ಸದಾ ಯಡಿಯೂರಪ್ಪ ಜತೆ ಇರುತ್ತೇವೆ: ರಾಮದಾಸ್
Team Udayavani, Oct 1, 2019, 3:00 AM IST
ಮೈಸೂರು: “ಯಡಿಯೂರಪ್ಪ ಅವರು ನಮ್ಮ ಕ್ಯಾಪ್ಟನ್. ನಾವು ಸದಾ ಅವರ ಜತೆಯಲ್ಲೇ ಇರುತ್ತೇವೆ. ಯಾವುದೇ ಸಂದರ್ಭದಲ್ಲಿ ಆ ರೀತಿಯ ಪರಿಸ್ಥಿತಿ ನಿರ್ಮಾಣವಾಗು ವುದಿಲ್ಲ. ಏಕೆಂದರೆ ಬಿಜೆಪಿಯ ಕೇಡರ್ ಬೇಸ್ ನಿಂದ ನಾವೆಲ್ಲ ಬಂದವರು’ ಎಂದು ಶಾಸಕ ಎಸ್.ಎ. ರಾಮದಾಸ್ ಹೇಳಿದರು.
ಅರಮನೆ ಆವರಣದಲ್ಲಿ ಮಾಧ್ಯಮದವ ರೊಂದಿಗೆ ಮಾತನಾಡಿದ ಅವರು, ನಮಗೆ ಸ್ಥಾನ ಸಿಗಲಿ ಸಿಗದಿರಲಿ, ಊಟ ಸಿಗಲಿ ಸಿಗದಿರಲಿ ನಾವು ಅದನ್ನು ಒಳಗೆ ಇಟ್ಟುಕೊಂಡು ನಮ್ಮ ಮನೆಯ ಘನತೆ, ಗೌರವವನ್ನು ಕಾಪಾ ಡುವುದು ನಮ್ಮೆಲ್ಲರ ಕರ್ತವ್ಯ. ಬಿಎಸ್ವೈ ಅವರು ತಂದೆ ಸ್ಥಾನದಲ್ಲಿದ್ದಾರೆ. ಅವರು ಯಾವ ಭಾವನೆಯಲ್ಲಿ ಹೇಳಿ ದರೋ ಗೊತ್ತಿಲ್ಲ ಆದರೆ ಅವರ ಜತೆ ನಾವಿದ್ದೇವೆ ಎಂದರು.