ಕತ್ತಿ ವರಸೆ’ ಹಿಂದಿನ ಕಹಾನಿ
ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದಲ್ಲೇ ಗಾಳ ಹಾಕಿದ್ದ ಎಚ್ಡಿಕೆ
Team Udayavani, Aug 23, 2019, 5:56 AM IST
ಬೆಂಗಳೂರು: ಬಿಜೆಪಿ ಸರ್ಕಾರದಲ್ಲಿ ಸಚಿವಗಿರಿ ಸಿಗದ ಕಾರಣ ಮುನಿಸಿಕೊಂಡಿರುವ ಬೆಳಗಾವಿಯ ಉಮೇಶ್ ಕತ್ತಿಯನ್ನು ಸೆಳೆಯಲು ಸಮ್ಮಿಶ್ರ ಸರ್ಕಾರದಲ್ಲೇ ದೊಡ್ಡ ಮಟ್ಟದಲ್ಲಿ ಪ್ರಯತ್ನ ನಡೆದಿತ್ತು.
ಕಳೆದ ವರ್ಷ ಬೆಳಗಾವಿಯಲ್ಲಿ ವಿಧಾನಮಂಡಲ ಅಧಿವೇಶನ ನಡೆದ ಸಂದರ್ಭದಲ್ಲಿ ಸಚಿವರಾಗಿದ್ದ ರಮೇಶ್ ಜಾರಕಿಹೊಳಿ ಆ ವೇಳೆಗಾಗಲೇ ಸರ್ಕಾ ರದ ವಿರುದ್ಧ ಬಂಡಾಯ ಸಾರಿದ್ದರಿಂದ ಜಾರಕಿ ಹೊಳಿ ಕುಟುಂಬಕ್ಕೆ ‘ಟಾಂಗ್’ ನೀಡಲು ಉಮೇಶ್ ಕತ್ತಿಗೆ ಗಾಳ ಹಾಕಲಾಗಿತ್ತು.
ಆಗ ಮುಖ್ಯಮಂತ್ರಿಯಾಗಿದ್ದ ಎಚ್.ಡಿ. ಕುಮಾರಸ್ವಾಮಿಯವರು ಉಮೇಶ್ ಕತ್ತಿ ಜತೆ ಮಾತನಾಡಿದ್ದರು. ಉಮೇಶ್ ಕತ್ತಿಯವರ ಜತೆಯಲ್ಲಿ ಹಾವೇರಿ, ರಾಯಚೂರು, ಚಿತ್ರ ದುರ್ಗ, ಕಲಬುರಗಿ ಭಾಗದ ಜನತಾಪರಿವಾರ ಮೂಲದ ಐವರು ಶಾಸಕರನ್ನು ಆಯಾ ಕ್ಷೇತ್ರದ ಸ್ಥಳೀಯ ರಾಜಕೀಯ ಪರಿಸ್ಥಿತಿಗೆ ಅನುಗುಣವಾಗಿ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಕ್ಕೆ ಸೇರಿಸಿಕೊಂಡು ಸಚಿವಗಿರಿ ನೀಡಲು ಚರ್ಚೆಗಳು ನಡೆದಿದ್ದವು.
ಸಮ್ಮಿಶ್ರ ಸರ್ಕಾರ ಉಳಿಸಿಕೊಳ್ಳುವ ನಿಟ್ಟಿನಲ್ಲಿ ರಿವರ್ಸ್ ಆಪರೇಷನ್ ಮಾಡಲು ತಯಾರಿ ನಡೆಸಿ ಉಮೇಶ್ ಕತ್ತಿ ಅವರ ಜತೆಯೂ ಕುಮಾರಸ್ವಾಮಿ ಮಾತುಕತೆ ನಡೆಸಿದ್ದರು. ಪ್ರಮುಖ ಖಾತೆ ನೀಡುವ ಭರವಸೆಯೂ ಸಿಕ್ಕಿತ್ತು ಎಂದು ಮೂಲಗಳು ತಿಳಿಸಿವೆ.
