ವಿಜ್ಞಾನಿಗಳ “ಮೋಹ’ಕ ಬಲೆಗೆ ಬಿದ್ದ ಹಣ್ಣು ನೊಣ

ಕೇವಲ 200 ರೂ.ನಲ್ಲಿ ಹಣ್ಣುಗಳ ರಕ್ಷಣೆ ಪ್ರಯೋಗ ಯಶಸ್ವಿ ; ಧಾರವಾಡ ಪ್ರಾದೇಶಿಕ ತೋಟಗಾರಿಕೆ ವಿವಿ ತಂಡಕ್ಕೆ ಶ್ರೇಯಸ್ಸು

Team Udayavani, Sep 15, 2020, 6:20 AM IST

ವಿಜ್ಞಾನಿಗಳ “ಮೋಹ’ಕ ಬಲೆಗೆ ಬಿದ್ದ ಹಣ್ಣು ನೊಣ

ಪ್ರಯೋಗದ ಮಾದರಿ.

ಧಾರವಾಡ: “ಮೋಹ’ ಎಲ್ಲರನ್ನೂ ಖೆಡ್ಡಾಕ್ಕೆ ಕೆಡುವುತ್ತದೆ. ಇದನ್ನೇ ಮುಂದಿಟ್ಟುಕೊಂಡು ಧಾರವಾಡದ ಕೃಷಿ ವಿಜ್ಞಾನಿಗಳು ರೈತರಿಗೆ ತೀವ್ರ ಕಾಟ ಕೊಡುತ್ತಿದ್ದ ಹಣ್ಣು ನೊಣ (ಫ್ಲೈ ಫ್ಲೂ)ವನ್ನು ಖೆಡ್ಡಾಕ್ಕೆ ಬೀಳಿಸಿದ್ದಾರೆ. ಈ ನೊಣಗಳ ಕಾಟಕ್ಕೆ ರೋಸಿ ಹೋಗಿದ್ದ ಮಾವು, ಪೇರಳೆ ಮತ್ತು ತರಕಾರಿ ರೈತರು ಇನ್ನು ಕೇವಲ 200 ರೂ. ಖರ್ಚಿನಲ್ಲಿ ತಮ್ಮ ಬೆಳೆಗಳನ್ನು ರಕ್ಷಿಸಿಕೊಳ್ಳಬಹುದು.

ಸತತ 5 ವರ್ಷಗಳಿಂದ ತೀವ್ರ ಹಾವಳಿ ಎಬ್ಬಿಸಿದ್ದ ಹಣ್ಣು ನೊಣಗಳು ಈ ಕೃಷಿ ವಿಜ್ಞಾನಿಗಳು ಬೀಸಿದ ಬಲೆಗೆ ಬೀಳುತ್ತಿವೆ. ಅನೇಕ ಬಾರಿ ಈ ನೊಣಗಳನ್ನು ನಿಗ್ರಹಿಸಲು ಪ್ರಯೋ ಗಗಳು ನಡೆದಿದ್ದವು. ಅಂತಿಮವಾಗಿ ಮೋಹಕ ಬಲೆ ಪ್ರಯೋಗದಲ್ಲಿ ಯಶಸ್ಸು ಕಂಡಿದ್ದಾರೆ.

ಪೇರಳೆ, ಸೀತಾಫಲ, ದಾಳಿಂಬೆ, ಲಿಂಬೆಹಣ್ಣು ಮತ್ತು ತರಕಾರಿ ತೋಟಗಳಿಗೂ ಕಂಟಕವಾಗಿರುವ ನೊಣದ ಅಧ್ಯಯನ ಮಾಡಿದ ಡಾ| ಜ್ಞಾನೇಶ್ವರ ಬಿ. ಗೋಪಾಲಿ ನೇತೃತ್ವದಲ್ಲಿ ಡಾ| ನಾಗೇಶ ನಾಯಕ್‌, ಡಾ| ಶಾಂತಪ್ಪ ತಿರಕಣ್ಣವರ ಹಾಗೂ ಡಾ| ಸುವರ್ಣ ಪಾಟೀಲ್‌ ಅವರ ತಂಡ ಈ ಪ್ರಯೋಗವನ್ನು ಮಾಡಿದೆ.

