ಊಟ ಬೇಡ, ಶಾಶ್ವತ ಪರಿಹಾರ ಕೊಡಿ; ಅಂಗನವಾಡಿ ಹೋರಾಟ ತೀವ್ರ
Team Udayavani, Mar 23, 2017, 3:18 PM IST
ಬೆಂಗಳೂರು:ಕಳೆದ ಮೂರು ದಿನಗಳಿಂದ ನಗರದಲ್ಲಿ ಧರಣಿ ನಡೆಸುತ್ತಿರುವ ಅಂಗನವಾಡಿ ಕಾರ್ಯಕರ್ತೆಯರು ಗುರುವಾರ ನಮಗೆ ಊಟ ಬೇಡ, ಶಾಶ್ವತ ಪರಿಹಾರ ನೀಡಿ ಎಂದು ಹೇಳುವ ಮೂಲಕ ಹೋರಾಟವನ್ನು ತೀವ್ರಗೊಳಿಸಿದ್ದಾರೆ.
ಕನಿಷ್ಠ 10 ಸಾವಿರ ರೂಪಾಯಿ ಮಾಸಿಕ ಗೌರವಧನಕ್ಕಾಗಿ ಒತ್ತಾಯಿಸಿ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ಸೋಮವಾರದಿಂದ ಅಹೋರಾತ್ರಿ ಧರಣಿ ನಡೆಸುತ್ತಿದ್ದು, ಇಂದು ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ.
ಮಧ್ಯಾಹ್ನ ಮಾಜಿ ಸಚಿವ ಕೃಷ್ಣಯ್ಯ ಶೆಟ್ಟಿ ಅವರು ಪ್ರತಿಭಟನಾ ನಿರತ ಅಂಗನವಾಡಿ ಕಾರ್ಯಕರ್ತೆಯರಿಗೆ ಊಟ ವಿತರಿಸಲು ಮುಂದಾಗಿದ್ದರು. ಆಗ ಅಂಗನವಾಡಿ ಕಾರ್ಯಕರ್ತೆಯರು ನಮಗೆ ಊಟ ಬೇಡ ಸರ್, ಶಾಶ್ವರ ಪರಿಹಾರ ನೀಡಿ ಎಂದು ಹೇಳಿದ್ದಲ್ಲದೇ ಊಟ ವಿತರಿಸುತ್ತಿದ್ದ ಟೆಂಪೋವನ್ನು ವಾಪಸ್ ಕಳುಹಿಸಿದರು.