ರಸ್ತೆ ಅಪಘಾತ ಒಂದೇ ಕುಟುಂಬದ 7 ಜನ ಸಾವು
Team Udayavani, Aug 1, 2019, 3:00 AM IST
ಧಾರವಾಡ/ಬೆಳಗಾವಿ: ಮಹಾರಾಷ್ಟ್ರದ ಸತಾರದಲ್ಲಿ ಮಂಗಳವಾರ ತಡರಾತ್ರಿ ಸಂಭವಿಸಿದ ಅಪಘಾತದಲ್ಲಿ ಹಜ್ ಯಾತ್ರೆಗೆ ತೆರಳುತ್ತಿದ್ದ ಧಾರವಾಡದ ಒಂದೇ ಕುಟುಂಬ ಮೂರು ಮಕ್ಕಳು ಸೇರಿದಂತೆ ಏಳು ಮಂದಿ ಮೃತಪಟ್ಟಿದ್ದಾರೆ.
ಇಲ್ಲಿನ ಮದಿಹಾಳ ನಿವಾಸಿಗಳಾದ ನಿಜಾಮುದ್ದೀನ ಸೌದಾಗರ (65), ಪತ್ನಿ ಸಪೂರಾ ಬೇಗಂ (58), ಪುತ್ರ ಮನ್ಸೂಬ್ ಅಲಿ (35), ಸೊಸೆ ನಫೀಜಾ (33), ಮೊಮ್ಮಕ್ಕ ಳಾದ ಗುಲಾ°ರ್ (6), ತೈಬಾ (4) ಹಾಗೂ ಅಹ್ಮದ ರೈಜಾ (2) ಮೃತರು. ಸತಾರ ಬಳಿ ತಡ ರಾತ್ರಿ 1 ಗಂಟೆ ಸುಮಾ ರಿಗೆ ಚಾಲ ಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಗಿಡಕ್ಕೆ ಕಾರು ಡಿಕ್ಕಿ ಹೊಡೆ ದ ರಭಸಕ್ಕೆ ಎಲ್ಲರೂ ಮೃತಪಟ್ಟಿದ್ದು, ಕಾರು ಚಾಲಕ ಸೈಯ ಬಾಜಾ ಸ್ಥಿತಿ ಚಿಂತಾಜನಕವಾಗಿದೆ.
ನಿಜಾಮುದ್ದೀನ ಪತ್ನಿ ಸಪೂರಾಬೇಗಂ ಜೊತೆ ಹಜ್ ಯಾತ್ರೆ ಕೈಗೊಂಡಿದ್ದರು. ಅದಕ್ಕಾಗಿ ಆ.1ರಂದು ಹಜ್ಗೆ ಮುಂಬೈ ಮೂಲಕ ವಿಮಾನ ಹತ್ತಬೇಕಿತ್ತು. ಸಪೂರಾಬೇಗಂ ಅವರಿಗೆ ಕಾಲು ನೋವಿದ್ದ ಕಾರಣ ಮಗ ಮನ್ಸೂಬ್ ಅಲಿ ಮಹೀಂದ್ರಾ ಎಸ್ ಯುವಿ ಕಾರು ಮಾಡಿಕೊಂಡು ಕುಟುಂಬ ಸಮೇತ ಅವರನ್ನು ವಿಮಾನ ಹತ್ತಿಸಿ ಬರಲು ಮುಂಬೈಗೆ ಪ್ರಯಾಣ ಬೆಳೆಸಿದ್ದರು. ತಂದೆ-ತಾಯಿಯನ್ನು ಬಿಡಲು ಮಗನ ಜೊತೆ ಪತ್ನಿ, ಮೂರು ಮೊಮ್ಮಕ್ಕಳು ಹೋಗಿದ್ದಾಗ ಈ ಘಟನೆ ನಡೆದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!
Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ
Lok Sabha Polls: “ಮೋದಿ ಮತ್ತೊಮ್ಮೆ ಪ್ರಧಾನಿಯಾಗಿಸುವ ಪಣ ತೊಡಿ’ : ಬಿ.ವೈ. ರಾಘವೇಂದ್ರ
Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್
Lok Sabha Election: ಸೀನಿಯರ್ ಖೂಬಾಗೆ ಜ್ಯೂನಿಯರ್ ಖಂಡ್ರೆ ಸವಾಲು
MUST WATCH
ಹೊಸ ಸೇರ್ಪಡೆ
Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!
Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ
Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..
T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?
ನರಗುಂದ: ಸಮಾಜದಲ್ಲಿ ದೇವಸ್ಥಾನಗಳು ಭಕ್ತಿಯ ಸಂಗಮ- ಶಾಂತಲಿಂಗ ಸ್ವಾಮೀಜಿ