ಕೇಂದ್ರದಿಂದ ಹೆಚ್ಚಿನ ಅನುದಾನಕ್ಕೆ ಯತ್ನ
Team Udayavani, Aug 22, 2019, 3:00 AM IST
ಹುಬ್ಬಳ್ಳಿ/ಬಾಗಲಕೋಟೆ/ವಿಜಯಪುರ: ನೆರೆ ಪರಿಹಾರಕ್ಕಾಗಿ ಕೇಂದ್ರದಿಂದ ಸದ್ಯ 1,029 ಕೋಟಿ ರೂ.ಅನುದಾನ ಬಂದಿದ್ದು, ಇನ್ನೂ ಹೆಚ್ಚು ಅನುದಾನ ತರಲು ಯತ್ನಿಸಲಾಗುವುದು ಎಂದು ಸಚಿವ ಕೆ.ಎಸ್.ಈಶ್ವರಪ್ಪ ತಿಳಿಸಿದರು. ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, ಪ್ರವಾಹ ಪರಿಸ್ಥಿತಿ ನಿಭಾಯಿಸುವುದನ್ನು ಸವಾಲಾಗಿ ಸ್ವೀಕರಿಸಿದ್ದೇವೆ.
ನೆರೆ ಪರಿಹಾರಕ್ಕಾಗಿ ಕೇಂದ್ರದಿಂದ ಸದ್ಯ 1,029 ಕೋಟಿ ರೂ.ಅನುದಾನ ಬಂದಿದ್ದು, ಇನ್ನೂ ಹೆಚ್ಚು ಅನುದಾನ ತರಲು ಯತ್ನಿಸಲಾಗುವುದು. ಆದರೆ ಪ್ರತಿಪಕ್ಷಗಳು ಬೇರೆ ವಿಷಯ ಇಲ್ಲದ್ದಕ್ಕೆ ಕೇಂದ್ರ ಸರಕಾರ ನೆರೆ ಪರಿಹಾರಕ್ಕೆ ಹಣ ನೀಡಿಲ್ಲ ಎಂದು ವಿನಾಕಾರಣ ಆರೋಪಿಸುತ್ತಿವೆ. ಈ ವಿಷಯದಲ್ಲಿ ರಾಜಕೀಯ ಮಾಡಬಾರದು ಎಂದು ತಿಳಿಸಿದರು.