ಬಿಜೆಪಿಗೆ ಸೋಲಿನ ಭಯ,ಐಟಿ ದಾಳಿ ತಿರುಗು ಬಾಣ ಆಗ್ತದೆ; ಸಿಎಂ ಕಿಡಿ
Team Udayavani, May 8, 2018, 12:14 PM IST
ಮೈಸೂರು: ‘ಬಿಜೆಪಿಯವರಿಗೆ ಸೋಲಿನ ಭಯ ಇದ್ದು, ರಾಜಕೀಯವಾಗಿ ತೊಂದರೆ ಕೊಡಲು ದುರುದ್ದೇಶ ಮತ್ತು ದ್ವೇಷ ದಿಂದ ಐಟಿ ದಾಳಿ ಮಾಡುತ್ತಿದ್ದಾರೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಗಳವಾರ ಕಿಡಿ ಕಾರಿದ್ದಾರೆ.
ಬಾದಾಮಿಯಲ್ಲಿ ಕೃಷ್ಣ ಹೆರಿಟೇಜ್ ಮತ್ತು ಮಯೂರ ಹೊಟೇಲ್ ಮೇಲೆ ಐಟಿ ದಾಳಿ ಬಗ್ಗೆ ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದ ಸಿಎಂ ಬಿಜೆಪಿ ವಿರುದ್ದ ಕಿಡಿ ಕಾರಿದರು.
‘ಐಟಿ ದಾಳಿ ಬೇರೆ ಕಡೆ ಯಾಕೆ ಮಾಡುತ್ತಿಲ್ಲ, ಅಮಿತ್ ಶಾ ಉಳಿದುಕೊಂಡಲ್ಲಿ ಯಾಕೆ ಮಾಡಿಲ್ಲ? ಯಡಿಯೂರಪ್ಪ ಮೇಲೆ ಯಾಕೆ ಮಾಡಿಲ್ಲ, ಜಗದೀಶ್ ಶೆಟ್ಟರ್ ಮೇಲೆ ಯಾಕೆ ಮಾಡಿಲ್ಲ?’ ಎಂದರು.
‘ಎಲ್ಲಾ ನರೇಂದ್ರ ಮೋದಿ ಮತ್ತು ಅಮಿತ್ ಶಾ ಮಾಡಿಸುತ್ತಿದ್ದಾರೆ. ಇದರಿಂದ ಅನುಕೂಲ ಆಗುತ್ತದೆ ಅಂತ ತಿಳಿದುಕೊಂಡಿದ್ದರೆ ಅವರಷ್ಟು ಮೂರ್ಖರು ಬೇರೆ ಯಾರಿಲ್ಲ’ ಎಂದರು.
‘ನಾನು ರೂಂ ಖಾಲಿ ಮಾಡಿಕೊಂಡು ಬಂದ ಮೇಲೆ ದಾಳಿ ಮಾಡಿದರೆ ಏನು ಸಿಗುತ್ತದೆ. ಹಿಂದಿನ ಯಾವ ಸರ್ಕಾರವೂ ಈ ರೀತಿ ಮಾಡಿಲ್ಲ,ಚುನಾವಣೆ ವೇಳೆ ಈ ರೀತಿ ಮಾಡುತ್ತಾರಾ? ನಾನು ಯಾರಿಗೂ ಹೆದರಿಕೊಳ್ಳುವುದಿಲ್ಲ. ಯಾಕೆ ಹೆದರಿಕೆ, ತಪ್ಪು ಮಾಡಿದರೆ ಅಲ್ವಾ ಹೆದರಿಕೆ’ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Thirthahalli: ರಾಜ್ಯದ 28 ಕ್ಷೇತ್ರವನ್ನೂ ಗೆಲ್ಲಿಸಬೇಕೆಂದು ಜೆಡಿಎಸ್ ಪಕ್ಷದೊಂದಿಗೆ ಮೈತ್ರಿ
Kalaburagi: ನನ್ನ ಹೆಣದ ಮೇಲೆ ಬಿಜೆಪಿ ಚುನಾವಣೆ ಮಾಡಲು ಹೊರಟಿದೆ: ಪ್ರಿಯಾಂಕ್
ದಿಂಗಾಲೇಶ್ವರ ಸ್ವಾಮೀಜಿಗೆ ತಪ್ಪು ತಿಳಿವಳಿಕೆಯಾಗಿದ್ದರೆ ಸರಿಪಡಿಸುವೆ: ಸಚಿವ ಪ್ರಹ್ಲಾದ ಜೋಶಿ
ಲೋಕಸಭಾ ಚುನಾವಣೆ: ಈ ಬಾರಿ ತೆಲಂಗಾಣದಲ್ಲಿ 10ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಗೆಲುವು; ಅಭಯ ಪಾಟೀಲ
ಕಾಂಗ್ರೆಸ್ ನವರು ಕೇಸರಿ ಶಾಲು ಹಾಕಿದಾಕ್ಷಣ ಮನಸ್ಥಿತಿ ಬದಲಾಗಲ್ಲ… ಶೆಟ್ಟರ್ ಆರೋಪ
MUST WATCH
ಹೊಸ ಸೇರ್ಪಡೆ
Delhi: ದುಬಾರಿ ಮರ್ಸಿಡೆಸ್ ಕಾರಿನಲ್ಲಿ ಡ್ರಗ್ಸ್ ಸಾಗಾಟ-ರಾಷ್ಟ್ರಮಟ್ಟದ ಕುಸ್ತಿಪಟು ಬಂಧನ!
Thirthahalli: ರಾಜ್ಯದ 28 ಕ್ಷೇತ್ರವನ್ನೂ ಗೆಲ್ಲಿಸಬೇಕೆಂದು ಜೆಡಿಎಸ್ ಪಕ್ಷದೊಂದಿಗೆ ಮೈತ್ರಿ
Tollywood: ಸಿದ್ಧಾರ್ಥ್ – ಅದಿತಿ ರಾವ್ ಮದುವೆ ಆಗಿಲ್ಲ: ಎಂಗೇಜ್ ಮೆಂಟ್ ಮಾಡಿಕೊಂಡ ಜೋಡಿ
RC 17: ಮತ್ತೆ ಒಂದಾದ ರಂಗಸ್ಥಳಂ ತಂಡ
Crime; ಹುಣಸಗಿ: ನೀರಿನ ವಿಚಾರಕ್ಕೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