ಬಿಎಂಟಿಸಿ & ಕೆಎಸ್ಆರ್ಟಿಸಿ; ಬಸ್ ಪೂಜೆಗೆ ಕೇವಲ 100 ರೂ.: ಸಿಬಂದಿಗೆ ನಿರಾಸೆ
ಒಂದು ನಿಂಬೆಹಣ್ಣಿನ ಬೆಲೆ 10 ರೂ....
Team Udayavani, Oct 3, 2022, 9:19 PM IST
ಬೆಂಗಳೂರು: ಬಸ್ಗಳ ಪೂಜೆಗೆ ತಲಾ ನೂರು ರೂ. ನೀಡಿರುವುದು ಸಾರಿಗೆ ಚಾಲನಾ ಸಿಬಂದಿಗೆ ನಿರಾಸೆ ಮೂಡಿಸಿದೆ. ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಹಾಗೂ ಕೆಎಸ್ಆರ್ಟಿಸಿಯು ಆಯುಧ ಪೂಜೆ ಪ್ರಯುಕ್ತ ನಡೆಸುವ ಬಸ್ಗಳ ಪೂಜೆ ಮತ್ತು ಅಲಂಕಾರ ವೆಚ್ಚಕ್ಕೆ ಈ ಬಾರಿಯೂ ಪ್ರತಿ ಬಸ್ಗೆ ಕೇವಲ 100 ರೂ. ನೀಡಲಾಗಿದೆ.
ಮಾರುಕಟ್ಟೆಗಳಲ್ಲಿ ಹೂ-ಹಣ್ಣಿನ ಬೆಲೆ ಗಗನಕ್ಕೇರಿದೆ. ಒಂದು ನಿಂಬೆಹಣ್ಣಿನ ಬೆಲೆ 10 ರೂ. ಆಗಿದೆ. ವಾಹನಕ್ಕೆ ಹಾಕುವ ಹೂವಿನ ಹಾರಕ್ಕೆ ಕನಿಷ್ಠ 300-400 ರೂ. ಬೇಕಾಗುತ್ತದೆ. ಬಾಳೆ ಕಂಬ, ಬೂದಗುಂಬಳ ಸೇರಿ ಇತರೆ ಪೂಜೆ ಸಾಮಗ್ರಿಗಳಿಗೆ 200 ರಿಂದ 300 ರೂ. ಖರ್ಚಾಗುತ್ತದೆ. ಬಿಎಂಟಿಸಿ ನೀಡುವ ಬಿಡಿಗಾಸಿಗೆ ಅರ್ಧಮಾರು ಹೂವು ಕೂಡ ಬರುವುದಿಲ್ಲ. ಸಾವಿರಾರು ರೂ. ನೀಡಿ ಎನ್ನುವುದಿಲ್ಲ, ಕನಿಷ್ಠ ಅಲಂಕಾರಕ್ಕಾಗುವಷ್ಟಾದರೂ ಹೆಚ್ಚಳ ಮಾಡಬೇಕು ಎಂದು ಚಾಲಕರೊಬ್ಬರು ಆಗ್ರಹಿಸಿದರು.
ಡಿಪೋಗೆ 10 ಸಾವಿರ: ಕೆಎಸ್ಆರ್ಟಿಸಿಯಲ್ಲಿಯೂ ತಲಾ ಒಂದು ಬಸ್ ಪೂಜೆಗೆ 100 ರೂ.ಗಳಂತೆ ಡಿಪೋಗಳಿಗೆ ಪೂಜೆ ಖರ್ಚಿಗೆ ಹಣವನ್ನು ವರ್ಗಾಯಿಸಲಾಗಿದೆ. 100 ಬಸ್ಗಳಿರುವ ಪ್ರತಿ ಡಿಪೋಗೆ 10 ಸಾವಿರ ರೂ. ಬಿಡುಗಡೆ ಮಾಡಲಾಗಿದೆ. ಡಿಪೋದ ಎಲ್ಲ ವಾಹನಗಳಿಗೂ ಒಟ್ಟಾಗಿ ಪೂಜೆ ಸಲ್ಲಿಸಲಾಗುತ್ತದೆ. ಬೆಂಗಳೂರು ಹೊರತುಪಡಿಸಿ, ಇತರೆ ಭಾಗಗಳಲ್ಲಿ ಹೂವಿನ ದರ ಕಡಿಮೆ ಇದ್ದು, ಡಿಪೋಗೆ ನೀಡುವ 10 ಸಾವಿರ ರೂ. ಸಾಕಾಗುತ್ತದೆ ಎಂದು ಕೆಎಸ್ಆರ್ಟಿಸಿ ಅಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ.
ಈ ಮಧ್ಯೆ ಬಿಎಂಟಿಸಿ ಚಾಲಕರು ತಮ್ಮ ಬಸ್ಗಳನ್ನು ಅದ್ಧೂರಿಯಾಗಿ ಸಿಂಗರಿಸಿದ್ದಾರೆ. ಜಯನಗರ, ಬನಶಂಕರಿ, ರಾಜರಾಜೇಶ್ವರಿ ಡಿಪೋಗಳಲ್ಲಿ ಬಸ್ಗಳಿಗೆ ವಿಶೇಷ ಅಲಂಕಾರ ಮಾಡುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
PSI re-examination: ಪಿಎಸ್ಐ ಮರು ಪರೀಕ್ಷೆ, ಅಂತಿಮ ಅಂಕಪಟ್ಟಿ ಬಿಡುಗಡೆ
Lok sabha polls: ಸುರೇಶ್ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್ ದಾಸ್
Congress candidate: ನಾನು ಹುಟ್ಟಿದಾಗ ಒಕ್ಕಲಿಗ, ಬೆಳೆಯುತ್ತ ವಿಶ್ವಮಾನವ: ಲಕ್ಷ್ಮಣ್
Dinesh Gundu Rao: ಕ್ಷಯ ರೋಗ ನಿಯಂತ್ರಣ ಔಷಧ ಪೂರೈಕೆಗೆ ಕೇಂದ್ರಕ್ಕೆ ಮನವಿ; ದಿನೇಶ್
Lok Sabha elections: ಸಂಸದ ಬಸವರಾಜುಗೆ “ಗೋ ಬ್ಯಾಕ್’ ಎಂದ ಬಿಜೆಪಿಗರು!
MUST WATCH
ಹೊಸ ಸೇರ್ಪಡೆ
Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್, ಸ್ಟೋಯಿನಿಸ್, ಅಗರ್ ಹೊರಕ್ಕೆ
ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್
Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್
Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್ಗಳು: ಪ್ರವಾಸಿಗರಿಗೆ ಭಯ
IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್ಗಳ ಜಯ