ಕಾಲುವೆಗೆ ಬಿದ್ದ ಕಾರು:ಒಂದೇ ಕುಟುಂಬದ ಐವರ ದುರ್ಮರಣ
Team Udayavani, Jan 15, 2019, 4:31 AM IST
ಬೆಳಗಾವಿ: ಸವದತ್ತಿಯ ಕಡಬಿ ಶಿವಾಪುರ್ ಬಳಿ ಕಾರೊಂದು ಘಟಪ್ರಭಾ ಎಡದಂಡೆ ಕಾಲುವೆಗೆ ಬಿದ್ದ ಪರಿಣಾಮ ಒಂದೇ ಕುಟುಂಬದ ಐವರು ದಾರುಣವಾಗಿ ಸಾವನ್ನಪ್ಪಿದ ಅವಘಡ ಸೋಮವಾರ ತಡರಾತ್ರಿ ನಡೆದಿದೆ.
ಮೃತರು ಕಡಬಿ ಗ್ರಾಮದ ಒಂದೇ ಕುಟುಂಬದವರಾಗಿದ್ದು, ಫಕೀರವ್ವ ಪೂಜೇರಿ(29), ಹನುಮಂತ ಪೂಜೇರಿ(60)ಲಗಮಣ್ಣ (39)ಪಾವವ್ವ(50)ಲಕ್ಷ್ಮೀ (40)ಎನ್ನುವವರಾಗಿದ್ದಾರೆ.
ಗೋಕಾಕ್ನಲ್ಲಿ ಸಂಬಂಧಿಕರೊಬ್ಬರ ಅಂತ್ಯಕ್ರಿಯೆ ಮುಗಿಸಿ ವಾಪಾಸಾಗುತ್ತಿದ್ದ ವೇಳೆ ಈ ಅವಘಡ ಸಂಭವಿಸಿದೆ.
ಕಾರು ಚಾಲಕ ಅಡಿವೆಪ್ಪ ಮಾಳಗಿ ಈಜು ಬಲ್ಲವನಾಗಿದ್ದರಿಂದ ದಡ ಸೇರಿಕೊಂಡಿದ್ದಾನೆ. ಉಳಿದ ಐವರು ಕಾರಿನಲ್ಲೇ ಪ್ರಾಣ ಕಳೆದುಕೊಂಡಿದ್ದಾರೆ.
ಮುರಗೋಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಶವಗಳನ್ನು ಮೇಲಕ್ಕೆತ್ತಲಾಗಿದೆ.