ಇನ್ನೊಂದು ವಾರದಲ್ಲಿ ಸಂಪುಟ ರಚನೆ: ಈಶ್ವರಪ್ಪ
Team Udayavani, Aug 6, 2019, 3:00 AM IST
ಶಿವಮೊಗ್ಗ: “ಇನ್ನೊಂದು ವಾರದಲ್ಲಿ ನೂತನ ಸಚಿವ ಸಂಪುಟ ರಚನೆಯಾಗಲಿದೆ’ ಎಂದು ಮಾಜಿ ಉಪಮುಖ್ಯಮಂತ್ರಿ, ಶಾಸಕ ಕೆ.ಎಸ್. ಈಶ್ವರಪ್ಪ ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂಪುಟ ರಚನೆ ಕುರಿತು ವಿರೋಧ ಪಕ್ಷಗಳ ಟೀಕೆಗಳಿಗೆ ಉತ್ತರಿಸೋದಿಲ್ಲ. ಈಗ ರಾಜ್ಯದಲ್ಲಿ ಮುಖ್ಯಮಂತ್ರಿಯಾದರೂ ಇದ್ದಾರೆ. ಆದರೆ ಈ ಹಿಂದೆ ಎಲ್ಲರೂ ಇದ್ದೂ ಕೂಡ ಸರ್ಕಾರವೇ ಇರಲಿಲ್ಲ ಎಂದು ವ್ಯಂಗ್ಯವಾಡಿದರು.
ಇನ್ನೊಂದು ವಾರದಲ್ಲಿ ಸಚಿವ ಸಂಪುಟ ಪೂರ್ಣವಾಗಲಿದೆ. ಸಂಪುಟ ವಿಸ್ತರಣೆ ರಾಜ್ಯದ ಜನರು ಒಪ್ಪುವಂತೆ ಮಾಡಲಾಗುವುದು. ಯಾವುದೇ ಸಮಸ್ಯೆ ಉಂಟಾಗುವುದಿಲ್ಲ. ನಮ್ಮ ಸರ್ಕಾರಕ್ಕೆ 18 ಜನ ಮನೆ ಅಳಿಯರಂತೆ ಬಂದಿದ್ದಾರೆ. ಅವರನ್ನೂ ತೃಪ್ತಿಪಡಿಸಬೇಕಾದ ಹೊಣೆ ನಮ್ಮ ಮೇಲಿದೆ. ಅವರು ಬಿಜೆಪಿ ನಂಬಿಕೊಂಡು ಬಂದಿದ್ದಾರೆ. ಅವರಿಗೆ ನ್ಯಾಯ ಕೊಡುತ್ತೇವೆ ಎಂದರು.