ಅಗುಂಬೆ ಘಾಟ್ ಅಪಾಯದ ಅಂಚಿನಲ್ಲಿ;7 ನೇ ಸುತ್ತಿನಲ್ಲಿ ಕುಸಿತ !
Team Udayavani, Jun 28, 2018, 12:07 PM IST
ಉಡುಪಿ: ಕರಾವಳಿ ಮತ್ತು ಮಲೆನಾಡಿನಲ್ಲಿ ಭಾರೀ ಮಳೆಯಾಗುತ್ತಿದ್ದು, ಪರಿಣಾಮ ಆಗುಂಬೆ ಘಾಟ್ನ 7 ನೇ ಸುತ್ತಿನಲ್ಲಿ ಕುಸಿತವಾಗಿದ್ದು ಅಪಾಯದ ಅಂಚಿನಲ್ಲಿದೆ.
ರಸ್ತೆಗೆ ಹಾಕಲಾಗಿದ್ದ ಟಾರು ಮಣ್ಣಿನೊಡನೆ ಕುಸಿದು ಹೋಗಿದ್ದು ಅಪಾಯ ಎದುರಾಗಿದೆ.
ಕೆಲ ದಿನಗಳ ಹಿಂದೆ ಚಾರ್ಮಾಡಿ ಘಾಟ್ನಲ್ಲಿ ಭಾರೀ ಮಳೆಯ ಪ್ರಮಾಣ ಭಾರೀ ಪ್ರಮಾಣದಲ್ಲಿ ಗುಡ್ಡ ಕುಸಿತ ಸಂಭವಿಸಿ ಸಂಚಾರಕ್ಕೆ ವ್ಯಾಪಕ ತೊಂದರೆಯಾಗಿತ್ತು.
ಸ್ಥಳಕ್ಕೆ ಅಧಿಕಾರಿಗಳು ಆಗಮಿಸಿ ಪರಿಶೀಲನೆ ನಡೆಸಿರುವ ಬಗ್ಗೆ ವರದಿಯಾಗಿದೆ.
ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗುತ್ತಿದೆ.