ಉಮೇಶ್ ಕತ್ತಿ ಸೇರಿದಂತೆ ಐವರು ಬಿಜೆಪಿ ಶಾಸಕರಿಗೆ ಗಾಳ ಹಾಕಿರುವುದರ ಬಗ್ಗೆ ಮಾಹಿತಿ ಪಡೆದಿದ್ದ ಬಿ.ಎಸ್.ಯಡಿಯೂರಪ್ಪ, ಜನವರಿ ಯಲ್ಲಿ ಜಂಟಿ ಅಧಿವೇಶನದ ವೇಳೆಗೆ ಸಮ್ಮಿಶ್ರ ಸರ್ಕಾರ ಇರುವುದಿಲ್ಲ, ನಮ್ಮದೇ ಸರ್ಕಾರ ಬರಲಿದೆ. ನಿಮಗೆ ಸ್ಥಾನಮಾನವೂ ಸಿಗಲಿದೆ, ಪಕ್ಷ ಬಿಡುವ ಯೋಚನೆ ಮಾಡಬೇಡಿ ಎಂದು ಐವರಿಗೂ ತಿಳಿಸಿದ್ದರು. ಜತೆಗೆ, ಆಪರೇಷನ್ ಕಮಲ ಕಾರ್ಯಾಚರಣೆ ಸಂದರ್ಭದಲ್ಲೂ ಐವರ ಮೇಲೂ ಕಣ್ಣಿಡಲಾಗಿತ್ತು. ಯಡಿಯೂರಪ್ಪ ಅವರು ಮಾತುಕತೆ ನಡೆಸಿದ ನಂತರ ಉಮೇಶ್ ಕತ್ತಿ ಸುಮ್ಮನಾಗಿದ್ದರು ಎಂದು ಹೇಳಲಾಗಿದೆ.
ಇದೀಗ ಬಿಜೆಪಿ ಸರ್ಕಾರದಲ್ಲಿ ಸಚಿವ ಸ್ಥಾನ ಸಿಗದೆ ಮುನಿಸಿಕೊಂಡಿರುವ ಆಪ್ತರ ಬಳಿ ತಮ್ಮ ಅಳಲು ತೋಡಿಕೊಂಡಿರುವ ಉಮೇಶ್ ಕತ್ತಿ ಮೊದಲು ಸಂಪರ್ಕ ಮಾಡಿದ್ದು ಕುಮಾರಸ್ವಾಮಿ ಯವರನ್ನು. ಬಸವರಾಜ ಹೊರಟ್ಟಿ ಅವರ ಜತೆಗಿನ ಮಾತುಕತೆಯ ನಂತರ ಉಮೇಶ್ ಕತ್ತಿ ಮೊದಲು ಸಂಪರ್ಕಿಸಿದ್ದೇ ಕುಮಾರಸ್ವಾಮಿಯವರನ್ನು. ಆದರೆ, ಕುಮಾರ ಸ್ವಾಮಿಯವರು ಸಿದ್ದರಾಮಯ್ಯ ಅವರನ್ನು ಸಂಪರ್ಕಿಸಲು ಹೇಳಿದರು ಎಂಬ ಮಾತುಗಳು ಕೇಳಿಬರುತ್ತಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
90 ದಿನದಲ್ಲಿ ನೇಹಾ ಕುಟುಂಬಕ್ಕೆ ನ್ಯಾಯ ಸಿಗುವ ವಿಶ್ವಾಸವಿದೆ..: ರಣದೀಪ್ ಸಿಂಗ್ ಸುರ್ಜೇವಾಲಾ
LS Polls: ರಾಜ್ಯದ ಜನರಿಗೆ ಈಶ್ವರಪ್ಪ ಸ್ಪರ್ಧೆ ವಿಷಯ ಈಗ ಖಚಿತ: ಈಶ್ವರಪ್ಪ
ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್
BJP ಎಂದರೆ ಹೊಸ ಈಸ್ಟ್ ಇಂಡಿಯಾ ಕಂಪೆನಿ: ಸುರ್ಜೇವಾಲಾ ಕಿಡಿ
Congress ತುಷ್ಟೀಕರಣ ರಾಜಕೀಯಕ್ಕೆ ಮುಸ್ಲಿಂ ಮೀಸಲಾತಿಗೆ ಬೆಂಬಲಿಸುತ್ತದೆ: ಬೊಮ್ಮಾಯಿ
MUST WATCH
ಹೊಸ ಸೇರ್ಪಡೆ
Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ
Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್ ಗಗನ ಯಾತ್ರೆ
Rajveer Diler: ಹೃದಯಾಘಾತದಿಂದ ಬಿಜೆಪಿ ಸಂಸದ ರಾಜ್ವೀರ್ ದಿಲೇರ್ ನಿಧನ
Scam: 25,000 ಕೋಟಿ ಬ್ಯಾಂಕ್ ಹಗರಣ ಪ್ರಕರಣ: ಅಜಿತ್ ಪವಾರ್ ಪತ್ನಿ ಸುನೇತ್ರಾಗೆ ಕ್ಲೀನ್ ಚಿಟ್
OTT Release: ವಿಜಯ್ ದೇವರಕೊಂಡ ʼಫ್ಯಾಮಿಲಿ ಸ್ಟಾರ್ʼ ಓಟಿಟಿ ರಿಲೀಸ್ಗೆ ಡೇಟ್ ಫಿಕ್ಸ್