ಎಲ್ಲೇ ಇದ್ದರೂ ಕನ್ನಡವೇ ಜೀವ; ಕೆನಡಾದಲ್ಲಿ ಕನ್ನಡ ಕಹಳೆ ಮೊಳಗಿಸಿದ ಚಂದ್ರ ಆರ್ಯ ಅಂತರಂಗ


Team Udayavani, May 21, 2022, 7:25 AM IST

thumb-1

ಬೆಂಗಳೂರು: “ಎಲ್ಲಾ ದರೂ ಇರು, ಎಂತಾದರೂ ಇರು, ಎಂದೆಂದಿಗೂ ನೀ ಕನ್ನಡವಾಗಿರು’ - ಹೀಗೆ ಕುವೆಂಪು ಗೀತೆಯನ್ನು ಹೇಳುತ್ತ ಕೆನಡಾ ಸಂಸತ್ತಿನಲ್ಲಿ ಎಲ್ಲರೂ ಅಚ್ಚರಿ ಪಡುವಂತೆ ಕನ್ನಡದಲ್ಲಿ ಭಾಷಣ ಮಾಡಿದ ಸಂಸದ ಚಂದ್ರ ಆರ್ಯ ಈಗ ಕನ್ನಡಿಗರ ನೆಚ್ಚಿನ ಹೀರೋ. “ಉದಯವಾಣಿ’ಯ ಜತೆಗಿನ ವಿಶೇಷ ಸಂದರ್ಶನದಲ್ಲಿ ಚಂದ್ರ ಆರ್ಯ ಅವರು ಮಾತೃಭಾಷೆಯ ಬಗೆಗಿನ ತಮ್ಮ ಅಭಿಮಾನವನ್ನು ತೆರೆದಿಟ್ಟಿದ್ದಾರೆ.

ದೂರದ ನೆಲದಲ್ಲಿ ಕನ್ನಡ ಪ್ರೀತಿ ತೋರಿದ ನಿಮ್ಮ ಅಭಿಮಾನಕ್ಕೆ ಇಡೀ ನಾಡು ತಲೆದೂಗಿದೆ. ಕೆನಡಾ ಸಂಸತ್ತಿ ನಲ್ಲಿ ಕನ್ನಡ ಕಹಳೆ ಮೊಳಗಿಸಲು ನಿಮಗೆ ಪ್ರೇರಣೆ ಏನು?
ನಾನು ಯಾವುದೇ ದೇಶಕ್ಕೆ ಕಾಲಿಟ್ಟರೂ ಅಲ್ಲಿ ಕನ್ನಡಿಗರನ್ನು, ಕನ್ನಡ ಸಂಘಟನೆಗಳನ್ನು ಹುಡುಕಿ ಹೋಗು ತ್ತಿದ್ದೆ. ಒಮಾನ್‌ನಲ್ಲಿ ಇದ್ದಾಗಲೂ ಅದನ್ನೇ ಮಾಡಿದ್ದೆ. ಕೆನಡಾದ ರಾಜ ಧಾನಿ ಒಟ್ಟಾವಾಗೆ ಬಂದಾಗಲೂ ಗೂಗಲ್‌ನಲ್ಲಿ ಕನ್ನಡ ಸಂಘಟನೆಗಳನ್ನು ಹುಡುಕಿ, ಅವರಿಗೆ ಫೋನ್‌ ಮಾಡಿ, ಕನ್ನಡದ ಚಟುವಟಿಕೆಗಳಲ್ಲಿ ಭಾಗಿಯಾದೆ. ಸಂಸತ್ತಿನಲ್ಲಿ ಕನ್ನಡದಲ್ಲಿ ಭಾಷಣ ಮಾಡುವ ಮುನ್ನ ಸ್ಪೀಕರ್‌ ಬಳಿ ಹೀಗೊಂದು ಆಲೋಚನೆಯನ್ನು ಮಂಡಿಸಿದ್ದೆ. ಅವರು ಖುಷಿಪಟ್ಟು ಒಪ್ಪಿಗೆ ನೀಡಿದರು.

