“ಬಾಂಬಿದ್ದ ಬ್ಯಾಗ್‌ ಇರಿಸಿದ್ದು ಇಲ್ಲೇ’ ಎಂದ ಆದಿತ್ಯ


Team Udayavani, Jan 25, 2020, 3:06 AM IST

baombidda

ಮಂಗಳೂರು: “ನಾನು ಸಜೀವ ಬಾಂಬ್‌ ಹೊಂದಿದ್ದ ಬ್ಯಾಗನ್ನು ಇರಿಸಿದ್ದು ಇಲ್ಲೇ’ ಎಂಬುದಾಗಿ ಆರೋಪಿ ಆದಿತ್ಯ ರಾವ್‌ ಪೊಲೀಸ್‌ ತನಿಖಾ ತಂಡಕ್ಕೆ ಖಚಿತಪಡಿಸಿದ್ದಾನೆ. ಪೊಲೀಸ್‌ ಕಸ್ಟಡಿಯಲ್ಲಿರುವ ಆದಿತ್ಯ ರಾವ್‌ನನ್ನು ಶುಕ್ರವಾರ ಮಂಗಳೂರು ಉತ್ತರ ಪೊಲೀಸ್‌ ಉಪ ವಿಭಾಗದ ಎಸಿಪಿ ಬೆಳ್ಳಿಯಪ್ಪ ನೇತೃತ್ವದ ತನಿಖಾ ತಂಡವು ವಿಮಾನ ನಿಲ್ದಾಣ ಮತ್ತು ಇತರ ಸ್ಥಳಗಳಿಗೆ ಕರೆದೊಯ್ದು ಮಹಜರು ನಡೆಸಿತು.

ವಿಮಾನ ನಿಲ್ದಾಣ ಪ್ರವೇಶಿಸುವ ಟಿಕೆಟ್‌ ಕೌಂಟರ್‌ ಬಳಿ ಕರೆದೊಯ್ದಾಗ ಆದಿತ್ಯ ರಾವ್‌, ಅಲ್ಲಿ ಪ್ರಯಾಣಿಕರಿಗೆ ಕುಳಿತುಕೊಳ್ಳಲು ಇರಿಸಿರುವ ಕಬ್ಬಿಣದ ಕುರ್ಚಿಯಲ್ಲಿ ಬಾಂಬ್‌ ಇದ್ದ ಬ್ಯಾಗ್‌ ಇರಿಸಿರುವುದನ್ನು ಒಪ್ಪಿಕೊಂಡಿದ್ದಾನೆ. ಆತನ ಹೇಳಿಕೆಯನ್ನು ತನಿಖಾಧಿಕಾರಿಗಳ ತಂಡ ದಾಖಲಿಸಿಕೊಂಡಿತು.

“ಆಟೋದಲ್ಲಿ ಏರ್‌ಪೋರ್ಟ್‌ ಚೆಕ್ಕಿಂಗ್‌ ಪಾಯಿಂಟ್‌ ತನಕ ಬಂದು ಅಲ್ಲಿ ಇಳಿದು ಬಳಿಕ ನಡೆದುಕೊಂಡು ಬಂದೆ. ಟಿರ್ಮಿನಲ್‌ ಕಟ್ಟಡದ ಟಿಕೆಟ್‌ ಕೌಂಟರ್‌ ಬಳಿ ತಲುಪಿದಾಗ ಅಲ್ಲಿ ಭದ್ರತಾ ಸಿಬ್ಬಂದಿ ಇರಲಿಲ್ಲ. ಹಾಗಾಗಿ ನನ್ನ ಉದ್ದೇಶ ಈಡೇರಿಸಲು ಸಾಧ್ಯವಾಯಿತು’ ಎಂದು ತನಿಖಾ ತಂಡಕ್ಕೆ ವಿವರಿಸಿದ್ದಾನೆ ಎನ್ನಲಾಗಿದೆ.

“ಜ. 20ರಂದು ಬೆಳಗ್ಗೆ 8.35ರ ಸುಮಾರಿಗೆ ನಾನು ಇಲ್ಲಿಗೆ ತಲುಪಿದ್ದು, ಕೇವಲ 5 ನಿಮಿಷಗಳಲ್ಲಿ ಬ್ಯಾಗನ್ನು ಯಾರಿಗೂ ಸಂಶಯ ಬಾರದಂತೆ ಇಲ್ಲಿನ ಕುರ್ಚಿಯಲ್ಲಿ ಇರಿಸಿದೆ. ಬಳಿಕ ಎಸ್ಕಲೇಟರ್‌ ಮೂಲಕ ವಿಮಾನ ನಿಲ್ದಾಣದಿಂದ ಹೊರಗೆ ಬಂದು ಆಟೋ ಹತ್ತಿ ನಿರ್ಗಮಿಸಿದೆ’ ಎಂದು ಹೇಳಿಕೆ ನೀಡಿದ್ದಾನೆ ಎಂದು ಮೂಲಗಳು ತಿಳಿಸಿವೆ.

