ರಾಜ್ಯದ ಬಗ್ಗೆ ಬಿಜೆಪಿ ಹೈಕಮಾಂಡ್ ಬೇಸರಗೊಂಡಿದೆ ಎನ್ನುವುದು ಸುಳ್ಳು: ಬೊಮ್ಮಾಯಿ
Team Udayavani, May 10, 2021, 12:57 PM IST
ಬೆಂಗಳೂರು: ರಾಜ್ಯದ ಬಗ್ಗೆ ಬಿಜೆಪಿ ಹೈಕಮಾಂಡ್ ಬೇಸರಗೊಂಡಿದೆ ಎನ್ನುವುದು ಸುಳ್ಳು. ಕೋವಿಡ್ ಸಮಯದಲ್ಲಿ ಈಗ ಯಾವುದೇ ಯೋಚನೆ ಮಾಡಲೇಬಾರದು. ಅಮಿತ್ ಶಾ ಭೇಟಿಯಲ್ಲಿ ಯಾವುದೇ ರಾಜಕೀಯ ಉದ್ದೇಶವಿಲ್ಲ, ಅಂತಹ ಯಾವುದೇ ಚರ್ಚೆ ಕೂಡಾ ಆಗಿಲ್ಲ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿನ್ನೆ ದೆಹಲಿಯಲ್ಲಿ ಅಮಿತ್ ಷಾ ಭೇಟಿ ಮಾಡಿ ರಾಜ್ಯದ ಕೋವಿಡ್ ನಿರ್ವಹಣೆ ಬಗ್ಗೆ ಮಾಹಿತಿ ಕೊಟ್ಟಿದ್ದೇವೆ. ಅವರು ರಾಜ್ಯದ ಸ್ಥಿತಿ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ ಎಂದರು.
ಇದನ್ನೂ ಓದಿ:ಒಂದು ದಿನದ ಕೋವ್ಯಾಕ್ಸಿನ್ ಹಾಗೂ 4 ದಿನಗಳ ಕೋವಿಶೀಲ್ಡ್ ಲಸಿಕೆ ಸಂಗ್ರಹ ಇದೆ: ದೆಹಲಿ ಸಚಿವ
ರಾಜ್ಯದ ಆಕ್ಸಿಜನ್ ಕೋಟಾ ಹೆಚ್ಚು ಮಾಡಬೇಕು ಎಂದು ಕೇಳಿದ್ದೇವೆ. ಇಂದು ಸುಪ್ರೀಂ ಕೋರ್ಟ್ ಸಭೆ ಬಳಿಕ ರಾಜ್ಯದ ಕೋಟಾ ಎಷ್ಟು ಸಾಧ್ಯವಿದೆಯೋ ಅಷ್ಟು ಮಾಡುತ್ತೇವೆ ಎಂದು ಹೇಳಿದ್ದಾರೆ. ನಿನ್ನೆ ನಾಲ್ಕು ಟ್ಯಾಂಕರ್ ಮಂಜೂರು ಮಾಡಿದ್ದಾರೆ, ಇನ್ನೂ 10 ಟ್ಯಾಂಕರ್ ಕೊಡಲು ಸ್ವಲ್ಪ ಸಮಯ ಹಿಡಿಯುತ್ತದೆ ಎಂದು ಹೇಳಿದ್ದಾರೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.
ಸಚಿವ ಬಸವರಾಜ ಬೊಮ್ಮಾಯಿ ಮತ್ತು ಬಿ.ವೈ.ವಿಜಯೇಂದ್ರ ದೆಹಲಿಗೆ ತೆರಳಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಿದ್ದರು.