ನಿಮ್ಮ ನಿತ್ಯದ ಬದುಕಿನಲ್ಲಿ ಕನ್ನಡ ಹೇಗೆ ಹಾಸುಹೊಕ್ಕಾಗಿದೆ?
ಒಟ್ಟಾವಾದಲ್ಲಿ ಕನ್ನಡ ಮಾತಾಡುವ ಕುಟುಂಬಗಳು ಹೆಚ್ಚೆಂದರೆ 150 ಸಿಗಬಹುದೇನೋ. ಉಳಿದಂತೆ ನಾನು ನನ್ನ ಹೆಂಡತಿ ಜತೆಗೆ ಕನ್ನಡ ಮಾತಾಡಬೇಕಷ್ಟೆ! ಪ್ರತೀ ವಾರ ಕನ್ನಡ ಭಾಷೆಯ ಕುರಿತಾಗಿ ಏನಾದರೂ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತ ನಾವು ಕನ್ನಡ ಪ್ರೀತಿಯನ್ನು ಜೀವಂತ ವಾಗಿರಿಸಿದ್ದೇವೆ.

ಮಾತೃಭಾಷೆಯಿಂದ ಎಷ್ಟರ ಮಟ್ಟಿಗೆ ವಂಚಿತನಾಗಿದ್ದೀರಿ ಅನ್ನಿಸುತ್ತಿದೆ?
ನನಗೆ ಆರಂಭದಿಂದಲೂ ಕನ್ನಡ ಸಾಹಿತ್ಯ ಓದುವ ಮಹದಾಸೆ ಇತ್ತು. ಆದರೆ ಶಿಕ್ಷಣದ ದಿನಗಳಲ್ಲಿ ಭಾಷೆಯನ್ನು ಕಲಿಯಲು ಸಾಧ್ಯವೇ ಆಗಲಿಲ್ಲ. ಸಂಸತ್ತಿನಲ್ಲಿ ಕುವೆಂಪು ಕವಿತೆ ವಾಚಿಸಿದೆ ಬಿಟ್ಟರೆ, ಆ ಕವಿಯ ಬಗ್ಗೆ ಹೆಚ್ಚು ನಾನು ಓದಿಕೊಂಡಿಲ್ಲ ಎಂಬ ಕೊರಗಿದೆ. ಆದರೂ ಕುವೆಂಪು ನನ್ನ ಇಷ್ಟದ ಕವಿ. ಕನ್ನಡವನ್ನು ನನ್ನೊಳಗೆ ಜೀವಂತವಾಗಿಡಲು ಸದಾ ಕಾರ್ಯೋ ನ್ಮುಖನಾಗಿದ್ದೇನೆ. 3-4 ವರ್ಷಗಳ ಹಿಂದೆ “ತಿಥಿ’ ಸಿನೆಮಾ ನೋಡಿದ್ದಾಗ, ಅದರಲ್ಲಿ ವ್ಯಕ್ತವಾದ ತುಮಕೂರು ಭಾಗದ ಭಾಷೆಯ ಸೊಗಡು ಬಹಳ ಇಷ್ಟವಾಗಿತ್ತು. ಇಡ್ಲಿ, ದೋಸೆ, ಅವಲಕ್ಕಿ- ಹೀಗೆ ಕರುನಾಡಿನ ತಿನಿಸುಗಳು ನಮ್ಮ ಮನೆಯಲ್ಲಿ ತಪ್ಪುವುದೇ ಇಲ್ಲ.

