ನಾಚಿಕೆ ಮಾನ- ಮಾರ್ಯಾದೆ ಇದ್ರೇ ರಾಜಕೀಯ ಮಾಡೊದ್ನ ನಿಲ್ಲಿಸಿ : ಬಿ.ವಿ.ಶ್ರೀನಿವಾಸ್ ವಾಗ್ದಾಳಿ
Team Udayavani, Jun 7, 2021, 1:49 PM IST
ಶಿವಮೊಗ್ಗ : ರಾಜ್ಯದಲ್ಲಿ ಈ ಸರ್ಕಾರ ಹೇಗೆ ಬಂತು ಎಂಬುದು ಎಲ್ಲರಿಗೂ ಗೊತ್ತಿದೆ. ಪ್ರಜಾಪ್ರಭುತ್ವ ಕಗ್ಗೋಲೆ ಮಾಡಿ, ನೂರಾರು ಕೋಟಿ ಖರೀದಿ ಮಾಡಿ ಅಧಿಕಾರಕ್ಕೆ ಬಂದ್ರು. ಇದು ಕದ್ದುಮುಚ್ಚಿ ಆದ ಸರ್ಕಾರ. ಅದೇ ರೀತಿಯಲ್ಲಿ ಈಗ ಸಿಎಂ ಬದಲಾವಣೆ ಮಾಡಲು ಹೊರಟಿದ್ದಾರೆ ಎಂದು ಶಿವಮೊಗ್ಗದಲ್ಲಿ ಯುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಬಿ.ವಿ.ಶ್ರೀನಿವಾಸ್ ಹೇಳಿಕೆ ನೀಡಿದ್ದಾರೆ.
ನಾಚಿಕೆ ಮಾನ- ಮಾರ್ಯಾದೆ ಇದ್ರೇ ರಾಜಕೀಯ ಮಾಡೋದ್ನಾ ಬಿಟ್ಟು ಜನರ ಸೇವೆ ಮಾಡಿ. ಹೀಗೆ ಆದ್ರೇ, ನೀವು ರಸ್ತೆಯಲ್ಲಿ ಓಡಾಡೋಕೆ ಆಗಲ್ಲ. ಜನ ದಂಗೆ ಏಳ್ತಾರೆ. ಈಗಾಗಲೇ ಮೂರನೇ ಅಲೆಯ ಆತಂಕ ಎದುರಾಗಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರ ವ್ಯಾಕ್ಸಿನ್ ಹಾಕುವ ಕೆಲಸ ಮಾಡ್ತಿಲ್ಲ. ದೇಶಾದ್ಯಂತ 2021 ರ ಅಂತ್ಯದೊಳಗೆ ವ್ಯಾಕ್ಸಿನ್ ಹಾಕ್ತೇವೆ ಎಂದು ಸುಪ್ರೀಂ ಕೋರ್ಟ್ ಗೆ ಹೇಳಿದ್ದಾರೆ ಎಂದರು.
ಆದ್ರೇ ಇದು ಹೇಗೆ ಸಾಧ್ಯ..? ಇದುವರೆಗೆ ವ್ಯಾಕ್ಸಿನ್ ಉತ್ಪಾದನೆ, ಆಮದು ಬಗ್ಗೆ ಯಾವುದೇ ಪ್ರಕ್ರಿಯೆ ನಡೆಸಿಲ್ಲ. ಸುಮಾರು 200 ಕೋಟಿ ವ್ಯಾಕ್ಸಿನ್ ಬೇಕಿದೆ. ಅದ್ರೇ ಯಾವುದೇ ಸಿದ್ಧತೆ ಸರ್ಕಾರ ಮಾಡಿಲ್ಲ. ಸುಪ್ರೀಂ ಕೋರ್ಟ್ ಗೂ ಸುಳ್ಳು ಹೇಳುವ ಕೆಲಸವನ್ನು ಸರ್ಕಾರ ಮಾಡುತ್ತಿದೆ. ಸುಳ್ಳಿನ ಸರ್ದಾರರಾಗಿದ್ದು, ಜನರ ಜೀವನದ ಜೊತೆ ಆಟವಾಡುತ್ತಿದ್ದಾರೆ ಎಂದು ಶ್ರೀನಿವಾಸ್ ವಾಗ್ದಾಳಿ ನಡೆಸಿದ್ದಾರೆ.