ಬದಲಾವಣೆ ಎಂಬುದು ಅಸಂಗತದ ಮಾತುಗಳು : ಆರಗ ಜ್ಞಾನೇಂದ್ರ
Team Udayavani, Jun 6, 2021, 1:51 PM IST
ಶಿವಮೊಗ್ಗ : ಈಗ ಯಾವುದನ್ನು ಚರ್ಚೆಯ ಮಾಡುವ ಸಮಯವಲ್ಲ. ಇದು ಕೋವಿಡ್ ವಿರುದ್ಧ ಹೋರಾಟದ ಸಮಯ. ಈಗ ಬದಲಾವಣೆ ಎಂಬುದು ಅಸಂಗತದ ಮಾತುಗಳು. ಬದಲಾವಣೆ ಸಾಧ್ಯವಿಲ್ಲ.. ಯಡಿಯೂರಪ್ಪ ನಮ್ಮ ಏಕಮಾತ್ರ ನಾಯಕರು ಎಂದು ಶಿವಮೊಗ್ಗದಲ್ಲಿ ತೀರ್ಥಹಳ್ಳಿ ಶಾಸಕ ಹಾಗೂ ಗೃಹಮಂಡಳಿ ಅಧ್ಯಕ್ಷ ಆರಗ ಜ್ಞಾನೇಂದ್ರ ಪ್ರತಿಕ್ರಿಯೆ ನೀಡಿದ್ದಾರೆ.
ಹೈಕಮಾಂಡ್ ಹೇಳಿದರೇ ರಾಜೀನಾಮೆ ನೀಡುವೆ ಎಂಬ ಸಿಎಂ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ಸಿಎಂ ಮುಂದುವರಿಯುತ್ತಾರೆ. ಅವರ ಬದಲಾವಣೆ ಇರಾದೇ ನಮ್ಮಂತ ಶಾಸಕರ ಕಡೆಯಿಂದ ಇಲ್ಲ. ಯಡಿಯೂರಪ್ಪ ಬಗ್ಗೆ ನಮ್ಮ ವಿಶ್ವಾಸವಿದೆ. ಅವರೇ ಮುಂದುವರಿದು, ಕೋವಿಡ್ ವಿರುದ್ದ ಕೆಲಸ ಮಾಡುತ್ತಿದ್ದಾರೆ. ಏನು ಕಿರಿಕಿರಿ ಇಲ್ಲ. ಕೆಲಸ ಇಲ್ಲದವರೂ ಏನು ಬೇಕಾದರೂ ಮಾತನಾಡಬಹುದು. ನಾವೆಲ್ಲಾ ಬ್ಯುಸಿ ಇದ್ದೇವೆ. ನಾಯಕತ್ವದ ಕೊರತೆಯಿಲ್ಲ. ಜನರ ನಡುವೆ ಕೆಲಸ ಮಾಡುತ್ತಿದ್ದೇವೆ ಎಂದರು.
ಕೋವಿಡ್ ಜೀರೋ ಆಗ್ಬೇಕು… ಕೋವಿಡ್ ಮುಕ್ತ ಕರ್ನಾಟಕ ಆಗಬೇಕು. ಯಡಿಯೂರಪ್ಪರನ್ನು ಬದಲಾಯಿಸಿದ್ರೇ ಕೋವಿಡ್ ಹೋಗುತ್ತಾ..? ಯಾರು ಹೇಳಿದ್ದು ಅದ್ನಾ…? ಯಾತಕ್ಕೆ ದೆಹಲಿಗೆ ಹೋಗ್ತಾರೋ ಗೊತ್ತಿಲ್ಲ.. ಹೋದವರಲ್ಲಾ ಇದಕ್ಕೆ ಹೋಗಲ್ಲ.. ಏಕೆ ದೆಹಲಿಗೆ ಹೋದರೂ.. ಇಂತವರು ಬಂದಿದ್ರೂ ಎಂದು ಹೈಕಮಾಂಡ್ ಹೇಳಬೇಕು.
ಹೈಕಮಾಂಡ್ ಈಗಾಗಲೇ ಸ್ಪಷ್ಟ ಪಡಿಸಿದ್ದು, ಸಿಎಂ ಬದಲಾವಣೆ ಮಾಡಲ್ಲ ಎಂದಿದ್ದಾರೆ. ಯಡಿಯೂರಪ್ಪ ಐದು ವರ್ಷ ಪೂರ್ಣ ಮಾಡ್ತಾರೆ. ಅತ್ಯಂತ ದಕ್ಷತೆಯಿಂದ ಕೆಲಸ ಮಾಡ್ತಾ ಇದ್ದಾರೆ. ನಾವು, ರಾಜ್ಯ ನಾಯಕರು ಸೇರಿ ದಂತೆ ಹೈಕಮಾಂಡ್ ಕೂಡ ಬಿಎಸ್ ಬೈ ಅವರ ಜೊತೆಗಿದ್ದಾರೆ ಎಂದ ಆರಗ ಜ್ಞಾನೇಂದ್ರ ಹೇಳಿಕೆ ನೀಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sagara: ಮಹಿಳೆಯ ಗರ್ಭಕೋಶದಲ್ಲಿದ್ದ 7 ಕೆಜಿ ಗಡ್ಡೆ ಹೊರತೆಗೆದ ವೈದ್ಯರು
Sirsi: ಏ. 28ಕ್ಕೆ ಶಿರಸಿಗೆ ಪ್ರಧಾನಿ ಮೋದಿ… ಸಿದ್ಧತೆ ಆರಂಭ: ಕಾಗೇರಿ
ಮೂಲಭೂತ ಸೌಕರ್ಯ ಕೊಡಿ ಎಂದಿದ್ದೇನೆ ಹೊರತು, ಒಕ್ಕಲೆಬ್ಬಿಸಿ ಎಂದಿಲ್ಲ; ಬೇಳೂರು ಸ್ಪಷ್ಟನೆ
90 ದಿನದಲ್ಲಿ ನೇಹಾ ಕುಟುಂಬಕ್ಕೆ ನ್ಯಾಯ ಸಿಗುವ ವಿಶ್ವಾಸವಿದೆ..: ರಣದೀಪ್ ಸಿಂಗ್ ಸುರ್ಜೇವಾಲಾ
LS Polls: ರಾಜ್ಯದ ಜನರಿಗೆ ಈಶ್ವರಪ್ಪ ಸ್ಪರ್ಧೆ ವಿಷಯ ಈಗ ಖಚಿತ: ಈಶ್ವರಪ್ಪ
MUST WATCH
ಹೊಸ ಸೇರ್ಪಡೆ
Jayaprakash Hegde “ಉತ್ತಮ ಕೆಲಸ ಮಾಡಿಸಿಕೊಳ್ಳಬೇಕಾದ ಅವಶ್ಯಕತೆ ಮತದಾರರಿಗಿದೆ’
Kundapura “ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಗೆಲ್ಲಿಸಿ’: ಜಯಪ್ರಕಾಶ್ ಹೆಗ್ಡೆ
Malpe ಮೀನುಗಾರಿಕೆ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ: ಜೆ.ಪಿ. ಹೆಗ್ಡೆ
Subramanya ಏನೆಕಲ್ಲು: ಕಾರಿಗೆ ಗೂಡ್ಸ್ ಆಟೋ ಢಿಕ್ಕಿ
Rahul Gandhi: ಜಾತಿಗಣತಿಯನ್ನು ಯಾವ ಶಕ್ತಿಯೂ ತಡೆಯಲಾರದು: ರಾಹುಲ್ ಗಾಂಧಿ