“ಬಿಜೆಪಿ ನಾಯಕರು ಉತ್ತರಕುಮಾರರು!’
Team Udayavani, Sep 22, 2019, 3:00 AM IST
ಬೆಂಗಳೂರು: ನೆರೆ ಹಾಗೂ ಬರ ಸಮಸ್ಯೆಗೆ ಪರಿಹಾರ ಕಂಡು ಕೊಳ್ಳಲು ಸಾಧ್ಯವಾಗದ ರಾಜ್ಯ ಬಿಜೆಪಿ ಸರ್ಕಾರ, ಕೇಂದ್ರದಿಂದ ಅಗತ್ಯ ನೆರವು ತರುವಲ್ಲಿ ವಿಫಲವಾಗಿದೆ ಎಂದು ಆರೋಪಿಸಿ ಬಿಜೆಪಿ ನಾಯಕರನ್ನು ರಾಜ್ಯ ಕಾಂಗ್ರೆಸ್ ಉತ್ತರಕುಮಾರನಿಗೆ ಹೋಲಿಸಿದೆ.
ಈ ಸಂಬಂಧ ಇಂದು ಟ್ವೀಟ್ ಮಾಡಿರುವ ಕಾಂಗ್ರೆಸ್, “ನೆರೆ ಪರಿಹಾರ ವಿಷಯದಲ್ಲಿ ಇಂತಹ ಯೋಗ್ಯತೆ, ಸಮರ್ಥತೆ, ಸಂವೇದನೆ ತೋರಿರುವ ಇವರು ಕರ್ನಾಟಕದ ಉತ್ತರಕುಮಾರರೇ ಸರಿ’ ಎಂದು ಹೇಳಿದೆ. ಈ ಮೂಲಕ ಪ್ರವಾಹಕ್ಕೆ ಪರಿಹಾರ ದೊರಕಿಸಿಕೊಡುವಲ್ಲಿ ವಿಫಲರಾಗಿರುವ ರಾಜ್ಯ ಬಿಜೆಪಿ ನಾಯಕರ ಕಾಲೆಳೆಯುವ ಕಾರ್ಯ ಮಾಡಿದೆ.