ಏನಿದು ಮೋಹಕ ಬಲೆ?
ರೈತರು ತಮ್ಮ ತೋಟಗಳಲ್ಲಿ ಪ್ಲಾಸ್ಟಿಕ್‌ ಬಾಟಲಿಗಳ ಕುತ್ತಿಗೆ ಭಾಗದಲ್ಲಿ 10 ಮಿ. ಮೀ. ಅಳತೆಯ 4 ರಂಧ್ರ ಕೊರೆಯಬೇಕು. ಅನಂತರ ಪ್ರತಿ ಲೀಟರ್‌ ನೀರಿಗೆ 1 ಮಿ. ಲೀ. ಮಿಥೈಲ್‌ ಯುಜಿನಾಲ್‌ ಹಾಗೂ 2.0 ಮಿ. ಲೀ. ಪ್ರೊಪೆನೋಪಾಸ್‌ 50 ಇ.ಸಿ. ಹಾಕಿ ಮಿಶ್ರಣ ಮಾಡಬೇಕು. ಈ ದ್ರಾವಣವನ್ನು ಪ್ರತಿ ಬಾಟಲಿಗೆ 100 ಮಿ. ಲೀ. ಲೀಟರ್‌ ಹಾಕಿ ಅವು ಗಳನ್ನು ಗಿಡಗಳಿಗೆ ನೇತು ಹಾಕಬೇಕು. ಒಂದು ಹೆಕ್ಟೇರ್‌ಗೆ ಕೇವಲ ಇಂತಹ 10 ಬಲೆಗಳಿದ್ದರೆ ಸಾಕು. ಹಣ್ಣು ನೊಣಗಳು ಈ ದ್ರಾವಣದ ವಾಸನೆಗೆ ಆಕರ್ಷಿತಗೊಂಡು ಬಾಟಲಿಗಳ ಒಳಗಡೆ ಬಂದು ದ್ರಾವಣ ಕುಡಿದು ಸಾಯುತ್ತವೆ. ಇದನ್ನು ವಾರಕ್ಕೆ ಎರಡು ಬಾರಿ ಬದಲಿಸಬೇಕು. ಮಾಗಿದ ಬಾಳೆಹಣ್ಣಿಗೆ ಶೇ. 10 ಬೆಲ್ಲ, ಶೇ.1 ಕಾಬೋಪುರಾನ್‌ 3ಜಿ ಸ್ಪೈನೋಸ್ಯಾಡ, 45 ಎಸ್‌.ಸಿ. ಮಿಶ್ರಣದ ದ್ರಾವಣದಲ್ಲಿ ಅದ್ದಿ ಬಾಟಲಿಗೆ ಹಾಕಿ ಗಿಡಗಳಿಗೆ ಕಟ್ಟಿ ದರೆ ನೊಣದ ಹಾವಳಿ ತಡೆಯ ಬಹುದು. ಹಣ್ಣು ಲಿಂಬೆಹಣ್ಣಿನ ಗಾತ್ರಕ್ಕೆ ಬೆಳೆಯುವ ಮೊದಲೇ ಇದನ್ನು ಮಾಡಬೇಕು.

ಕೀಟಕಾಟ ಅಧಿಕ?
ಮೊಟ್ಟೆ, ಮರಿಹುಳು, ಕೋಶಾವಸ್ಥೆ, ಪ್ರೌಢಾವಸ್ಥೆಯ ನಾಲ್ಕು ಬಗೆಯ ಜೀವನ ಚಕ್ರ ಹೊಂದಿರುವ ಈ ನೊಣಗಳು ಮಾವು, ಪೇರಳೆ ಹಣ್ಣುಗಳು ಲಿಂಬೆಹಣ್ಣಿನ ಗಾತ್ರಕ್ಕೆ ಬಂದ ಕೂಡಲೇ ಅದರಲ್ಲಿ ಮೊಟ್ಟೆ ಇಟ್ಟು ಹಾರಿ ಹೋಗುವ ಹಳದಿ ಬಣ್ಣದ ನೊಣದಿಂದ ಆ ಹಣ್ಣು, ತರಕಾರಿ ಗಳು ಕೊಳೆಯಲಾರಂಭಿಸುತ್ತವೆ. ಅದರ ಲಾರ್ವಾಗಳು ವಿಷಕಾ ರಕ ವಾಗಿದ್ದು, ಹಣ್ಣುಗಳ ಜೀವಕಣ ಗಳ ಮೇಲೆ ಸವಾರಿ ಮಾಡುತ್ತವೆ.

