ಮಡಿಕೇರಿ- ಮೈಸೂರು ಮಾರ್ಗದಲ್ಲಿ ಬಸ್ ಸಂಚಾರ
Team Udayavani, Aug 12, 2019, 3:00 AM IST
ಮಂಗಳೂರು: ಶಿರಾಡಿ ಘಾಟಿಯಲ್ಲಿ ಭೂಕುಸಿತ ಸಂಭವಿಸಿದ ಹಿನ್ನೆಲೆಯಲ್ಲಿ ಈ ಘಾಟಿ ಮೂಲಕ ಹಾದು ಹೋಗುವ ಬಸ್ ಮತ್ತು ರೈಲು ಮಾರ್ಗಗಳೆರಡರಲ್ಲಿಯೂ ಸಂಚಾರವನ್ನು ರದ್ದು ಪಡಿಸಲಾಗಿದೆ. ಭಾನುವಾರ ಕೆಎಸ್ಆರ್ಟಿಸಿ ಬಸ್ಗಳು ಮಂಗಳೂರು ಮತ್ತು ಪುತ್ತೂರು ವಿಭಾಗಗಳಿಂದ ಮಡಿಕೇರಿ- ಮೈಸೂರು ಮಾರ್ಗವಾಗಿ ಬೆಂಗಳೂರು ಕಡೆ ಸಂಚರಿಸಿದವು.
ಮಂಗಳೂರು ವಿಭಾಗದಿಂದ ಎ.ಸಿ.ಸ್ಲಿಪರ್ ಹೊರತು ಪಡಿಸಿ ಇತರ ಎಲ್ಲ ದರ್ಜೆಯ ಬಸ್ಗಳು ಕಾರ್ಯಾಚರಣೆ ನಡೆಸಿವೆ. ಮಂಗಳೂರು ವಿಭಾಗದಿಂದ ಹಗಲು 22 ಬಸ್ಗಳು ಮತ್ತು ರಾತ್ರಿ 25 ಬಸ್ಗಳು ಸಂಚರಿಸಿವೆ. ಪುತ್ತೂರು ವಿಭಾಗದಿಂದ ರಾತ್ರಿ ವೇಳೆ 11 ಬಸ್ಗಳನ್ನು ಬಿಡಲಾಗಿದೆ.
ಎ.ಸಿ. ಸ್ಲಿಪರ್ ಕೋಚ್ಗೆ ಪ್ರಯಾಣಿಕರು ಇಲ್ಲದ ಕಾರಣ ಬಿಡಲಾಗಿಲ್ಲ ಎಂದು ಕೆಎಸ್ಆರ್ಟಿಸಿ ಅಧಿಕಾರಿಗಳು ತಿಳಿಸಿದ್ದಾರೆ. ಭಾರೀ ಮಳೆಯಿಂದಾಗಿ ಕೆಎಸ್ಸಾರ್ಟಿಸಿ ಬಸ್ ಸಂಚಾರ ರದ್ದುಗೊಂಡು ಮಂಗಳೂರು ವಿಭಾಗಕ್ಕೆ 51.38 ಲಕ್ಷ ರೂ.ನಷ್ಟ ಸಂಭವಿಸಿದೆ. ಪುತ್ತೂರು ವಿಭಾಗಕ್ಕೆ 51.02 ಲಕ್ಷ ರೂ. ನಷ್ಟ ಸಂಭವಿಸಿದೆ.