ಶಿರಾದ ಪುಟ್ಟ ಹಳ್ಳಿಯಿಂದ ಕೆನಡಾ ತನಕದ ನಿಮ್ಮ ಪಯಣದ ಬಗ್ಗೆ ಹೇಳಿ.
ಬಳ್ಳಾರಿ, ಚಿತ್ರದುರ್ಗ, ರಾಮನಗರ ಗಳಲ್ಲಿ ಶಿಕ್ಷಣ ಮುಗಿಸಿದೆ. ಧಾರವಾಡ ದಲ್ಲಿ ಎಂಬಿಎ ಪೂರೈಸಿದೆ. ಕರ್ನಾಟಕ ರಾಜ್ಯ ಸರಕಾರದ ಹಣಕಾಸು ಸಂಸ್ಥೆಗಳಲ್ಲಿ ಹುದ್ದೆಗಳನ್ನು ನಿರ್ವಹಿಸಿ, ವಿವಿಧ ದೇಶಗಳಲ್ಲಿ ಕೆಲಸ ಮಾಡಿ, ಕೆಲವು ವರ್ಷಗಳ ಹಿಂದೆ ಕೆನಡಾದ ಒಟ್ಟಾವಾಗೆ ಬಂದು ನೆಲೆ ನಿಂತೆ. ಇಲ್ಲಿ ಇನ್ವೆಸ್ಟ್‌ ಒಟ್ಟಾವಾದ ಮಂಡಳಿಯಲ್ಲಿ ಸೇವೆ ಸಲ್ಲಿಸಿ, ಮಧ್ಯಮ ವರ್ಗದ ಆರ್ಥಿಕ ಅಭಿವೃದ್ಧಿಗೆ ಕೊಡುಗೆ ನೀಡಿದ್ದೇನೆ.

ರಾಜಕೀಯ ಸೇರಿದ್ದು ಹೇಗೆ?
ರಾಜಕೀಯ ಸೇರುವ ಮೊದಲು ಇಲ್ಲಿ ನಾನು ಸಮಾಜಸೇವಕನಾಗಿದ್ದೆ. ಆ ಸಂದರ್ಭದಲ್ಲಿ ಇನ್ನೊಬ್ಬರಿಗೆ ಉಪ ದೇಶಿಸುವ ಬದಲು ನಾನೇ ಆ ಕೆಲಸ ಮಾಡಿದರೆ ಹೇಗೆ ಅಂತ ಅನ್ನಿಸಿತು. ನಾನು ರಾಜಕೀಯಕ್ಕೆ ಬರಲು ಇದೇ ಮೂಲ ಕಾರಣ. ಮಧ್ಯಮ ವರ್ಗದ ಸಶಕ್ತೀಕರಣಕ್ಕೆ ನನ್ನದೇ ಕೊಡುಗೆಗಳನ್ನು ನೀಡುವ ಆಲೋಚನೆಗಳೂ ಇದ್ದವು. ಆ ಸಂದರ್ಭದಲ್ಲಿ ಇಲ್ಲಿನ ಲಿಬರಲ್‌ ಪಾರ್ಟಿಯಲ್ಲಿ ನನಗೆ ರಾಜಕೀಯ ಪ್ರವೇಶಿಸಲು ಸೂಕ್ತ ಅವಕಾಶಗಳು ಲಭಿಸಿದವು.

 