ರೈತರು ಹಣ್ಣು ನೊಣದಿಂದ ಕಂಗಾ ಲಾಗಿದ್ದರು. ತೋಟಗಾರಿಕೆ ಬೆಳೆ ಗಳಾದ ಮಾವು, ಪೇರಳೆ ಮಾತ್ರ ವಲ್ಲದೆ ತರಕಾರಿಗೂ ಈ ನೊಣ ಮಾರಕವಾಗಿತ್ತು. ಈಗ ನಮ್ಮ ಪ್ರಯೋಗ ಯಶಸ್ಸು ಕಂಡಿದೆ.
– ಡಾ| ಜ್ಞಾನೇಶ್ವರ ಗೋಪಾಲಿ, ಧಾರವಾಡ ಸಂಶೋಧಕ ಕೃಷಿ ವಿಜ್ಞಾನಿ

 ಬಸವರಾಜ ಹೊಂಗಲ್‌

ಟಾಪ್ ನ್ಯೂಸ್

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

1-weqwewq

Belthangady: ಸ್ಕೂಟರ್ ಢಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಸಾವು

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

1-wwqeqw

Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ

kejriwal-2

Kejriwal ಕುರಿತು ಅಮೆರಿಕದ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದ ಭಾರತದ ವಿದೇಶಾಂಗ ಇಲಾಖೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

PSI re-examination: ಪಿಎಸ್‌ಐ ಮರು ಪರೀಕ್ಷೆ, ಅಂತಿಮ ಅಂಕಪಟ್ಟಿ ಬಿಡುಗಡೆ

PSI re-examination: ಪಿಎಸ್‌ಐ ಮರು ಪರೀಕ್ಷೆ, ಅಂತಿಮ ಅಂಕಪಟ್ಟಿ ಬಿಡುಗಡೆ

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

Congress candidate: ನಾನು ಹುಟ್ಟಿದಾಗ ಒಕ್ಕಲಿಗ, ಬೆಳೆಯುತ್ತ ವಿಶ್ವಮಾನವ: ಲಕ್ಷ್ಮಣ್‌

Congress candidate: ನಾನು ಹುಟ್ಟಿದಾಗ ಒಕ್ಕಲಿಗ, ಬೆಳೆಯುತ್ತ ವಿಶ್ವಮಾನವ: ಲಕ್ಷ್ಮಣ್‌

Dinesh Gundu Rao: ಕ್ಷಯ ರೋಗ ನಿಯಂತ್ರಣ ಔಷಧ ಪೂರೈಕೆಗೆ ಕೇಂದ್ರಕ್ಕೆ ಮನವಿ; ದಿನೇಶ್‌

Dinesh Gundu Rao: ಕ್ಷಯ ರೋಗ ನಿಯಂತ್ರಣ ಔಷಧ ಪೂರೈಕೆಗೆ ಕೇಂದ್ರಕ್ಕೆ ಮನವಿ; ದಿನೇಶ್‌

Lok Sabha elections: ಸಂಸದ ಬಸವರಾಜುಗೆ “ಗೋ ಬ್ಯಾಕ್‌’ ಎಂದ ಬಿಜೆಪಿಗರು!

Lok Sabha elections: ಸಂಸದ ಬಸವರಾಜುಗೆ “ಗೋ ಬ್ಯಾಕ್‌’ ಎಂದ ಬಿಜೆಪಿಗರು!

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

1-eewqeeeqwewqewq

Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್‌, ಸ್ಟೋಯಿನಿಸ್‌, ಅಗರ್‌ ಹೊರಕ್ಕೆ

1-hanuma

ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್‌

1-wewqqewqe

Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್‌

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.