ಭಗವಧ್ವಜ ಹೃದಯದಲ್ಲಿರುತ್ತದೆ, ಅದು ನಮಗೆ ಪ್ರೇರಣೆ: ಸಿ.ಟಿ. ರವಿ
Team Udayavani, Feb 22, 2022, 1:04 PM IST
ಬೆಂಗಳೂರು: ರಾಷ್ಟ್ರಧ್ವಜ ನಮ್ಮ ತಿವರ್ಣ ಧ್ವಜ. ಸಂವಿಧಾನದ ಪ್ರಕಾರ ರಾಷ್ಟ್ರ ಧ್ವಜ ಅಂತಿಮ. ಭಗವಧ್ವಜ ನಮ್ಮ ಹೃದಯದಲ್ಲಿರುತ್ತದೆ. ಅದು ನಮಗೆ ಪ್ರೇರಣೆ, ಸೂರ್ತಿ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಹೇಳಿದರು.
ವಿಧಾನಸೌಧದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಹೋರಾಟ ಬೂಟಾಟಿಕೆ ಅಷ್ಟೇ. ರಾಷ್ಟ್ರಧ್ವಜ ಹಿಡಿದು ಹೋದವರಿಗೆ ಗುಂಡು ಹಾರಿಸಿದವರು ಈಗ ರಾಷ್ಟ್ರ ಧ್ವಜದ ಬಗ್ಗೆ ಮಾತನಾಡುತ್ತಿದ್ದಾರೆ. ಅವರಿಗೆ ಏನು ನೈತಿಕತೆಯಿದೆ ಎಂದು ಪ್ರಶ್ನಿಸಿದರು.
ಶಿವಮೊಗ್ಗ ಹತ್ಯೆ ಪ್ರಕರಣದಲ್ಲಿ ಮೇಲ್ನೋಟಕ್ಕೆ ಒಂದು ಕೋಮಿನವರು ಹತ್ಯೆ ಮಾಡಿರುವುದು ಕಂಡುಬಂದಿದೆ. ಬೆಂಗಳೂರಿನಿಂದ ಕರೆಸಿಕೊಂಡು ಪೂರ್ವ ಯೋಜಿತ ಕೃತ್ಯ ನಡೆಸಿದ್ದಾರೆ ಎಂದು ಮೇಲ್ನೋಟಕ್ಕೆ ಕಂಡುಬರುತ್ತಿದೆ. ಸಿದ್ದರಾಮಯ್ಯ ಸರ್ಕಾರವಿದ್ದಾಗ ಸಾಲು ಸಾಲು ಹತ್ಯೆಗಳಾಗಿದ್ದವು. ರುದ್ರೇಶ್, ಪ್ರಶಾಂತ್ ಪೂಜಾರಿ ಸೇರಿದಂತೆ ಹಲವರ ಹತ್ಯೆಯಾಗಿತ್ತು. ಆ ರಕ್ತವನ್ನು ಮೈಗೆ ಅಂಟಿಸಿಕೊಂಡು ಸಿದ್ದರಾಮಯ್ಯ ಸುಮ್ಮನಿದ್ದರು. ನಾವು 24 ಗಂಟೆಗಳಲ್ಲಿ ಮೂರು ಜನರನ್ನು ಬಂಧಿಸಿದ್ದೇವೆ ಎಂದರು.
ಇದನ್ನೂ ಓದಿ:ಸಚಿವ ಈಶ್ವರಪ್ಪ ಅವರನ್ನು ಸಚಿವ ಸಂಪುಟದಿಂದ ಕೈ ಬಿಡುವಂತೆ ಕಾಂಗ್ರೆಸ್ ಮುಖಂಡರ ಆಗ್ರಹ.!
ಶಾಸಕ ಅಖಂಡ ಮನೆಯನ್ನು ಅವರ ಪಕ್ಷದವರೇ ಸುಟ್ಟು ಹಾಕಿದ್ದರು. ಆಗ ಯಾರ ಮೇಲೆ ಕ್ರಮ ತೆಗೆದುಕೊಂಡಿದ್ದರು? ಓರ್ವ ತುಂಡು ತುಂಡಾಗಿ ಕತ್ತರಿಸುತ್ತೇನೆ ಎಂದಿದ್ದ. ಇನ್ನೋರ್ವ ಪಾಕಿಸ್ತಾನದವರನ್ನು ಬಿಡುಗಡೆ ಮಾಡುತ್ತೇವೆ ಎಂದಿದ್ದ. ಹಿಜಾಬ್ ಪರವಾಗಿ ಹೇಳಿಕೆ ಕೊಡ್ತಾರೆ ಎಂದು ಕಾಂಗ್ರೆಸ್ ವಿರುದ್ಧ ಸಿ.ಟಿ ರವಿ ವಾಗ್ದಾಳಿ ನಡೆಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ
B.S.Yediyurappa: ಶಾಸಕ ಪ್ರಭು ಚವ್ಹಾಣ ಹೆಸರು ಹೇಳುತ್ತಿದ್ದಂತೆ ಬಿಎಸ್ವೈ ಗರಂ
Transfer order: ರಾಜ್ಯದ 388 ನ್ಯಾಯಾಧೀಶರ ವರ್ಗಾವಣೆ ಮಾಡಿ ಆದೇಶ
PM ಮೋದಿಯವರಿಂದ ಏ.28 ಮತ್ತು 29 ರಂದು 5 ಕಡೆ ಪ್ರಚಾರ: ವಿಜಯೇಂದ್ರ ಮಾಹಿತಿ
Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!