ಟಾಪ್ ನ್ಯೂಸ್

Lok Sabha Poll 2024: ಪ್ರಧಾನಿ ಮೋದಿ ಕ್ಯಾಬಿನೆಟ್‌ ಗೆ RLJP ಮುಖಂಡ ಪರಾಸ್‌ ರಾಜೀನಾಮೆ

Lok Sabha Poll 2024: ಪ್ರಧಾನಿ ಮೋದಿ ಕ್ಯಾಬಿನೆಟ್‌ ಗೆ RLJP ಮುಖಂಡ ಪರಾಸ್‌ ರಾಜೀನಾಮೆ

ಮಗಳ ಸಾವಿಗೆ ನೀವೇ ಕಾರಣವೆಂದು ಗಂಡನ ಮನೆಗೆ ಬೆಂಕಿಯಿಟ್ಟ ಕುಟುಂಬಸ್ಥರು: ಅತ್ತೆ – ಮಾವ ಮೃತ್ಯು

ಮಗಳ ಸಾವಿಗೆ ನೀವೇ ಕಾರಣವೆಂದು ಗಂಡನ ಮನೆಗೆ ಬೆಂಕಿಯಿಟ್ಟ ಕುಟುಂಬಸ್ಥರು: ಅತ್ತೆ – ಮಾವ ಮೃತ್ಯು

4-dandeli

Dandeli: ಯಂತ್ರದಡಿ ಸಿಲುಕಿದ ಕಾರ್ಮಿಕ: ಕಾಲುಗಳಿಗೆ ಗಂಭೀರ ಗಾಯ

Americaದಲ್ಲಿ ಮುಂದುವರಿದ ಹತ್ಯೆ: ಅಮೆರಿಕದಲ್ಲಿ ಮತ್ತೊಬ್ಬ ವಿದ್ಯಾರ್ಥಿ ಶವ ಪತ್ತೆ!

Americaದಲ್ಲಿ ಮುಂದುವರಿದ ಹತ್ಯೆ: ಅಮೆರಿಕದಲ್ಲಿ ಮತ್ತೊಬ್ಬ ವಿದ್ಯಾರ್ಥಿ ಶವ ಪತ್ತೆ!

PSL ಗೆದ್ದ ಇಸ್ಲಾಮಾಬಾದ್ ಯುನೈಟೆಡ್: ಪಂದ್ಯದ ವೇಳೆ ಸಿಗರೇಟ್‌ ಸೇದಿದ ಆಟಗಾರನ ವಿಡಿಯೋ ವೈರಲ್

PSL ಗೆದ್ದ ಇಸ್ಲಾಮಾಬಾದ್ ಯುನೈಟೆಡ್: ಪಂದ್ಯದ ವೇಳೆ ಸಿಗರೇಟ್‌ ಸೇದಿದ ಆಟಗಾರನ ವಿಡಿಯೋ ವೈರಲ್

1

ಉಚಿತವಾಗಿ ಕೆಲಸಕ್ಕೆ ಬರಲು ನಿರಾಕರಿಸಿದ್ದಕ್ಕೆ ಕಾರ್ಮಿಕರ ಗುಡಿಸಲಿಗೆ ಬೆಂಕಿಯಿಟ್ಟ ವ್ಯಕ್ತಿ

3-mandya

Mandya: ದಾಖಲೆ ಇಲ್ಲದ 99.20 ಲಕ್ಷ ಜಪ್ತಿ ಮಾಡಿದ ಚುನಾವಣಾಧಿಕಾರಿಗಳು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kannada ನಾಮಫ‌ಲಕ; ತತ್‌ಕ್ಷಣ ಕ್ರಮ ಬೇಡ: ಹೈಕೋರ್ಟ್‌

Kannada ನಾಮಫ‌ಲಕ; ತತ್‌ಕ್ಷಣ ಕ್ರಮ ಬೇಡ: ಹೈಕೋರ್ಟ್‌

ಪಿಯು ಮೌಲ್ಯಮಾಪನಕ್ಕೆ ವಿರೋಧ

Second PU ಮೌಲ್ಯಮಾಪನಕ್ಕೆ ವಿರೋಧ

Lok Sabha Election 2024; ಬಿಜೆಪಿ 2ನೇ ಪಟ್ಟಿ ಇನ್ನೆರಡು ದಿನ ವಿಳಂಬ?

Lok Sabha Election 2024; ಬಿಜೆಪಿ 2ನೇ ಪಟ್ಟಿ ಇನ್ನೆರಡು ದಿನ ವಿಳಂಬ?

