ಬೆಂಗಳೂರು ಕನ್ನಡಿಗರ ರಾಜಧಾನಿಯೇ?: ಸಿದ್ದು
Team Udayavani, Jul 1, 2019, 3:00 AM IST
ಬಾಗಲಕೋಟೆ: “ಬೆಂಗಳೂರು ಕರ್ನಾಟಕದ ರಾಜಧಾನಿ. ಆದರೆ, ಕನ್ನಡದ ಪರಿಸ್ಥಿತಿ ನೋಡಿದರೆ ಅದು ಕನ್ನಡಿಗರ ರಾಜಧಾನಿಯೇ ಎಂಬ ಸಂಶಯ ಬರುತ್ತದೆ. ಇದು ವಿಪರ್ಯಾಸ’ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ವಿಷಾದ ವ್ಯಕ್ತಪಡಿಸಿದರು.
ಕನ್ನಡ ಅಭಿವೃದ್ಧಿ ಪ್ರಾಧಿಕಾರದಿಂದ ಹಮ್ಮಿಕೊಂಡಿದ್ದ ಕನ್ನಡ ಭಾಷಾ ಮಾಧ್ಯಮ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಅವರು, ಬೆಂಗಳೂರಿನಲ್ಲಿ ಇಂದು ಶೇ.80 ಜನ ಕನ್ನಡೇತರರಿದ್ದಾರೆ. ಶೇ.20 ಜನ ಮಾತ್ರ ಕನ್ನಡಿಗರು, ನಮ್ಮ ಭಾಷೆ, ಸಂಸ್ಕೃತಿ ಉಳಿಸಿಕೊಂಡು ಹೊರಟಿದ್ದಾರೆ.
ಬೆಂಗಳೂರಿನಲ್ಲಿ ಕನ್ನಡವನ್ನೇ ಕಲಿಯದೇ ಬದುಕು ನಡೆಸುವವರಿದ್ದಾರೆ. ನಮ್ಮವರಿಗೆ ಭಾಷೆಯ ಮೇಲೆ ಬದ್ಧತೆ ಇಲ್ಲ. ಅದೇ ತಮಿಳುನಾಡಿಗೆ ಹೋದರೆ ಅವರು ಕಡ್ಡಾಯವಾಗಿ ಅವರ ಭಾಷೆ ಮಾತನಾಡುತ್ತಾರೆ ಎಂದರು.