ಬಿಜೆಪಿ ಶಾಸಕರ ಕ್ಷೇತ್ರಗಳಿಗೆ ಮಾತ್ರ ಅನುದಾನ!
Team Udayavani, Sep 7, 2019, 3:00 AM IST
ರಾಯಚೂರು: ಹೈದರಾಬಾದ್- ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ 2019-20ನೇ ಸಾಲಿನ ಖರ್ಚಾಗದೆ ಬಾಕಿ ಉಳಿದ ಅನುದಾನವನ್ನು ಕೇವಲ ಬಿಜೆಪಿ ಕ್ಷೇತ್ರಗಳಿಗೆ ಹಂಚಿಕೆ ಮಾಡುವ ಮೂಲಕ ರಾಜ್ಯ ಸರ್ಕಾರ ಪಕ್ಷಭೇದ ತೋರಿದೆ. ಬಾಕಿ ಉಳಿದ 75 ಕೋಟಿ ರೂ.ಅನುದಾನಕ್ಕೆ ಸಂಬಂ ಧಿಸಿದಂತೆ ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ಹಿಂದೆ ಅನುಮೋದನೆ ಪಡೆದಿದ್ದ ಆದೇಶ ರದ್ದುಪಡಿಸಿ, ಹೊಸ ಆದೇಶ ಹೊರಡಿಸಿದ್ದಾರೆ.
ಮುಖ್ಯಮಂತ್ರಿ ಹಾಗೂ ಸರ್ಕಾರದ ವಿವೇಚನಾ ಕೋಟಾದಡಿ ಮೀಸಲಿಟ್ಟಿದ್ದ 75 ಕೋಟಿ ರೂ.ಹಣವನ್ನು ಎಚ್ಕೆಆರ್ಡಿಬಿ ವ್ಯಾಪ್ತಿಗೆ ಒಳಪಡುವ ವಿಧಾನಸಭೆಗಳಿಗೆ ಕ್ಷೇತ್ರವಾರು ಅನುದಾನ ಹಂಚಿಕೆ ಮಾಡಿ ಆದೇಶಿಸಲಾಗಿತ್ತು. ಆದರೆ, ಹಂಚಿಕೆ ಮಾಡಿದ ಅನುದಾನ ಬಳಕೆಯಾಗದಿರುವ ಕಾರಣ 2019, ಸೆ.18ರಂದು ಹಂಚಿಕೆ ಮಾಡಿ ಅನುಮೋದನೆ ಪಡೆದಿದ್ದ ಆದೇಶ ರದ್ದುಗೊಳಿಸಿ ಮರು ಹಂಚಿಕೆ ಆದೇಶ ಹೊರಡಿಸಲಾಗಿದೆ.
ಅದರಲ್ಲಿ ಜಿಲ್ಲೆಯ ಮೂರು ಕ್ಷೇತ್ರಗಳಿಗೆ 18 ಕೋಟಿ ರೂ.ಮಂಜೂರಾಗಿದೆ. ಬಿಜೆಪಿ ಶಾಸಕರಿರುವ ನಗರ ಕ್ಷೇತ್ರಕ್ಕೆ ನಾಲ್ಕು ಕೋಟಿ, ದೇವದುರ್ಗ ಕ್ಷೇತ್ರಕ್ಕೆ ಮೂರು ಕೋಟಿ ಹಾಗೂ ಪ್ರತಾಪಗೌಡ ಪಾಟೀಲ ರಾಜೀನಾಮೆಯಿಂದ ತೆರವಾದ ಮಸ್ಕಿ ಕ್ಷೇತ್ರಕ್ಕೆ 11 ಕೋಟಿ ರೂ. ನೀಡಲಾಗಿದೆ. ಆದರೆ, ಕಾಂಗ್ರೆಸ್ ಶಾಸಕರಿರುವ ಗ್ರಾಮೀಣ ಕ್ಷೇತ್ರ, ಲಿಂಗಸುಗೂರು, ಜೆಡಿಎಸ್ ಶಾಸಕರಿರುವ ಮಾನ್ವಿ, ಸಿಂಧ ನೂರು ಕ್ಷೇತ್ರಗಳನ್ನು ಕೈ ಬಿಡಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Lok Sabha Election 2024: ಝಾರ್ಖಂಡ್, ಛತ್ತೀಸ್ಗಢದಲ್ಲಿ ಗೆಲುವು ಯಾರಿಗೆ?
ಗ್ಯಾಂಗ್ ಸ್ಟರ್ ಬಿಷ್ಣೋಯಿ ಹೆಸರಿನಿಂದ ಸಲ್ಮಾನ್ ಮನೆಯಿಂದ ಕ್ಯಾಬ್ ಬುಕ್: ಯುವಕ ಅರೆಸ್ಟ್
Hubli; ಆಡಳಿತ ಪಕ್ಷದಿಂದಲೇ ತನಿಖೆ ದಾರಿ ತಪ್ಪಿಸುವ ಕೆಲಸ: ನೇಹಾ ತಂದೆ ನಿರಂಜನಯ್ಯ ಆರೋಪ
O2 movie review; ಸುಂದರ ಬೀದಿಯ ತಣ್ಣನೆಯ ಗಾಳಿಯಂತೆ…
Neha Case: ನೇಹಾ ಅಮಾನುಷ ಹತ್ಯೆಗೆ ಜೆ.ಪಿ.ಹೆಗ್ಡೆ ಖಂಡನೆ