BSY ಆವತ್ತೇ ನನ್ನನ್ನು ಮುಗಿಸಲು ಪ್ಲ್ಯಾನ್ ಮಾಡಿದ್ದರು; ಸಿಎಂ
Team Udayavani, Oct 30, 2018, 11:21 AM IST
ಶಿವಮೊಗ್ಗ : ಯಡಿಯೂರಪ್ಪ ಅವರು ನನ್ನನ್ನು ರಾಜಕೀಯವಾಗಿ ಮುಗಿಸಲು ಜೆಡಿಎಸ್-ಬಿಜೆಪಿ ಮೈತ್ರಿ ಸರಕಾರವಿದ್ದಾಗಲೇ ಯತ್ನಿಸಿದ್ದರು ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ತೀವ್ರ ವಾಗ್ಧಾಳಿ ನಡೆಸಿದ್ದಾರೆ.
ಮಂಗಳವಾರ ಶಿವಮೊಗ್ಗಕ್ಕೆ ಸುದ್ದಿಗೋಷ್ಠಿ ನಡೆಸಿದ ಸಿಎಂ ‘ಆವತ್ತು ನಾನು ಗಣಿ ಮಾಲೀಕರ ಬಳಿ 150 ಕೋಟಿ ಹಣ ಪಡೆದಿದ್ದೆ ಎಂದು ನನ್ನ ಸಂಪುಟದಲ್ಲಿ ಇದ್ದ ಬಳ್ಳಾರಿಯ ವಿಧಾನ ಪರಿಷತ್ ಸದಸ್ಯರೊಬ್ಬರು ಆರೋಪ ಮಾಡಿದ್ದರಲ್ಲಾ , ಯಡಿಯೂರಪ್ಪನವರೆ ಅದರ ಬಗ್ಗೆ ಚರ್ಚೆ ಮಾಡಿದ್ದೀರಾ ? ನನಗೆ ರಕ್ಷಣೆ ಗೊಡಲು ಬಂದಿರಾ’ ಎಂದು ಪ್ರಶ್ನಿಸಿದರು.
‘ಇಪ್ಪತ್ತು-ಇಪ್ಪತ್ತು ಒಡಂಬಡಿಕೆ ಮಾಡಿಕೊಂಡ ವೇಳೆ ಮೋಸ ಮಾಡಿದ್ದೇನೆ ಎನ್ನುತ್ತೀರಲ್ಲಾ,ಆವತ್ತೇ ನೀವು ನನ್ನನ್ನು ಮುಗಿಸಲು ಯೋಜನೆ ಮಾಡಿದ್ದೀರಲ್ಲಾ’ ಎಂದರು.
‘ನನ್ನನ್ನು ಕೊಲೆ ಮಾಡಲು ಸುಪಾರಿ ನೀಡಿದ್ದಾರೆ ಎಂದು ನನ್ನದೇ ಸಂಪುಟದಲ್ಲಿದ್ದ ಬಿಜೆಪಿ ನಾಯಕರು (ಬಿ.ಶ್ರೀರಾಮುಲು) ಆರೋಪ ಮಾಡಿದ್ದರಲ್ಲಾ, ಆವಾಗ ವಿಧಾನ ಪರಿಷತ್ನಲ್ಲಿ ಚರ್ಚೆ ನಡೆಯುವಾಗ ಯಡಿಯೂರಪ್ಪ ಎಲ್ಲಿ ಕುಳಿತಿದ್ದರು, ಆ ಬಗ್ಗೆ ಏನಾದರು ಚರ್ಚೆ ನಡೆಸಿದ್ದರಾ’ ಎಂದು ಪ್ರಶ್ನಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Election Campaign: ಕಾಂಗ್ರೆಸ್ನಲ್ಲಿಲ್ಲ ಮೋದಿಗೆ ಸಮಾನ ನಾಯಕತ್ವ: ಗಾಯಿತ್ರಿ ಸಿದ್ದೇಶ್ವರ
Lok Sabha Polls 2024; ಕರ್ನಾಟಕದ ನಂಟು ಹೊರರಾಜ್ಯದಲ್ಲಿ ಸ್ಪರ್ಧೆ
ನಾಡಿದ್ದಿನಿಂದ 5 ದಿನ ರಾಜ್ಯಕ್ಕೆ ಬಿಜೆಪಿ ದಿಗ್ಗಜ ನಾಯಕರ ದಂಡು
Temperature; ರಾಜ್ಯದಲ್ಲಿ ಮತ್ತೆ ದಿಢೀರ್ ಏರಿದ ತಾಪಮಾನ
ರಾಜ್ಯದಲ್ಲಿ ಇಂದು, ನಾಳೆ ಸಿಇಟಿ; ದಾಖಲೆಯ ಮೂರೂವರೆ ಲಕ್ಷ ವಿದ್ಯಾರ್ಥಿಗಳ ನೋಂದಣಿ
MUST WATCH
ಹೊಸ ಸೇರ್ಪಡೆ
Koppala; ಬಿಜೆಪಿಯಲ್ಲಿ ಸೌಜನ್ಯತೆ ಇಲ್ಲವೆನಿಸಿ ಕಾಂಗ್ರೆಸ್ ಸೇರಿದೆ: ಸಂಗಣ್ಣ ಕರಡಿ
T20 World Cup; ರೋಹಿತ್, ವಿರಾಟ್ ಆರಂಭಿಕರು? ಅಚ್ಚರಿಯ ಮುಖಗಳಿಲ್ಲ?
The Very Best Payment Techniques for Online Casinos
Jammu and Kashmir: ಉಗ್ರರ ಗುಂಡಿನ ದಾಳಿಗೆ ಬಲಿಯಾದ ವಲಸೆ ಕಾರ್ಮಿಕ
Election 2024: ಕೋಟಾ ಅವರನ್ನು 2 ಲಕ್ಷ ಮತಗಳ ಅಂತರದಿಂದ ಗೆಲ್ಲಿಸಿ: ದೇವೇಗೌಡ