ಕೆಂಜಾರು ಜಂಕ್ಷನ್‌ನಲ್ಲಿರುವ ಸೆಲೂನ್‌ಗೆ ಭೇಟಿ: ಕೆಂಜಾರು ಜಂಕ್ಷನ್‌ನಲ್ಲಿರುವ ಬಸ್‌ ನಿಲ್ದಾಣ ಬಳಿಯ ವಾಣಿಜ್ಯ ಸಂಕೀರ್ಣದಲ್ಲಿರುವ ಸೆಲೂನ್‌ಗೆ ಆದಿತ್ಯ ರಾವ್‌ನನ್ನು ಕರೆದೊಯ್ಯಲಾಯಿತು. ಆ ಸ್ಥಳವನ್ನು ಗುರುತಿಸಿದ ಆತ, “ಬಸ್‌ನಲ್ಲಿ ಬಂದು ಒಂದು ಬ್ಯಾಗನ್ನು ಒಳಗೆ ಇರಿಸಬಹುದೇ ಎಂದು ಕೇಳಿದ್ದೆ.

ಆದರೆ ಸೆಲೂನ್‌ನವರು ಒಳಗೆ ಅವಕಾಶ ನೀಡದೆ, ಹೊರಗೆ ಇರಿಸುವಂತೆ ಸೂಚಿಸಿದರು. ಆ ಬ್ಯಾಗ್‌ನಲ್ಲಿ ಸ್ಫೋಟಕ ಇರಲಿಲ್ಲ, ಬಟ್ಟೆಬರೆ ಇತ್ತು’ ಎಂದು ಹೇಳಿಕೆ ನೀಡಿದ್ದಾನೆ. ಸೆಲೂನ್‌ನ ಮಾಲೀಕರ ಜತೆ ಆರೋಪಿ ಆದಿತ್ಯ ರಾವ್‌ ಮಾತನಾಡಿರುವ ವಿಚಾರಗಳನ್ನು ಮಹಜರು ವೇಳೆ ಪೊಲೀಸ್‌ ತಂಡ ದಾಖಲಿಸಿಕೊಂಡಿತು.

ಆ ಬಳಿಕ ಆದಿತ್ಯನನ್ನು ಪಣಂಬೂರು ಎಸಿಪಿ ಕಚೇರಿಗೆ ಕರೆದೊಯ್ಯಲಾಯಿತು. ಆತ ಕೆಲಸ ಮಾಡಿದ್ದ ಮಂಗಳೂರಿನ ಬಲ್ಮಠ ರಸ್ತೆಯ ಹೊಟೇಲ್‌ ಮತ್ತು ಕಾರ್ಕಳದ ರೆಸ್ಟೋರೆಂಟ್‌ ಮತ್ತು ಇತರ ಕಡೆಗೆ ತೆರಳಿ ಮಹಜರು ನಡೆಸಬೇಕಾಗಿದೆ. ಅಲ್ಲದೆ ಬಾಂಬ್‌ ತಯಾರಿಗೆ ಕಚ್ಚಾ ಸಾಮಗ್ರಿ ತರಿಸಿಕೊಂಡ ಸ್ಥಳಗಳಿಗೂ ತೆರಳಿ ತನಿಖಾ ತಂಡ ಮಹಜರು ನಡೆಸಲಿದೆ.

ಟಾಪ್ ನ್ಯೂಸ್

Nalin kumar kateel

ಗ್ಯಾರಂಟಿಗಳಿಗೆ ಷರತ್ತು ಹಾಕಿದರೆ ಬೀದಿಗಿಳಿದು ಹೋರಾಟ: ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕಟೀಲ್

2-sddsa

Karnataka-Tamilnadu ನೀರಿಗಾಗಿ ಕಚ್ಚಾಟ ಸಾಕು,ನಾವು ಬ್ರದರ್ಸ್: ಡಿಸಿಎಂ ಡಿಕೆಶಿ

1-sadsad

Georgia ಟ್ರಕ್ ರಾಂಪ್ ಗೆ ಗುದ್ದಿ 120 ಅಡಿ ಗಾಳಿಯಲ್ಲಿ ಹಾರಿದ ಕಾರು;ವಿಡಿಯೋ

rishi in telugu web series

ವೆಬ್ ಸಿರೀಸ್ ನತ್ತ ರಿಷಿ: ತೆಲುಗಿನ ‘ಶೈತಾನ್’ನಲ್ಲಿ ನಟನೆ

Chamarajanagar ಸೇನಾ ತರಬೇತಿ ವಿಮಾನ ಪತನ: ಪ್ಯಾರಾಚೂಟ್ ಸಹಾಯದಿಂದ ಜಿಗಿದ ಪೈಲಟ್ ಗಳು!

