ಖಾತೆ ಕಣ್ಣಾ ಮುಚ್ಚಾಲೆ
Team Udayavani, Jan 26, 2021, 6:40 AM IST
ಬೆಂಗಳೂರು, ಜ. 25: ಬೆಳಗ್ಗೆ ಒಂದು, ಸಂಜೆ ಮತ್ತೂಂದು. ಕೊಟ್ಟ ಖಾತೆಗಳಲ್ಲೇ ಅದಲು- ಬದಲು.
ಸಚಿವ ಜೆ.ಸಿ. ಮಾಧುಸ್ವಾಮಿ ಅವರಿಗೆ ನಾಲ್ಕನೇ ಬಾರಿ ಖಾತೆ ಬದಲಿಸಿದ ಸಿಎಂ ಯಡಿಯೂರಪ್ಪ ಅವರು ಮೂಲ ಖಾತೆಗಳಲ್ಲಿ ಒಂದನ್ನು ಮರಳಿಸಿ ದ್ದಾರೆ. ಇತ್ತ ಸಚಿವ ಆನಂದ್ ಸಿಂಗ್, ಸಿ.ಪಿ. ಯೋಗೇಶ್ವರ್ ಅವರೂ “ಖಾತೆ ಬದಲಾವಣೆಯ ಬಿಸಿ’ ಅನುಭವಿಸಿದ್ದಾರೆ.
ಸಂಪುಟ ವಿಸ್ತರಣೆ ಮುಗಿದು 15 ದಿನಗಳು ಕಳೆಯುತ್ತಾ ಬಂದರೂ ಖಾತೆ ಹಂಚಿಕೆ ಗೊಂದಲ ಮುಗಿದಂತಿಲ್ಲ. ರಾಜೀನಾಮೆ ಬೆದರಿಕೆ ಹಾಕಿದ್ದ ರಿಂದ ಸಿ.ಪಿ. ಯೋಗೇಶ್ವರ್ಗೆ ನೀಡಿದ್ದ ಸಣ್ಣ ನೀರಾ ವರಿ ಖಾತೆಯನ್ನು ಮಾಧುಸ್ವಾಮಿಗೆ ವಾಪಸ್ ನೀಡಲಾಗಿದೆ. ಮುನಿಸಿಕೊಂಡಿದ್ದ ಆನಂದ್ ಸಿಂಗ್ ಅವರ ಮನವೊಲಿಸುವಲ್ಲಿ ಸಿಎಂ ಮತ್ತು ಸಚಿವ ಆರ್. ಅಶೋಕ್ ಯಶಸ್ವಿಯಾಗಿದ್ದಾರೆ.
ಸಿಎಂ ಕೆಲವರ ಖಾತೆಗಳನ್ನು ಮೂರು ಬಾರಿ ಬದಲಾಯಿಸಿದ್ದು, ವಲಸಿಗರ ಒತ್ತಡಕ್ಕೆ ಮಣಿಯುತ್ತಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ಬದಲಾದ ಖಾತೆಗಳು :
ಜೆ.ಸಿ. ಮಾಧುಸ್ವಾಮಿ- ಸಣ್ಣ ನೀರಾವರಿ
ಸಿ.ಪಿ. ಯೋಗೇಶ್ವರ್-ಪ್ರವಾಸೋದ್ಯಮ, ಪರಿಸರ
ಆನಂದ್ ಸಿಂಗ್-ಮೂಲ ಸೌಕರ್ಯ ಅಭಿವೃದ್ಧಿ, ಹಜ್ ಮತ್ತು ವಕ್ಫ್
ಡಾ| ಕೆ. ಸುಧಾಕರ್-ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ವೈದ್ಯಕೀಯ ಶಿಕ್ಷಣ