Congress

21 ಕಾಂಗ್ರೆಸ್‌ ಅಭ್ಯರ್ಥಿ ಪಟ್ಟಿ ಇಂದು?ದಿಲ್ಲಿಯಲ್ಲಿ ಮಂಗಳವಾರ ಪಕ್ಷದ ಚುನಾವಣ ಸಮಿತಿ ಸಭೆ

Mandya ಟಿಕೆಟ್‌ಗಾಗಿ ದಿಲ್ಲಿಯಲ್ಲಿ ಸಂಸದೆ ಸುಮಲತಾ ಠಿಕಾಣಿ

Mandya ಟಿಕೆಟ್‌ಗಾಗಿ ದಿಲ್ಲಿಯಲ್ಲಿ ಸಂಸದೆ ಸುಮಲತಾ ಠಿಕಾಣಿ

MUST WATCH

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

udayavani youtube

ಇಲ್ಲಿ ಗ್ರಾಹಕರನ್ನ ನೋಡಿಕೊಳ್ಳುವ ರೀತಿಗೆ ಎಂಥಹವರೂ ಫಿದಾ ಆಗ್ತಾರೆ

udayavani youtube

ಶ್ರೀ ಪಣಿಯಾಡಿ ಅನಂತಪದ್ಮನಾಭ ದೇವಸ್ಥಾನ,ಪಣಿಯಾಡಿ|

udayavani youtube

Rameshwaram Cafe: ಹೇಗಾಯ್ತು ಸ್ಫೋಟ? ಭಯಾನಕ ಸಿಸಿಟಿವಿ ದೃಶ್ಯ ನೋಡಿ

udayavani youtube

ಅಯೋಧ್ಯೆ ಶ್ರೀ ರಾಮನ ಸೇವೆಯಲ್ಲಿ ಉಡುಪಿಯ ಬೆಳ್ಕಳೆ ಚಂಡೆ ಬಳಗ

ಹೊಸ ಸೇರ್ಪಡೆ

5-mng

Mangaluru: ರೋಗಿಗಳಲ್ಲಿ ಭರವಸೆ ತುಂಬುವ ಕೆಲಸವಾಗಲಿ: ರೈ| ರೆ| ಡಾ| ಸಲ್ಡಾನ್ಹಾ

Lok Sabha Poll 2024: ಪ್ರಧಾನಿ ಮೋದಿ ಕ್ಯಾಬಿನೆಟ್‌ ಗೆ RLJP ಮುಖಂಡ ಪರಾಸ್‌ ರಾಜೀನಾಮೆ

Lok Sabha Poll 2024: ಪ್ರಧಾನಿ ಮೋದಿ ಕ್ಯಾಬಿನೆಟ್‌ ಗೆ RLJP ಮುಖಂಡ ಪರಾಸ್‌ ರಾಜೀನಾಮೆ

ಮಗಳ ಸಾವಿಗೆ ನೀವೇ ಕಾರಣವೆಂದು ಗಂಡನ ಮನೆಗೆ ಬೆಂಕಿಯಿಟ್ಟ ಕುಟುಂಬಸ್ಥರು: ಅತ್ತೆ – ಮಾವ ಮೃತ್ಯು

ಮಗಳ ಸಾವಿಗೆ ನೀವೇ ಕಾರಣವೆಂದು ಗಂಡನ ಮನೆಗೆ ಬೆಂಕಿಯಿಟ್ಟ ಕುಟುಂಬಸ್ಥರು: ಅತ್ತೆ – ಮಾವ ಮೃತ್ಯು

4-dandeli

Dandeli: ಯಂತ್ರದಡಿ ಸಿಲುಕಿದ ಕಾರ್ಮಿಕ: ಕಾಲುಗಳಿಗೆ ಗಂಭೀರ ಗಾಯ

Americaದಲ್ಲಿ ಮುಂದುವರಿದ ಹತ್ಯೆ: ಅಮೆರಿಕದಲ್ಲಿ ಮತ್ತೊಬ್ಬ ವಿದ್ಯಾರ್ಥಿ ಶವ ಪತ್ತೆ!

Americaದಲ್ಲಿ ಮುಂದುವರಿದ ಹತ್ಯೆ: ಅಮೆರಿಕದಲ್ಲಿ ಮತ್ತೊಬ್ಬ ವಿದ್ಯಾರ್ಥಿ ಶವ ಪತ್ತೆ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.