ಬಳ್ಳಾರಿ:ಬಿಜೆಪಿ ಮುಖಂಡ ಬಂಡಿ ರಮೇಶ್ ಬರ್ಬರ ಹತ್ಯೆ
Team Udayavani, Jun 22, 2017, 4:55 PM IST
ಬಳ್ಳಾರಿ: ಇಲ್ಲಿನ ಗುಗ್ಗರ ಹಟ್ಟಿ ಪ್ರದೇಶದ ಡಾಬಾವೊಂದದಲ್ಲಿ ಬಿಜೆಪಿ ಎಸ್ಟಿ ಮೋರ್ಚಾ ಮುಖಂಡ ಬಂಡಿ ರಮೇಶ್(35) ಎನ್ನುವವರನ್ನು ಮಾರಕಾಯುಧಗಳಿಂದ ಬರ್ಬರವಾಗಿ ಕೊಚ್ಚಿ ಕೊಲೆಗೈದ ಘಟನೆ ಗುರುವಾರ ಮಧ್ಯಾಹ್ನ ನಡೆದಿದೆ.
ವರದಿಯಾದಂತೆ ಬಳ್ಳಾರಿ ನಗರ ನಿವಾಸಿಯಾಗಿದ್ದ ಬಂಡಿ ರಮೇಶ್ ಎಸ್ಟಿ ಮೋರ್ಚಾ ಉಪಾಧ್ಯಕ್ಷ ರಾಗಿದ್ದು , ಕೊಲೆ ಪ್ರಕರಣವೊಂದರಲ್ಲಿ ಜೈಲು ಪಾಲಾಗಿ ಕೆಲ ದಿನಗಳ ಹಿಂದಷ್ಟೇ ಬಿಡುಗಡೆಯಾಗಿ ಬಂದಿದ್ದರು ಎನ್ನಲಾಗಿದೆ.
ಶ್ರೀರಾಮುಲು ,ಸೋಮಶೇಖರ ರೆಡ್ಡಿ ಆಪ್ತವಲಯದಲ್ಲಿ ಗುರುತಿಸಿಕೊಂಡಿದ್ದರು ಎಂದು ವರದಿಯಾಗಿದೆ.
ಬಳ್ಳಾರಿ ಗ್ರಾಮಾಂತರ ಪೊಲೀಸರು ಸ್ಥಳಕ್ಕಾಗಮಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದು ವರಿಸಿದ್ದಾರೆ. ಸ್ಥಳದಲ್ಲಿ ಬಿಗಿ ಭದ್ರತೆ ಕೈಗೊಳ್ಳಲಾಗಿದೆ.
ಪೂರ್ವ ದ್ವೇಷದಲ್ಲೇ ಹತ್ಯೆ ನಡೆದಿದೆ ಎಂದು ಹೇಳಲಾಗಿದ್ದು, ಹೆಚ್ಚಿನ ವಿವರಗಳು ಇನ್ನಷ್ಟೇ ಲಭ್ಯವಾಗಬೇಕಿದೆ.