಳಿ

Temperature ರಾಜ್ಯದ 10 ಜಿಲ್ಲೆಗಳಲ್ಲಿ ಬೀಸಲಿದೆ ಬಿಸಿಗಾಳಿ

ಸಂಪತ್ತು ಹಂಚಿಕೆ ಬಗ್ಗೆ ನಾವೆಲ್ಲಿ ಹೇಳಿದ್ದೇವೆ: ಖರ್ಗೆ ಪ್ರಶ್ನೆ

ಸಂಪತ್ತು ಹಂಚಿಕೆ ಬಗ್ಗೆ ನಾವೆಲ್ಲಿ ಹೇಳಿದ್ದೇವೆ: ಖರ್ಗೆ ಪ್ರಶ್ನೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

7-uv-fsuion

Yugadi: ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ

6-uv-fusion

UV Fusion: ಯುಗಾದಿ ಸಂಭ್ರಮೋತ್ಸವ

ಹಳದಿ ಶಾಸ್ತ್ರದ ವೇಳೆ ವರನಿಗೆ ವಿದ್ಯುತ್ ಸ್ಪರ್ಶ… ಆಸ್ಪತ್ರೆ ದಾರಿಯಲ್ಲಿ ಕೊನೆಯುಸಿರು

ಹಳದಿ ಶಾಸ್ತ್ರದ ವೇಳೆ ವಿದ್ಯುತ್ ಸ್ಪರ್ಶ… ಆಸ್ಪತ್ರೆ ದಾರಿ ಮಧ್ಯೆ ಕೊನೆಯುಸಿರೆಳೆದ ವರ

Inheritance Tax:  ಸ್ಯಾಮ್‌ ಪಿತ್ರೋಡಾ ಹೇಳಿದ್ದೇನು-ಏನಿದು ಪಿತ್ರಾರ್ಜಿತ ತೆರಿಗೆ ಜಟಾಪಟಿ!

Inheritance Tax:  ಸ್ಯಾಮ್‌ ಪಿತ್ರೋಡಾ ಹೇಳಿದ್ದೇನು-ಏನಿದು ಪಿತ್ರಾರ್ಜಿತ ತೆರಿಗೆ ಜಟಾಪಟಿ!

5-uv-fusion

Yugadi: ವರುಷದ ಆದಿ ಯುಗಾದಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.