Chamarajanagar ಸೇನಾ ತರಬೇತಿ ವಿಮಾನ ಪತನ: ಪ್ಯಾರಾಚೂಟ್ ಸಹಾಯದಿಂದ ಜಿಗಿದ ಪೈಲಟ್ ಗಳು

2-

ಕಡಬ: ವಿದ್ಯುತ್ ಕಂಬವೇರಿದ್ದ ಲೈನ್ ಮ್ಯಾನ್ ಗೆ ವಿದ್ಯುತ್ ಆಘಾತ; ಮೃತ್ಯು

ಕಳಸ: ಕಂಠಪೂರ್ತಿ ಕುಡಿದು ಬಂದು ಆಪರೇಷನ್ ಥಿಯೇಟರ್ ನಲ್ಲಿ ಮಲಗಿದ ಸರ್ಕಾರಿ ವೈದ್ಯ

ಕಳಸ: ಕಂಠಪೂರ್ತಿ ಕುಡಿದು ಬಂದು ಆಪರೇಷನ್ ಥಿಯೇಟರ್ ನಲ್ಲಿ ಮಲಗಿದ ಸರ್ಕಾರಿ ವೈದ್ಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

2-sddsa

Karnataka-Tamilnadu ನೀರಿಗಾಗಿ ಕಚ್ಚಾಟ ಸಾಕು,ನಾವು ಬ್ರದರ್ಸ್: ಡಿಸಿಎಂ ಡಿಕೆಶಿ

ಗ್ಯಾರಂಟಿ ದುಬಾರಿ? ಐದು ಭರವಸೆ ಜಾರಿಯಿಂದಾಗಿ ಬೊಕ್ಕಸಕ್ಕೆ ಹೊರೆ

ಗ್ಯಾರಂಟಿ ದುಬಾರಿ? ಐದು ಭರವಸೆ ಜಾರಿಯಿಂದಾಗಿ ಬೊಕ್ಕಸಕ್ಕೆ ಹೊರೆ

hdk

113 ಸ್ಥಾನ ಬಂದು ಪಂಚರತ್ನ ಜಾರಿ ಮಾಡದಿದ್ದರೆ ವಿಸರ್ಜನೆ ಎಂದಿದ್ದೆ- HDK

ಗ್ಯಾರಂಟಿಗೆ ಹಣಕಾಸು ಇಲಾಖೆಯ ಷರತ್ತು ! ಷರತ್ತು ಇಲ್ಲದೆ ಜಾರಿ ಅಸಾಧ್ಯ ಎಂದ ಅಧಿಕಾರಿಗಳು

ಗ್ಯಾರಂಟಿಗೆ ಹಣಕಾಸು ಇಲಾಖೆಯ ಷರತ್ತು ! ಷರತ್ತು ಇಲ್ಲದೆ ಜಾರಿ ಅಸಾಧ್ಯ ಎಂದ ಅಧಿಕಾರಿಗಳು

thumb-3

ದಕ್ಷಿಣ ಒಳನಾಡು, ಕರಾವಳಿಯಲ್ಲಿ 5 ದಿನ ಮಳೆ ಸಾಧ್ಯತೆ

MUST WATCH

udayavani youtube

ಜಾನಪದ ಕಲೆಯನ್ನು ಅಂತರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದ ಸೋಲಿಗರು

udayavani youtube

ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಕಾರುಗಳ ನಡುವೆ ಅಪಘಾತ, ನಾಲ್ವರಿಗೆ ಗಾಯ

udayavani youtube

ಮಂಡ್ಯ ರಮೇಶ ಅವರ ನಟನದ ರಂಗ ಮಂದಿರ ಹೇಗಿದೆ ನೋಡಿ

udayavani youtube

ಈದ್ಗಾ…ಹಿಂದುತ್ವ…ಅಂದು ಚುನಾವಣೆಯಲ್ಲಿ ಶೆಟ್ಟರ್‌ ವಿರುದ್ಧ ಬೊಮ್ಮಾಯಿ ಪರಾಜಯಗೊಂಡಿದ್ದರು!

udayavani youtube

ಕಾಪು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿನಯ ಕುಮಾರ್ ಸೊರಕೆ ನಾಮಪತ್ರ ಸಲ್ಲಿಕೆ

ಹೊಸ ಸೇರ್ಪಡೆ

Nalin kumar kateel

ಗ್ಯಾರಂಟಿಗಳಿಗೆ ಷರತ್ತು ಹಾಕಿದರೆ ಬೀದಿಗಿಳಿದು ಹೋರಾಟ: ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕಟೀಲ್

2-sddsa

Karnataka-Tamilnadu ನೀರಿಗಾಗಿ ಕಚ್ಚಾಟ ಸಾಕು,ನಾವು ಬ್ರದರ್ಸ್: ಡಿಸಿಎಂ ಡಿಕೆಶಿ

tdy-17

ಯಶವಂತಪುರ- ಹಾಸನಕ್ಕೆ ರೈಲು ಸೇವೆ ವಿಸ್ತರಿಸಿ

ಅನುಷ್ಠಾನವಾಗಲಿಲ್ಲ ಮಂಜೂರಾಗಿದ್ದ ಯೋಜನೆ

ಅನುಷ್ಠಾನವಾಗಲಿಲ್ಲ ಮಂಜೂರಾಗಿದ್ದ ಯೋಜನೆ

1-sadsad

Georgia ಟ್ರಕ್ ರಾಂಪ್ ಗೆ ಗುದ್ದಿ 120 ಅಡಿ ಗಾಳಿಯಲ್ಲಿ ಹಾರಿದ ಕಾರು;ವಿಡಿಯೋ